News Karnataka Kannada
Sunday, April 28 2024
ಚಿಕಮಗಳೂರು

ಚಿಕ್ಕಮಗಳೂರು: ದಂಟರಮಕ್ಕಿ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಳಿಸಲು ಆಗ್ರಹ

Demand for stoppage of development work on Dantaramakki Lake
Photo Credit : News Kannada

ಚಿಕ್ಕಮಗಳೂರು: ನಗರದ ದಂಟರಮಕ್ಕಿ ಕೆರೆ ಮತ್ತು ಕೋಟೆಕೆರೆಗಳ ಅಭಿವೃದ್ದಿ ಹೆಸರಿನಲ್ಲಿ ಗುತ್ತಿಗೆದಾರರ ಜೇಬು ತುಂಬಿಸುವುದು ಬಿಟ್ಟರೆ ಕೆರೆಯ ಅಭಿವೃದ್ದಿ ಮರೀ ಚಿಕೆಯಾಗಿದೆ. ದಂಟರಮಕ್ಕಿ ಕೆರೆ ಕಾಮಗಾರಿಯನ್ನು ಸ್ಥಗಿತಗೊಳಿಸದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು ಈಗಾಗಲೇ ಕೆರೆಯ ಮಧ್ಯ ಭಾಗದಲ್ಲಿ ನಡುಗುಡ್ಡೆ ನಿರ್ಮಿ ಸಿ ನೀರಿನ ಹರವನ್ನು ಕಡಿಮೆಗೊಳಿ ಸಲಾಗಿದೆ. ಈಗ ಮತ್ತೆ ಕೆರೆಯ ಅಂಗ ಳಕ್ಕೆ ಮಣ್ಣು ತುಂಬಿಸಿ ಇನ್ನಷ್ಟು ಕೆರೆಯ ಹರವನ್ನು ಕಡಿಮೆಗೊಳಿಸ ಲಾಗುತ್ತಿದೆ ಎಂದು ಆರೋಪಿಸಿದರು.

ಕೆರೆಯಲ್ಲಿ ತುಂಬಿರುವ ಹೂಳನ್ನು ತೆಗೆದು ದುರ್ಬಲಗೊಂಡಿರುವ ಏರಿ ಮತ್ತು ತೂಬುಗಳನ್ನು ದುರಸ್ಥಿಗೊಳಿ ಸಿ ನೀರಿನ ಹರವು ಹೆಚ್ಚು ಮಾಡು ವುದು ಹಾಗೂ ನೀರಿನ ಸೋರಿಕೆಯ ನ್ನು ತಡೆಗಟ್ಟುವುದಕ್ಕೆ ಕೆರೆ ಅಭಿವೃದ್ದಿ ಎನ್ನಲಾಗುತ್ತದೆ. ಆದರೀಗ ಕೆರೆಯ ಅಂಗಳಕ್ಕೆ ಮಣ್ಣು ಸುರಿದು ನೀರಿನ ಹರವನ್ನು ಕಡಿಮೆಗೊಳಿಸಲಾಗುತ್ತಿದೆ.

ಸಣ್ಣ ನೀರಾವರಿ ಇಲಾಖೆಗೆ ಸೇ ರಿದ ಕೆರೆಯನ್ನು ಕಾವೇರಿ ನೀರಾವರಿ ನಿಗಮ ಮತ್ತು ಪ್ರವಾಸೋದ್ಯಮ ಇಲಾಖೆಗೆ ಸೇರಿಸಿ ಅಭಿವೃದ್ದಿ ಹೆಸರಿ ನಲ್ಲಿ ಹಣವನ್ನು ಪೋಲು ಮಾಡಲಾ ಗುತ್ತಿದೆ ಎಂದು ದೂರಿದರು.

ಬೇಸಿಗೆಯಲ್ಲಿ ನಗರವನ್ನು ತಂಪಾ ಗಿರಿಸಲು ಕೆರೆಯಲ್ಲಿ ನೀರು ಸಂಗ್ರಹಿ ಸಬೇಕಾಗಿರುತ್ತದೆ. ಸೌಂದರ್ಯದ ಹೆಸರಿನಲ್ಲಿ ಪರಿಸರ ಹಾಳು ಮಾಡು ವುದು ಸರಿಯಲ್ಲ ಎಂದ ಅವರು ಕೆರೆಯ ಕಾಮಗಾರಿಗೆ ಈವರೆಗೆ ಖರ್ಚು ಮಾಡಿರುವ ಹಣದ ಲೆಕ್ಕ ಬಹಿರಂಗಪಡಿಸಬೇಕು ಎಂದರು.

ಒಂದು ವೇಳೆ ಕಾಮಗಾರಿ ಸ್ಥಗಿತ ಗೊಳಿಸದಿದ್ದರೆ ಕಾನೂನು ಹೋರಾ ಟ ಮುಂದುವರೆಸಲಾಗುವುದು ಎಂದರು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಎಂ.ಸಿ.ಬಸವರಾಜ್, ಪ್ರಧಾನ ಕಾರ್ಯದರ್ಶಿ ಎಂ.ಡಿ.ಮಹೇಶ್ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು