ಚಿಕ್ಕಮಗಳೂರು : ಜಲಪಾತ ವೀಕ್ಷಣೆಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜೀಪ್ ಆಯತಪ್ಪಿ ಕಾಫಿ ತೋಟಕ್ಕೆ ಉರುಳಿ ಹಲವರಿಗೆ ಗಾಯಗಳಾದ ಘಟನೆ ನಡೆದಿದೆ.
ಅತ್ತಿಗುಂಡಿ ಸಮೀಪದ ಸಗೀರ್ ಫಾಲ್ಸ್ ವೀಕ್ಷಣೆಗೆ ತೆರಳುತ್ತಿದ್ದ ಜೀಪ್ ಮತ್ತೊಂದು ವಾಹನವನ್ನು ಹಿಂದಿಕ್ಕಲು ಹೋಗಿ ಆಯ ತಪ್ಪಿ ಕಂದಕಕ್ಕೆ ಉರುಳಿದೆ . ಜೀಪಿನಲ್ಲಿ ಹದಿನೈದು ಕ್ಕೂ ಅಧಿಕ ಪ್ರವಾಸಿಗರು ಇದ್ದು ಹಲವರಿಗೆ ಗಾಯಗಳಾಗಿ ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ .
ಈ ಭಾಗದಲ್ಲಿ ಸಂಚರಿಸುವ ಅನೇಕ ವಾಹನಗಳು ಸೂಕ್ತ ದಾಖಲೆಗಳನ್ನು ಹೊಂದಿಲ್ಲದಿರುವುದರ ಜೊತೆಗೆ , ಮಿತಿಮೀರಿದ ಪ್ರವಾಸಿಗರನ್ನು ತುಂಬಿಸಿಕೊಂಡು ಹೊಗುತ್ತಿವೆ ಎನ್ನುವ ಗಂಭೀರ ಆರೋಪವಿದೆ.