ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ಕೂತಗೋಡಿನಲ್ಲಿ ಹಸೆಮಣೆ ಏರುವ ಮುನ್ನ ಯುವತಿಯೊಬ್ಬಳು ಮತ ಚಲಾಯಿಸಾಲು ಬೂತ್ ಗೆ ಬಂದ ಘಟನೆ ನಡೆದಿದೆ.
ಗ್ರಾಮದ ಸ್ಪಂದನ ಮತ ಚಲಾಯಿಸಿದ ಯುವತಿ.
ಕಲ್ಯಾಣ ಮಂಟಪಕ್ಕೆ ತೆರಳುವ ವೇಳೆ ದಾರಿಯ ಮಧ್ಯೆ ಕೂತಗೋಡು ಮತಗಟ್ಟೆಗೆ ತೆರಳಿ ಅವರು ಮತ ಚಲಾಯಿಸಿದ್ದಾರೆ.
ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿದ ಮದುಮಗಳಿಗೆ ಚುನಾವಣಾ ಸಿಬ್ಬಂದಿ ಹಾಗೂ ಮತದಾರರು ಶುಭ ಹಾರೈಸಿದ್ದಾರೆ.
ಇನ್ನೂ, ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲೂ ಸಮೀಕ್ಷಾ ಎಂಬ ಯುವತಿ ಸಹ ಕಲ್ಯಾಣ ಮಂಟಪಕ್ಕೆ ತೆರಳುವ ಮುನ್ನ ಬೂತ್ನಲ್ಲಿ ಮೊದಲು ಮತದಾನ ಮಾಡಿ ತೆರಳಿದ್ದರು.