ಬಸವನಹಳ್ಳಿ: ಚಿಕ್ಕಮಗಳೂರು-ದಂಟರಮಕ್ಕಿಯಲ್ಲಿ ಸಂಗೊಳ್ಳಿರಾಯಣ್ಣ ಪ್ರತಿಮೆ ಸ್ಥಾಪನೆಗೆ ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ ಯುಗಾದಿಯೊಳಗಾಗಿ ಪ್ರತಿಮೆ ಸ್ಥಾಪನೆ ಆಗಲಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.
ಅವರು ಬಸವನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು. ಮಾರ್ಚ್ ೨೬ ಅಥವಾ ೨೭ ರಂದು ಪ್ರತಿಮೆ ಆನಾವರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದ ಅವರು ಬಸವನಹಳ್ಳಿ ಕೆರೆಗೆ ಪ್ರವಾಸೋದ್ಯಮ ಇಲಾಖೆ ಸಚಿವನಾಗಿದ್ದ ಸಂದರ್ಭದಲ್ಲಿ ವಿಶೇಷ ಅನುದಾನ ನೀಡಿದ್ದೇನೆ. ಬೋಟಿಂಗ್, ಸೈಕ್ಲಿಂಗ್ ಏರಿಯಾ, ವಾಕಿಂಗ್ ಪಾಥ್ ಅಲ್ಲದೆ ವಿಶೇಷ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಿಸಲು ವ್ಯವಸ್ತೆ, ಪಾರ್ಕ್, ಎಲ್ಲವೂ ನಿರ್ಮಾಣವಾಗುತ್ತದೆ ಎಂದರು.
೩೭ ಕೋಟಿ ರೂ. ಅನುದಾನವಿದ್ದು. ತೆರಿಗೆ ಕಳೆದು ೨೮ ಕೋಟಿಗೂ ಹೆಚ್ಚಿನ ಕಾಮಗಾರಿ ನಡೆಯಲಿದ್ದು, ಕಾಮಗಾರಿ ಈಗಾಗಲೇ ಆರಂಭವಾಗಿದೆ ಎಂದು ಮಾಹಿತಿ ನೀಡಿದರು.
ಕೆರೆ ಹಾಳು ಬಿದ್ದಿದ್ದಾಗ ಅಂದೂ ಆರೋಪ ಮಾಡುತ್ತಿದ್ದರು. ಈಗ ಕೆರೆ ನೀರಾವರಿ ಅಚ್ಚುಕಟ್ಟು ಬಹುತೇಕ ಕ್ಷೀಣಿಸಿದೆ. ಆದರೂ ನೀರಿನ ಸಂಗ್ರಹಣೆಗೆ ಯಾವುದೇ ರೀತಿಯಲ್ಲಿ ಕೊರತೆ ಆಗದಂತೆ ಆಳಗೊಳಿಸುವ ಕೆಲಸ ಮಡಲಾಗುತ್ತಿದೆ. ಈಗಾಗಲೇ ಅಚ್ಚುಕಟ್ಟು ಪ್ರದೇಶವೆಲ್ಲ ನಿವೇಶನಗಳಾಗಿ ಪರಿವರ್ತನೆ ಆಗಿದೆ. ಕೃಷಿ ಕಡಿಮೆಯಾಗಿದೆ. ಕೆರೆಯ ಮೂಲವನ್ನು ಉಳಿಸಿಕೊಳ್ಳುತ್ತೇವೆ. ಇದನ್ನು ಯಾರೂ ಹೊತ್ತುಕೊಂಡು ಹೋಗುವುದು ಸಾದ್ಯವಿಲ್ಲ ,ಕಬಳಿಸಲೂ ಆಗುವುದಿಲ್ಲ. ಆಡಿಕೊಳ್ಳುವವರಿಗೆ ಯಾರೂ ಬಾಯಿ ಮುಚ್ಚಿಸಲು ಆಗುವುದಿಲ್ಲ ಎಂದರು. ಕೋಟೆ ಕೆರೆ ಟೆಂಡರ್ ಹಂತದಲ್ಲಿದೆ ಇನ್ನು ೩ ತಿಂಗಳ ನಂತರ ಕಾಮಗಾರಿ ಆರಂಭವಾಗುತ್ತದೆ. ೩.೪೦ ಕೋಟಿ ರೂ. ವೆಚ್ಚದಲ್ಲಿ ಕಾಯಕಲ್ಪ ಆಗಲಿದೆ ಎಂದು ತಿಳಿಸಿದರು.