News Karnataka Kannada
Saturday, May 11 2024
ಚಿಕಮಗಳೂರು

ಚಿಕ್ಕಮಗಳೂರು: ಬೈಕ್ ರ್‍ಯಾಲಿ ನಡೆಸುವ ಮೂಲಕ ಶಕ್ತಿ ಪ್ರದರ್ಶನ ನಡೆಸಿದ ಹೆಚ್.ಡಿ.ತಮ್ಮಯ್ಯ

Chikkamagaluru: H.D. Thammaiah held a bike rally in Chikkamagaluru.
Photo Credit : News Kannada

ಚಿಕ್ಕಮಗಳೂರು: ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಯಾಗಿದ್ದ ಎಚ್.ಡಿ.ತಮ್ಮಯ್ಯ ಇಂದು ತನ್ನ ಅಪಾರ ಬೆಂಬಲಿಗರೊಂದಿಗೆ ನಗರದಲ್ಲಿ ಬೈಕ್ ರ್‍ಯಾಲಿ ನಡೆಸುವ ಮೂಲಕ ಶಕ್ತಿ ಪ್ರದ ರ್ಶನ ತೋರಿದರು.

ನಗರ ಹೊರವಲಯದ ಕರ್ತಿಕೆರೆ ಯಿಂದ ಕಾಂಗ್ರೆಸ್ ಬಾವುಟದೊಂದಿಗೆ ಅಪಾರ ಸಂಖ್ಯೆಯ ಕಾರ್ಯಕರ್ತರ ಜತೆ ಬೈಕ್ ರ್‍ಯಾಲಿ ಯೊಂದಿಗೆ ತೆರದ ವಾಹನ ದಲ್ಲಿ ಎಚ್.ಡಿ.ತಮ್ಮಯ್ಯ ಮತ್ತಿ ತರೆ ಮುಖ ಂಡರು ಸಾಗಿ ಬಂದರು. ದಾರಿಯುದ್ದಕ್ಕೂ ತಮ್ಮಯ್ಯ ಅವರಿಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ ದೊರೆಯಿತು.

ಹಿರೇಮಗ ಳೂರು ವೃತ್ತದಲ್ಲಿ ಪಟಾಕಿ ಸಿಡಿಸಲಾಯಿತು. ಆಜಾದ್ ಪಾರ್ಕಿನಲ್ಲಿ ಜೆಸಿಬಿ ಮೂಲಕ ಕಾರ್ಯಕರ್ತರು ತಮ್ಮಯ್ಯ ಅವರಿಗೆ ಪುಷ್ಪವೃಷ್ಟಿ ಮಾಡಿದರು. ನಂತರ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಅಲ್ಲಿಂದ ಬೋಳರಾಮೇಶ್ವರ ದೇವಾ ಲಯ, ಕೆಎಂ ರಸ್ತೆ, ಐಜಿ ರಸ್ತೆ, ಕೆಇಬಿ ವೃತ್ತ, ಬಸವನಹಳ್ಳಿ ಮುಖ್ಯ ರಸ್ತೆ ಮಾರ್ಗವಾಗಿ ಹನುಮಂತಪ್ಪ ವೃತ್ತ, ಅಲ್ಲಿಂದ ಎಂಜಿ ರಸ್ತೆ ಮಾರ್ಗ ವಾಗಿ ಹಾದುಬಂದು ಕಾಂಗ್ರೆಸ್ ಕಚೇರಿಯಲ್ಲಿ ರ್‍ಯಾಲಿ ಸಮಾಪನಗೊಂ ಡಿತು. ನಗರದ ಪ್ರಮುಖ ವೃತ್ತದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ತಮ್ಮಯ್ಯ ಪರವಾಗಿ ಘೋಷಣೆ ಮೊಳಗಿಸಿದರು.

ಈ ನಡುವೆ ಸುದ್ದಿಗಾರರೊಂದಿಗೆ ತಮ್ಮಯ್ಯ ಮಾತನಾಡಿ, ತಮ್ಮ ವಿರುದ್ಧ ಟೀಕಿಸಿದ್ದ ಶಾಸಕ ಸಿ.ಟಿ.ರವಿ ವಿರುದ್ಧ ಹರಿಹಾಯ್ದರು. ಉಂಡಮನೆಗೆ ದ್ರೋಹ ಬಗೆ ದಿದ್ದು ನಾನಲ್ಲ. ನಾನು ಪಕ್ಷದಿಂದ ಹೊರ ಹೋಗುತ್ತಿದ್ದೇನೆ. ಮೂರು ಪಕ್ಷದಲ್ಲಿದ್ದರೂ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಅವರು ಆತ್ಮ ಮುಟ್ಟಿ ಕೊಂಡು ಹೇಳಲಿ ಮೂಡಿಗೆರೆ ಮತ್ತಿ ತರೆ ಕ್ಷೇತ್ರದಲ್ಲಿ ಯಾವ ರೀತಿ ಶಾಸಕ ರನ್ನು ನಡೆಸಿಕೊಂಡಿದ್ದಾರೆ ಎಂಬು ದನ್ನು ಆ ಭಾಗದ ಶಾಸಕರೆ ಹೇಳು ತ್ತಾರೆ ಎಂದರು.

೨೦೦೮ರಲ್ಲಿ ಯಡಿಯೂರಪ್ಪ ಹೆಸರೇಳಿಕೊಂಡು ಗೆದ್ದರು. ೨೦೧೮ ಮತ್ತೆ ಯಡಿಯೂರಪ್ಪ ಹೆಸರೇಳಿಕೊಂಡೇ ಗೆದ್ದರು. ೨೦೦೪ ರಲ್ಲಿ ಕುರುಬ ಜನಾಂಗವನ್ನು ಒಪ್ಪಿಕೊಂಡು ಗೆದ್ದಿ ದ್ದರು. ಅದನ್ನೆಲ್ಲಾ ಈಗ ಮರೆತು ದ್ರೋಹದ ಮಾತಾಡುತ್ತಾರೆ ಎಂದು ಸಿ.ಟಿ.ರವಿ ವಿರುದ್ಧ ಹರಿಹಾಯ್ದರು. ಯಡಿಯೂರಪ್ಪ, ಸಿದ್ದರಾಮಯ್ಯ ಮತ್ತು ದೇವೇಗೌಡರು ಈ ರಾಜ್ಯದ ಆಸ್ತಿ. ಈ ಮೂವರ ಬಗ್ಗೆ ಮಾತನಾ ಡಬೇಡಿ ಎಂದು ಪಕ್ಷದಲ್ಲಿದ್ದಾಗ ಕಿವಿ ಮಾತು ಹೇಳಿದ್ದೆ. ಯಡಿಯೂರಪ್ಪ ಅವರಿಂದ ಸಹಾಯ ಪಡೆದಿಲ್ಲ, ಇವರ ಹೆಸರು ಹೇಳಿಕೊಂಡು ಗೆದ್ದಿಲ್ಲ ಎಂದು ಹೇಳಲಿ ನೋಡೋಣ ಎಂದು ಸಿ.ಟಿ.ರವಿಗೆ ಸವಾಲೆಸೆದರು.

ಕತ್ತೆ ಅಡ್ಡೆ ಹೊತ್ತುಕೊಂಡು ಹೋಗುತ್ತಿದ್ದರೆ ಗೌರವಕೊಡುವುದು ಅಡ್ಡೆಗೆ ವಿನಾ ಕತ್ತೆಗಲ್ಲ ಎಂದು ಈ ಹಿಂದೆ ಯಡಿಯೂರಪ್ಪಗೆ ಹೇಳಿದ್ದರು. ಇತ್ತೀಚೆಗೆ ತಮ್ಮ ಫಾರ್ಮ್‌ಹೌಸ್ ನಲ್ಲಿ ನಡೆದ ಕಾರ್ಯ ಕರ್ತರ ಸಭೆ ಯಲ್ಲೂ ಇದೇ ಮಾತು ಪುನರುಚ್ಚರಿ ಸಿದ್ದಾರೆ. ನಾನು ಸಭೆಯಲ್ಲಿದ್ದರೆ ಅಲ್ಲೇ ಖಂಡಿಸುತ್ತಿದ್ದೆ. ಕಾರ್ಯಕರ್ತರನ್ನು ಕತ್ತೆಗೆ ಹೋಲಿಸುತ್ತಾರೆ ಎಂದರೆ ಅವರ ಮನಸ್ಥಿತಿ ನೋಡಿ ನಮ್ಮ ಮಿತ್ರರು ಆತ್ಮಾವಲೋಕನ ಮಾಡಿಕೊಳ್ಳಲಿ. ಈ ಊರಲ್ಲಿ ಪ್ರಜಾಫ್ರಭುತ್ವ ಗೆಲ್ಲಲಿ. ಈ ಜಿಲ್ಲೆಯಲ್ಲಿ ಅದೆಷ್ಟೋ ಅಧಿಕಾರಿ ಹುದ್ದೆಗಳು ಖಾಲಿ ಇವೆ. ಗುತ್ತಿಗೆದಾರರು ಊರು ಬಿಟ್ಟಿದ್ದಾರೆ. ಈ ಬಗ್ಗೆ ಸಾರ್ವಜನಿವಾಗಿ ಅವರು ಉತ್ತರ ಕೊಡಲಿ ಎಂದು ಶಾಸಕ ಸಿ.ಟಿ.ರವಿ ವಿರುದ್ಧ ಪರೋಕ್ಷ ವಾಗ್ದಾ ಳಿ ನಡೆಸಿದರು.

ನಾನು ಬಿಜೆಪಿಯಲ್ಲಿದ್ದಾಗ ನನ್ನನ್ನು ಇಬ್ಬರು ಅಗೌರವದಿಂದ ನಡೆಸಿಕೊಂಡರು. ಒಬ್ಬರು ಮಲೆನಾ ಡಿನ ಕೊಪ್ಪ ಭಾಗದವರು ಇನ್ನೊಬ್ಬರು ಮಹಾನಾಯಕರು. ನನ್ನ ನಿಷ್ಠೆ, ಪ್ರಾಮಾಣಿಕತೆ ಅವರ ಕಣ್ಣಿಗೆ ಬೀಳಲೇ ಇಲ್ಲ. ಪಕ್ಷದಲ್ಲಿ ಅಳಿಲು ಸೇವೆ ಮಾಡಿ ಕೊಂಡಿದ್ದ ನನ್ನ ಮೇಲೆ ಪಾದ ಇಡುವ ಕೆಲಸ ಮಾಡಿದರು. ಈಗ ಕಾಂಗ್ರೆಸ್ ಸಂಘಟನೆ ಮಾಡಿ ಪಕ್ಷ ಗೆಲಿಸುವುದು ನನ್ನ ಮುಂದಿನ ಗುರಿ. ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಗೆಲ್ಲಿಸುತ್ತೇವೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು