News Karnataka Kannada
Monday, April 29 2024
ಚಿಕಮಗಳೂರು

ಚಿಕ್ಕಮಗಳೂರು: ಮತದಾನ -ವಿನೂತನ ಜಾಗೃತಿ ಅಭಿಯಾನ ನಡೆಸಿದ ಸಿ.ಇ.ಓ

CEO conducts awareness campaign on voting
Photo Credit : News Kannada

ಚಿಕ್ಕಮಗಳೂರು: ವಿಧಾನಸಭೆ ಸಾರ್ವತ್ರಿಕ ಚುನಾ ವಣೆಯನ್ನು ಯಶಸ್ವಿಗೊಳಿಸುವ ಸಲುವಾಗಿ ಜಿಲ್ಲೆಯ ಎಲ್ಲಾ ಹಾಸ್ಟೆಲ್ ವಿದ್ಯಾರ್ಥಿಗಳಿಂದ ತಮ್ಮ ತಂದೆ-ತಾಯಿ ಬಂಧು-ಬಳಗಕ್ಕೆ ಪತ್ರ ಬರೆಸಿ ಮತದಾನದ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಜಿಲ್ಲಾ ಸ್ವೀಪ್ ಸಮಿತಿ ಹಮ್ಮಿಕೊಂಡಿದೆ.

ಚಿಕ್ಕಮಗಳೂರು ತಾಲ್ಲೂಕಿನ ಬೀಕನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಏರ್ಪಡಿ ಸಲಾಗಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಸ್ವೀಪ್ ಸಮಿತಿ ನೋಡಲ್ ಅಧಿಕಾರಿಗಳೂ ಆದ ಜಿ.ಪಂ. ಸಿಇಓ ಜಿ.ಪ್ರಭು ಅವರು ಪತ್ರಬರೆಯುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಮನುಷ್ಯನ ದೇಹಕ್ಕೆ ರಕ್ತ ಎಷ್ಟು ಪ್ರಮುಖವೋ ಹಾಗೆಯೇ ಇಡೀ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಗಿರಬೇಕು ಎಂದರೆ ಅದು ಮುಕ್ತ ಚುನಾವಣೆಗಳಿಂದ ಸಾಧ್ಯ. ಈ ಕಾರಣಕ್ಕೆ ಪ್ರತಿಯೊಬ್ಬ ಮತದಾರ ಈ ಪ್ರಕ್ರಿಯೆಯಲ್ಲಿ ಭಾಗವಹಿಸು ವಂತಾಗಬೇಕಿದೆ ಎಂದು ಅವರು ತಿಳಿಸಿದರು.

ಇಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ಪತ್ರ ಬರೆಯುವ ಸಂಸ್ಕೃತಿ ಮರೆಯಾ ಗುತ್ತಿದೆ. ಆದರೂ ಪತ್ರ ಸಂದೇಶದಲ್ಲಿ ಇರುವ ಆತ್ಮೀಯತೆ ಯಾವ ಎಲೆ ಕ್ಟ್ರಾನಿಕ್ ಯಂತ್ರವೂ ನೀಡಲಾರದು. ತಮ್ಮ ಮಕ್ಕಳ ಮುದ್ದು ಅಕ್ಷರಗಳನ್ನು ಓದುವ ಪಾಲಕರು ಖಂಡಿತವಾ ಗಿಯೂ ಮಕ್ಕಳ ಮನವಿಗೆ ಸ್ಪಂದಿಸಿ ಮತದಾನದಲ್ಲಿ ಭಾಗವಹಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾ ಖೆ, ಗಿರಿಜನ ಅಭಿವೃದ್ಧಿ ಇಲಾಖೆಗಳ ೩೫ ವಸತಿ ಶಾಲೆಗಳ ೭೦ ಹಾಸ್ಟೆಲ್‌ನ ೨೪ ಸಾವಿರ ವಿದ್ಯಾರ್ಥಿಗಳು ಈ ವಿಶೇಷ ಅಭಿಯಾನದಲ್ಲಿ ಭಾಗಿಯಾ ಗಲಿದ್ದಾರೆ ಎಂದು ತಿಳಿಸಿದರು.

ಅಪ್ಪಾ, ಅಮ್ಮಾ ಈ ಬಾರಿ ಚುನಾ ವಣೆಯಲ್ಲಿ ತಪ್ಪದೇ ಮತ ಚಲಾಯಿಸಿ ಅದು ನಿಮ್ಮ ಹಕ್ಕು. ಯಾವುದೇ ಆಮಿಷಗಳಿಗೆ ಒಳಗಾಗಬೇಡಿ… ಎನ್ನು ವ ಒಕ್ಕಣೆಯೊಂದಿಗೆ ಪತ್ರ ಆರಂಭ ವಾಗುತ್ತದೆ. ಹೀಗೆ ಪ್ರತಿ ವಿದ್ಯಾರ್ಥಿ ತಮ್ಮ ಪೋಷಕರು, ಬಂಧುಗಳಿಗೆ ಪತ್ರ ಬರೆಯಲಿದ್ದಾರೆ.

ಎಲ್ಲಾ ಮತದಾರರು ಉತ್ಸಾಹ ದಿಂದ ಮತದಾನದಲ್ಲಿ ಭಾಗಿಯಾ ದರೆ ಚುನಾವಣೆ ಎಂಬ ಪ್ರಜಾಪ್ರಭು ತ್ವದ ಹಬ್ಬ ಯಶಸ್ಸಾಗಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವಿದ್ಯಾರ್ಥಿ ಯಿಂದ ತಮ್ಮ ಕುಟುಂಬದ ಕನಿಷ್ಠ ನಾಲ್ಕೈದು ಜನರಿಗೆ ಪತ್ರದ ಮೂಲಕ ಕೋರಿಕೆ ಸಲ್ಲಿಸುವುದು, ಅವರು ಮತ ಗಟ್ಟೆಗೆ ಬಂದು ಮತದಾನದಲ್ಲಿ ಸಕ್ರೀಯವಾಗಿ ಭಾಗವಹಿಸಿದರೆ ಅದೇ ದೊಡ್ಡ ವಿಜಯ ಎಂಬುದು ಸ್ವೀಪ್ ಸಮಿತಿ ಅಭಿಪ್ರಾಯವಾಗಿದೆ ಎಂದು ಹೇಳಿದರು.

ಇದಲ್ಲದೆ ಮತದಾರರು ಬಾಹ್ಯ ಶಕ್ತಿಗಳ ಒತ್ತಡಕ್ಕೆ ಒಳಗಾಗದೇ ಮುಕ್ತ ವಾಗಿ ಮತದಾನದಲ್ಲಿ ಭಾಗವಹಿಸು ವಂತಾಗಲು ಈ ಪ್ರಯತ್ನ ಪೂರಕ ವಾಗಲಿದೆ ಎನ್ನುವ ಭರವಸೆಯೂ ಇದೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಬಿ.ವಿ.ಚೈತ್ರಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಕೆ ಉಪನಿರ್ದೇಶಕ ಸೋಮಶೇ ಖರ್, ಜಿಲ್ಲಾ ಸಮನ್ವಯಾಧಿಕಾರಿ ಕೆ.ಎಸ್.ಶಿವಕುಮಾರ್, ನಿಲಯ ಪಾಲಕ ವಿಜಯಕುಮಾರ್ ಇತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು