ಚಿಕ್ಕಮಗಳೂರು: ಗಾಳಿಪಟದ ದಾರಕ್ಕೆ ಸಿಲುಕಿ ಜೀವಭಯದಿಂದ ನರಳುತ್ತಿದ್ದ ಕಿಂಗ್ ಫಿಷರ್ ಹಕ್ಕಿಯೊಂದು ಸ್ಥಳೀಯರ ಸಮಯಪ್ರಜ್ಞೆಯಿಂದ ಬದುಕುಳಿಯುವಂತಾಗಿದೆ.
ನಗರದ ಗೌರಿಕಾಲುವೆ ಬಡಾವಣೆಯ ಜಮೀನೊಂದರ ಮೇಲೆ ಹಾದುಹೋಗಿರುವ ಹೈಟೆನ್ಷನ್ ವೈರ್ಗೆ ಸುತ್ತಿಕೊಂಡಿದ್ದ ಗಾಳಿಪಟದ ದಾರಕ್ಕೆ ಕಿಂಗ್ಫಿಷರ್ ಹಕ್ಕಿಯೊಂದರ ರೆಕ್ಕೆ ಸಿಕ್ಕಿಕೊಂಡಿತ್ತು. ಪಟಪಟನೆ ರೆಕ್ಕೆ ಬಡಿಯುತ್ತ ಪಾರಾಗುವ ಪ್ರಯತ್ನ ಮಾಡುತ್ತಿದ್ದರೂ ದಾರಕ್ಕೆ ಸಿಕ್ಕು ಇನ್ನಷ್ಟು ಹೆಚ್ಚಾಗಿ ಅಪಾಯ ತಂದುಕೊಂಡಿತ್ತು.
ಹಕ್ಕಿಯ ಪರದಾಟವನ್ನು ಗಮನಿಸಿದ ಸ್ಥಳೀಯ ನಿವಾಸಿ ಚಿಕ್ಕಮಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಬಿ.ಎಂ. ರವಿ ತಕ್ಷಣ ಸಮಯಪ್ರಜ್ಞೆ ಮೆರೆದು ನಗರಸಭೆ ಮಾಜಿ ಸದಸ್ಯರು, ಅನಿಮಲ್ ಕೇರ್ ಟ್ರಸ್ಟ್ ಸಂಸ್ಥೆ ಕಾರ್ಯದರ್ಶಿಗಳಾದ ರೂಬಿನ್ ಮೋಸೆಸ್ಗೆ ವಿಚಾರ ಮುಟ್ಟಿಸಿದರು. ಸ್ಥಳಕ್ಕಾಗಮಿಸಿದ ಇಬ್ಬರೂ ಸೇರಿ ಹರಸಾಹಸ ಪಟ್ಟು ಹಕ್ಕಿಯನ್ನು ಹಿಡಿದು ದಾರವನ್ನು ಬಿಡಿಸಿ ಹಕ್ಕಿಯನ್ನು ರಕ್ಷಿಸಿ ಹಾರಿಬಿಟ್ಟರು. ಅವರ ಮಾನವೀಯ ನೆರವಿಗೆ ಅಲ್ಲಿದ್ದವರು ಮೆಚ್ಚುಗೆ ಸೂಚಿಸಿದರು.