ಚಿಕ್ಕಮಗಳೂರು: ನಗರದ ಶರೀಫ್ಗಲ್ಲಿಯ ಬಾಲಕಿಯೋರ್ವಳ ಮೇಲೆ ಬೀದಿ ನಾಯಿಗಳ ಹಿಂಡೊಂದು ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದೆ. ಮುಖ ಹಾಗೂ ಕೈ, ಕಾಲಿಗೆ ನಾಯಿದಾಳಿಯಿಂದ ಗಾಯಗಳಾ ಗಿದ್ದು, ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೀದಿ ನಾಯಿಗಳನ್ನು ನಿಯಂತ್ರಿಸಲು ಕ್ರಮಕೈಗೊಳ್ಳದಿರುವ ನಗರಸಭೆಯ ನಿರ್ಲಕ್ಷ್ಯವೇ ಈ ರೀತಿ ಘಟನೆಗೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸಾರ್ವಜನಿಕ ಪ್ರದೇಶಗಳಲ್ಲಿ ಹಿಂಡು ಹಿಂಡಾಗಿ ಸುತ್ತುವ ಬೀದಿ ನಾಯಿಗಳು ಇದ್ದಕ್ಕಿದ್ದಂತೆ ಜನರ ಮೇಲೆ ಹಾಗೂ ದ್ವಿಚಕ್ರ ವಾಹನಗಳ ಮೇಲೂ ದಾಳಿ ಮಾಡುವು ದರಿಂದ ನಿಯಂತ್ರಣ ತಪ್ಪಿ ವಾಹನದಿಂದ ಬಿದ್ದು ಗಾಯಗೊಳ್ಳುವ ಘಟನೆ ಪ್ರತಿನಿತ್ಯ ನಗರದಲ್ಲಿ ಸಂಭವಿಸುತ್ತಿದೆದೆ. ಈ ಬಗ್ಗೆ ಹಲವು ಬಾರಿ ನಗರಸಭೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂ ದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದೆರಡು ವರ್ಷಗಳ ಹಿಂದೆ ನಗರಸಭೆ ವತಿಯಿಂದ ಸಾಮೂಹಿಕವಾಗಿ ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆ ನಂತರ ನಾಯಿಗಳ ಹಾವಳಿಗೆ ಯಾವುದೇ ಗಮನ ಹರಿಸಲಿಲ್ಲ ಎಂದು ದೂರಲಾಗಿದೆ.
ಪ್ರತಿದಿನ ಜಿಲ್ಲಾ ಆಸ್ಪತ್ರೆಯಲ್ಲಿ ನಾಯಿದಾಳಿಯಿಂದ ಗಾಯಗೊಂಡ ವರು ದಾಖಲಾಗುತ್ತಿದ್ದಾರೆ. ಆಸ್ಪತ್ರೆಯ ಲ್ಲಿ ರೇಬಿಸ್ ಚುಚ್ಚುಮದ್ದು ದಾಸ್ತಾನು ಇ ಲ್ಲದ ಕಾರಣ ಗಾಯಾಳುಗಳು ಅನಿವಾರ್ಯವಾಗಿ ದುಬಾರಿ ಹಣ ನೀಡಿ ಖಾಸಗಿ ಔಷಧಿ ಅಂಗಡಿಗಳಲ್ಲಿ ಚುಚ್ಚುಮದ್ದು ಖರೀದಿಸುತ್ತಿದ್ದಾರೆ. ಇದರಿಂದ ಬಡವರು ತೊಂದರೆ ಅನುಭವಿಸಬೇಕಿದೆ. ಈ ಹಿನ್ನೆಲೆಯಲ್ಲಿ ಬೀದಿ ನಾಯಿಗಳ ಹಾವಳಿಗೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನಗರದಲ್ಲಿ ಫೆಬ್ರವರಿ ೧೫ ರಿಂದ ಬೀದಿನಾಯಿಗಳನ್ನು ಹಿಡಿದು ಸಾಮೂಹಿಕ ಶಸ್ತ್ರಚಿಕಿತ್ಸೆ ನಡೆಸಲು ಕ್ರಮ ವಹಿಸಲಾಗಿದ್ದು, ಈ ಸಂಬಂಧ ಅಸ್ತ್ರ ಕಂಪನಿಗೆ ಟೆಂಡರ್ ಅನುಮೋ ದಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಿಳಿಸಿ ದ್ದಾರೆ. ನಗರದ ಎಲ್ಲಾ ವಾರ್ಡ್ಗಳಲ್ಲಿ ನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ಮಾಡಿ ಅವುಗಳನ್ನು ಮತ್ತೆ ಇರುವ ಸ್ಥಳಕ್ಕೆ ಬಿಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಇಂದಾವರದ ಲ್ಯಾಂಡ್ ಫಿಲ್ ಸೈಟ್ನಲ್ಲಿ ಶಸ್ತ್ರಚಿಕಿತ್ಸೆಗೆ ಕೊಠಡಿಗಳನ್ನು ಈಗಾಗಲೇ ಸಿದ್ದಪಡಿ ಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅಸ್ತ್ರ ಕಂಪೆನಿಗೆ ಈಗಾಗಲೇ ಕಾರ್ಯಾದೇಶವನ್ನು ನೀಡಲಾಗಿದೆ. ಯಾವುದೇ ಕಾರಣಕ್ಕೂ ಸಾರ್ವಜನಿ ಕರಿಗೆ ತೊಂದರೆಯಾಗದ ರೀತಿಯಲ್ಲಿ ನಗರಸಭೆ ಕೈಗೊಂಡಿದ್ದು, ಬೀದಿನಾ ಯಿಗಳ ಹಾವಳಿ ನಿಯಂತ್ರಣಕ್ಕೆ ರಾಜ್ಯ ಸರ್ಕಾರವೂ ಕ್ರಮವಹಿಸಿ ನಿಯಮಗಳನ್ನು ರೂಪಿಸಿದೆ. ಅದರ ಅನುಸಾರವೇ ನಗರಸಭೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ಘಟನೆಗೆ ವಿಷಾದ ವ್ಯಕ್ತಪಡಿಸಿರುವ ಅವರು, ಮುಂದೆ ಅಂತಹ ಘಟನೆ ಗಳು ಮರುಕಳಿಸದಂತೆ ಕ್ರಮ ಕೈಗೊ ಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬೀದಿನಾಯಿ ಸಂತಾನ ನಿಯಂ ತ್ರಣಕ್ಕೆ ಪ್ರತಿ ವರ್ಷ ಆಯವ್ಯಯದಲ್ಲಿ ಅಗತ್ಯವಿರುವ ಹಣಕಾಸು ಹಂಚಿಕೆ ಮಾಡಿಕೊಳ್ಳಲಾಗುವುದು. ಪ್ರತಿ ಸ್ಥಳೀಯ ಸಂಸ್ಥೆಯಲ್ಲಿ ನಿರ್ವಹಣಾ ಸಮಿತಿ ರಚಿಸಿ ಯೋಜನೆ ಮೇಲುಸ್ತುವಾರಿ ಮಾಡ ಬೇಕು ಎಂದು ಸರ್ಕಾರ ಸೂಚಿಸಿದ್ದು ಅದಕ್ಕೆ ಕ್ರಮ ಕೈಗೊಳ್ಳಲಾ ಗುವುದು ಎಂದು ತಿಳಿಸಿದ್ದಾರೆ.