ಚಿಕ್ಕಮಗಳೂರು: ನಗರದ ದಂಟರಮಕ್ಕಿ ಕೆರೆ ಮತ್ತು ಕೋಟೆಕೆರೆಗಳ ಅಭಿವೃದ್ದಿ ಹೆಸರಿನಲ್ಲಿ ಗುತ್ತಿಗೆದಾರರ ಜೇಬು ತುಂಬಿಸುವುದು ಬಿಟ್ಟರೆ ಕೆರೆಯ ಅಭಿವೃದ್ದಿ ಮರೀ ಚಿಕೆಯಾಗಿದೆ. ದಂಟರಮಕ್ಕಿ ಕೆರೆ ಕಾಮಗಾರಿಯನ್ನು ಸ್ಥಗಿತಗೊಳಿಸದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು ಈಗಾಗಲೇ ಕೆರೆಯ ಮಧ್ಯ ಭಾಗದಲ್ಲಿ ನಡುಗುಡ್ಡೆ ನಿರ್ಮಿ ಸಿ ನೀರಿನ ಹರವನ್ನು ಕಡಿಮೆಗೊಳಿ ಸಲಾಗಿದೆ. ಈಗ ಮತ್ತೆ ಕೆರೆಯ ಅಂಗ ಳಕ್ಕೆ ಮಣ್ಣು ತುಂಬಿಸಿ ಇನ್ನಷ್ಟು ಕೆರೆಯ ಹರವನ್ನು ಕಡಿಮೆಗೊಳಿಸ ಲಾಗುತ್ತಿದೆ ಎಂದು ಆರೋಪಿಸಿದರು.
ಕೆರೆಯಲ್ಲಿ ತುಂಬಿರುವ ಹೂಳನ್ನು ತೆಗೆದು ದುರ್ಬಲಗೊಂಡಿರುವ ಏರಿ ಮತ್ತು ತೂಬುಗಳನ್ನು ದುರಸ್ಥಿಗೊಳಿ ಸಿ ನೀರಿನ ಹರವು ಹೆಚ್ಚು ಮಾಡು ವುದು ಹಾಗೂ ನೀರಿನ ಸೋರಿಕೆಯ ನ್ನು ತಡೆಗಟ್ಟುವುದಕ್ಕೆ ಕೆರೆ ಅಭಿವೃದ್ದಿ ಎನ್ನಲಾಗುತ್ತದೆ. ಆದರೀಗ ಕೆರೆಯ ಅಂಗಳಕ್ಕೆ ಮಣ್ಣು ಸುರಿದು ನೀರಿನ ಹರವನ್ನು ಕಡಿಮೆಗೊಳಿಸಲಾಗುತ್ತಿದೆ.
ಸಣ್ಣ ನೀರಾವರಿ ಇಲಾಖೆಗೆ ಸೇ ರಿದ ಕೆರೆಯನ್ನು ಕಾವೇರಿ ನೀರಾವರಿ ನಿಗಮ ಮತ್ತು ಪ್ರವಾಸೋದ್ಯಮ ಇಲಾಖೆಗೆ ಸೇರಿಸಿ ಅಭಿವೃದ್ದಿ ಹೆಸರಿ ನಲ್ಲಿ ಹಣವನ್ನು ಪೋಲು ಮಾಡಲಾ ಗುತ್ತಿದೆ ಎಂದು ದೂರಿದರು.
ಬೇಸಿಗೆಯಲ್ಲಿ ನಗರವನ್ನು ತಂಪಾ ಗಿರಿಸಲು ಕೆರೆಯಲ್ಲಿ ನೀರು ಸಂಗ್ರಹಿ ಸಬೇಕಾಗಿರುತ್ತದೆ. ಸೌಂದರ್ಯದ ಹೆಸರಿನಲ್ಲಿ ಪರಿಸರ ಹಾಳು ಮಾಡು ವುದು ಸರಿಯಲ್ಲ ಎಂದ ಅವರು ಕೆರೆಯ ಕಾಮಗಾರಿಗೆ ಈವರೆಗೆ ಖರ್ಚು ಮಾಡಿರುವ ಹಣದ ಲೆಕ್ಕ ಬಹಿರಂಗಪಡಿಸಬೇಕು ಎಂದರು.
ಒಂದು ವೇಳೆ ಕಾಮಗಾರಿ ಸ್ಥಗಿತ ಗೊಳಿಸದಿದ್ದರೆ ಕಾನೂನು ಹೋರಾ ಟ ಮುಂದುವರೆಸಲಾಗುವುದು ಎಂದರು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಎಂ.ಸಿ.ಬಸವರಾಜ್, ಪ್ರಧಾನ ಕಾರ್ಯದರ್ಶಿ ಎಂ.ಡಿ.ಮಹೇಶ್ ಉಪಸ್ಥಿತರಿದ್ದರು.
ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ, ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…
ಏರ್ ಇಂಡಿಯಾ ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್ಪ್ರೆಸ್ 85 ವಿಮಾನಗಳನ್ನು…
ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.
ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.
ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…