News Karnataka Kannada
Thursday, May 02 2024
ಚಿಕಮಗಳೂರು

ಚಿಕ್ಕಮಗಳೂರು: ಕಾಫಿ ಬೆಳೆಗಾರರ ಒತ್ತುವರಿ ಭೂಮಿ ಸಮಸ್ಯೆ ಪರಿಹಾರ, ಬಿಜೆಪಿ ಕೊಡುಗೆಯಲ್ಲ

Madikeri: Coffee growers in Madikeri are reeling under untimely rains
Photo Credit : News Kannada

ಚಿಕ್ಕಮಗಳೂರು : ಕಾಫಿ ಬೆಳೆಗಾರರ ಒತ್ತುವರಿ ಭೂಮಿಯನ್ನು ಗುತ್ತಿಗೆ ನೀಡುವ ತೀರ್ಮಾನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಆಗಿತ್ತು. ಅದು ಬಿಜೆಪಿ ಸರ್ಕಾರದ ಕೊಡುಗೆ ಅಲ್ಲ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಎಚ್. ಎಚ್.ದೇವರಾಜ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಂ iiಗಿದ್ದ ಸಂದರ್ಭ ದಲ್ಲಿ ಒತ್ತುವರಿ ಭೂಮಿ ಲೀಸ್‌ಗೆ ಕೊಡುತ್ತೇವೆ ಎಂದಿದ್ದರು. ಆದರೆ ಸರ್ಕಾರ ಬಿದ್ದುಹೋದ ಕಾರಣ ಅದು ಸಾಧ್ಯವಾಗಲಿಲ್ಲ. ಇದೀಗ ಬಿಜೆಪಿ ಕಂದಾಯ ಸಚಿವರನ್ನು ಕರೆಸಿ ಪ್ರಚಾ ರ ಪಡೆದುಕೊಳ್ಳುವ ಗಿಮಿಕ್ ಮಾಡುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಬಜೆಟ್ ಜನವಿರೋಧಿ ಆಗಿದೆ. ಎಲ್ಲಾ ನಿರೀಕ್ಷೆಗಳು ಹುಸಿಯಾ ಗಿದೆ. ಜನರಿಗೆ ಅನುಕೂಲವಾಗುವ ಒಂದಂಶವೂ ಅದರಲ್ಲಿಲ್ಲ. ಗೊಬ್ಬರ ಸೇರಿ ರೈತರಿಗೆ ಅಗತ್ಯವಿರುವ ಎಲ್ಲಾ ಬೆಲೆಗಳು ಗಗನಕ್ಕೇರಿದೆ. ಅದರ ಇಳಿಕೆಗೆ ಯಾವುದೇ ಕ್ರಮ ಕೈಗೊಳ್ಳದೆ ಡಿಜಿಟಲ್ ಆಪ್ ತರುವ ಘೋಷಣೆ ಮಾಡಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗುವುದಿಲ್ಲ ಎಂದರು.

ಕಾಫಿ, ಅಡಿಕೆ ಬೆಳೆಗಾರರ ಬದು ಕು ಸಂಪೂರ್ಣ ನೆಲಕಚ್ಚಿದೆ. ಪ್ರಕೃತಿ ವಿಕೋಪ, ಕಾಡುಪ್ರಾಣಿಗಳ ಕಾಟ, ಬ್ಯಾಂಕುಗಳ ಉಪಟಳ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಸಾಲ ಮನ್ನಾ, ಬಡ್ಡಿ ಮನ್ನಾ ಅವಧಿ ವಿಸ್ತರ ಣೆಯಂತಹ ನಿರೀಕ್ಷೆಗಳು ಹುಸಿ ಯಾಗಿದೆ ಎಂದರು.

ಸಾಲ ಮನ್ನಾ ಮಾಡಲು ಈಗಲೂ ಅವಕಾಶವಿದೆ ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಬೆಲೆ ನಿಯಂತ್ರಣಕ್ಕೆ ತರಲು ಕಾರ್ಯಕ್ರಮ ರೂಪಿಸಬೇಕು. ರೈತರಿಗೆ ವೈಜ್ಞಾನಿಕ ಬೆಲೆ ದೊರಕಿಸಬೇಕು. ಬೆಳೆಗಾರರ ಡೆಬಿಟ್ ರಿಕವರಿ ಕೇಸ್‌ನಲ್ಲಿರುವ ಪ್ರಕರಣ ಗಳನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು. ಡೀಮ್ಡ್ ಅರಣ್ಯವನ್ನು ಹಿಂದಕ್ಕೆ ಪಡೆದು ಭೂಮಿಯನ್ನು ಬಡವರು, ದೀನ ದಲಿತರಿಗೆ ಹಂಚ ಬೇಕು ಎಂದು ಆಗ್ರಹಿಸಿದರು.

ಬಜೆಟ್‌ನಲ್ಲಿ ರೈತರಿಗೆ ನಯಾ ಪೈಸೆ ಅನುಕೂಲವಾಗದಿರುವ ಹಿನ್ನೆಲೆ ಯಲ್ಲಿ ಶೋಭಾ ಕರಂದ್ಲಾಜೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂ ಡರುಗಳಾದ ಎಂ.ಡಿ.ರಮೇಶ್, ನಯಾಜ್ ಅಹಮದ್, ಜಯರಾಜ್ ಅರಸ್, ಹಿರೇಮಗಳೂರು ಪುಟ್ಟ ಸ್ವಾಮಿ, ರೂಬೆನ್ ಮೋಸಸ್ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು