News Karnataka Kannada
Monday, May 06 2024
ಚಿಕಮಗಳೂರು

ಚಿಕ್ಕಮಗಳೂರು: ಮಹಾವೀರ ಜಯಂತಿ ಅಂಗವಾಗಿ ಉಚಿತ ಕೃತಕ ಕಾಲು ಜೋಡಣಾ ಕಾರ್ಯಕ್ರಮ

Chikkamagaluru: A free artificial limb implantation programme as part of Mahavir Jayanti
Photo Credit : News Kannada

ಚಿಕ್ಕಮಗಳೂರು: ಮಹಾವೀರ್ ಜಯಂತಿ ಅಂಗವಾಗಿ ಜೈನ್ ಶ್ವೇತಾಂ ಬರ ಮಹಿಳಾ ಮಂಡಲ ವತಿಯಿಂದ ಅಂಗವಿಕಲರಿಗೆ ಉಚಿತವಗಿ ಕೃತಕ ಕಾಲು ಜೊಡಣಾ ಕಾರ್ಯಕ್ರಮವನ್ನು ಜೈನ್ ಸಮುದಾಯ ಭವನದಲ್ಲಿ  ನಡೆಯಿತು.

ಜೈನ್ ಶ್ವೇತಂಬರ ಮಹಿಳಾ ಸಂಘದ ಅಧ್ಯಕ್ಷೆ ನರಿತಾಗಾದಿಯಾ ಮಾತನಾಡಿ ಮಹಾವೀರ್ ಜಯಂತಿ ಪ್ರಯುಕ್ತ ಜೈನ್ ಶ್ವೇತಾಂಬರ ಮಹಿಳಾ ಸಂಘದಿಂದ ಉಚಿತವಾಗಿ ಕೃತಕ ಕಾಲು ಜೊಡಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಪ್ರತಿ ವರ್ಷ ಮಹಾವೀರ ಜಯಂತಿಯ ಅಂಗವಾಗಿ ವಿವಿಧ ಕಾರ್ಯಕ್ರಮವನ್ನು ನಡೆಸ ಲಾಗುತಿತ್ತು, ಈ ಬಾರಿ ವಿಶೇಷವಾಗಿ ಅಂಗವಿಕಲರಿಗೆ ಉಚಿತವಾಗಿ ಕೃತಕ ಕಾಲು ಜೊಡಣಾ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ, ಇದು ೨ ದಿನದ ಕಾರ್ಯಕ್ರಮ ಆಗಿರುವುದರಿಂದ ಎಲ್ಲರು ಇದರ ಉಪಯೋಗ ಪಡೆದುಕೊಳ್ಳು ವುದರ ಜತೆಗೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ತಿಳಿಸಿದರು.

ಜೈನ್ ಸಂಘದ ಅಧ್ಯಕ್ಷರಾದ ಕಾಂತಿಲಾಲ್ ಖಿವೇಸರ್ ಮಾತನಾಡಿ ಮಹಾವೀರ ಜನ್ಮ ಕಲ್ಯಾಣೋತ್ಸವದ ಪ್ರಯುಕ್ತ ಜೈನ್ ಸಂಘದ ಆಶ್ರಯದಲ್ಲಿ ರುವ ಮಹಿಳಾ ಮಂಡಲ ಮತ್ತು ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್ ಶಾಖೆ ಬೆಂಗಳೂರು ಅವರಿಂದ ಕೃತಕ ಕಾಲು ಜೋಡಣೆ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ, ಜನರಿಗೆ ಒಳ್ಳೆಯದಾಗಿಲಿ ಎಂಬ ನಿಟ್ಟಿನಿಂದ ಕಾಲು ರಹಿತರಿಗೆ ಉಚಿತವಾಗಿ ಕಾಲು ಜೊಡಣೆ ಮಾಡಲಾಗುತ್ತಿದ್ದು, ಜೈನ್ ಸಂಘದ ಕಾರ್ಯಕ್ರಮವು ಜನ ಸೇವೆಗೆ ಪ್ರಾಮುಖ್ಯತೆ ನೀಡಿ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದೆ ಎಂದರು.

ಜೈನ್ ದೇವಸ್ಥಾನದ ಕಾರ್ಯದರ್ಶಿ ಸಂಜಯ್ ಜೈನ್ ಮಾತನಾಡಿ ಮಹಾವೀರ ಜಯಂತಿ ಪ್ರಯುಕ್ತ ಜೈನ್ ಸಂಘದ ಅಂಗವಾದ ಶ್ವೇತಂಬರ ಮಹಿಳಾ ಸಂಘದ ವತಿಯಿಂದ ಕೃತಕ ಕಾಲು ಜೊಡಣೆ ಶಿಬಿರವನ್ನು ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಂದು ಜೀವಿಗೆ ತನ್ನ ದೇಹದ ಪ್ರತಿಯೊಂದು ಅಂಗವು ಅತಿ ಮುಖ್ಯ ವಾದದ್ದು, ಒಂದು ಅಂಗ ಇಲ್ಲವಾದರು ಜೀವನ ಸಾಗಿಸಲು ಕಷ್ಟವಾಗುತ್ತದೆ, ಇಂತಹ ಸಂದರ್ಭದಲ್ಲಿ ಮಹಿಳಾ ಸಂಘದ ವತಿಯಿಂದ ಕೃತಕ ಕಾಲು ಜೊಡಣೆ ಶಿಬಿರವನ್ನು ನಡೆಸುತ್ತಿರುವುದು ಒಂದೊಳ್ಳೆಯ ವಿಷಯವಾಗಿದೆ, ೬೦ ರಿಂದ ೭೦ ಜನ ಫಲಾನುಭವಿಗಳು ಬಂದಿದ್ದು, ಮರುದಿನವು ಶಿಬಿರ ಇರುವು ದರಿಂದ ಅರ್ಹ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊ ಳ್ಳುವಂತೆ ತಿಳಿಸಿದರು.

ಜೈನ್ ಶ್ವೇತಂಬರ ಮಹಿಳಾ ಸಂಘದ ಪೂರ್ವ ಅಧ್ಯಕ್ಷೆ ಮಂಜುಳಾ ಬನ್ಸಾಲಿ ಮಾತನಾಡಿ ಮಹಾವೀರ ಭಗವಾನ್  ಜನ್ಮ ದಿನೋತ್ಸವದ ಅಂಗವಾಗಿ, ಮಹಿಳಾ ಮಂಡಲ ವತಿಯಿಂದ ಎರಡು ದಿನದ ಶಿಬಿರವನ್ನು ನಡೆಸಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಕೃತಕ ಕಾಲು ಜೊಡಣೆಯನ್ನು ಮಾಡಲಾಗುತ್ತಿದೆ, ಅರ್ಹ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆಯಬೇಕು, ಮಹಾವೀರ ಭಗವಾನ್ ರವರ ಕೃಪೆಯಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದು, ಜನರಿಗೆ ಉಪಯೋಗವಾಗಿ ಅವರ ಜೀವನಕ್ಕೆ ಬೆಂಬಲ ಸಿಗುವಂತಾಗಲಿ ಎಂದರು.ಈ ಸಂದರ್ಭದಲ್ಲಿ ಜೈನ್ ಸಂಘದ ಕಾರ್ಯದರ್ಶಿ ರಮೇಶ್‌ಖಿವೇಸರ್, ಮುಖಂಡರುಗಳಾದ ಲಾಲ್‌ಚಂದ್ ಜೈನ್, ಮಹೇಂದ್ರ ಸಿಯಾಲ್, ದೀಪಕ್‌ದುಗಡ, ಜಸ್ವಂತ್‌ಡೋಸಿ, ಗೌತಮ್‌ಚಂದ್ ಸಿಯಾಲ್, ಮಹಿಳಾ ಸಂಘದ ಕಾರ್ಯದರ್ಶಿ ನಿತಾಖಿವೇಸರ್, ಗೀತಾಸೋನಾಲಿಕ, ದೀಪಿಕಪಿರ್ಗಲ್, ಶಾಮತಿದೇವಿ ಮತ್ತಿತತರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು