ಚಿಕಮಗಳೂರು: ಹಿಂದುಳಿದ ವರ್ಗಗಳ ಪ್ರವರ್ಗ ೨ಬಿ ಅಡಿಯಲ್ಲಿ ಮುಸ್ಲಿಮರಿಗಿದ್ದ ಶೇಕಡ ನಾಲ್ಕರ ಮೀಸಲಾತಿಯನ್ನು ರಾಜ್ಯ ಸರ್ಕಾರ ರದ್ದುಪಡಿಸುವುದರ ಹಿಂದೆ ಬಿಜೆಪಿಯ ಕುತಂತ್ರ ಆಡಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬೆನ್ ಮೊಸಸ್ ಆರೋಪಿಸಿದ್ದಾರೆ.
ಧಾರ್ಮಿಕ ಅಲ್ಪಸಂಖ್ಯಾತರಿಗೆ ೨ ಬಿ ಮೀಸಲಾತಿ ತೆಗೆದು ಅವರಿಗಿದ್ದ ಮೀಸಲಾತಿಯನ್ನು ಬೇರೆ ವರ್ಗದವರಿಗೆ ನೀಡಲು ಸರ್ಕಾರ ನಿರ್ಧರಿಸಿದೆ. ೨ ಬಿ ಮೀಸಲಾತಿಯಲ್ಲಿ ಲಿಂಗಾಯತರಿಗೆ ಶೇಕಡ ಏಳರಷ್ಟು ಹಾಗೂ ಒಕ್ಕಲಿಗರಿಗೆ ಶೇಕಡ ಆರರಷ್ಟು ಮೀಸಲಾತಿ ನೀಡಲಾಗುವುದೆಂದು ಮುಖ್ಯಮಂತ್ರಿ ಬೊಮ್ಮಾಯಿಯವರು ಹೇಳಿರುವ ಹೇಳಿಕೆಯ ಹಿಂದೆ ರಾಜಕೀಯ ಷಡ್ಯಂತರ ಅಡಗಿದೆ ಎಂದು ಆರೋಪಿಸಿದ್ದಾರೆ.