ಸಂಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್ ಮಾಡಿದ ಸಹಾಯ ಜನ ಮರೆತಿಲ್ಲ: ಭೀಮಣ್ಣ ನಾಯ್ಕ

ಕಾರವಾರ: ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರು ಶಿರಸಿ ತಾಲೂಕಿನ ಧೋರಣಗಿರಿ, ಕಕ್ಕಳ್ಳಿ, ಶಿರಗುಣಿ ಭಾಗದಲ್ಲಿ ಪ್ರಚಾರ ಸಭೆ ನಡೆಸಿ ಇದೇ ವೇಳೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಭೀಕರ ಮಳೆಗೆ ಮನೆ ಹಿಂದಿನ ಗುಡ್ಡವೇ ಕುಸಿದು ಬಂದು ಜೊತೆಗೆ ಅಡಿಕೆ ತೋಟ, ಮನೆಗಳೂ ಹಾನಿಯಾದವು. ಕೊರೋನಾದಂತಹ ಸಂಕಷ್ಟದಲ್ಲಿ ಜನರ ಬದುಕು ಬವಣೆ ಆಗಿತ್ತು. ಶಿರಸಿಗೆ ಬಂದಿದ್ದ ಜಾತ್ರೆಯ ವರ್ತಕರೂ, ನಮ್ಮ ನಗರ ಹಾಗೂ ಗ್ರಾಮೀಣ ಭಾಗದವರೂ ಅನೇಕ ಸಮಸ್ಯೆ ಎದುರಿಸಿದರು. ಅವರಿಗೆಲ್ಲ ಕೊರೋನಾ ನಿಯಂತ್ರಣಕ್ಕೆ ಸರಕಾರ ನಿಬಂಧನೆ ಹೇರಿತು. ಆದರೆ, ಅವರಿಗೆ ಊಟದ ಸಮಸ್ಯೆ ಆದಾಗ, ಉಳಿಯಲು ಮನೆಯೇ ಇಲ್ಲದಾಗ ಕೇಳದ ಸ್ಥಿತಿ ಬಂದಿತು. ಹೊಳೆ ಮನೆ ಮುಳುಗಿಸಿತು. ತಕ್ಷಣ ಉಳಿಯಲು ತಗಡಿನ ಶೆಡ್ ಆದರೂ ಬೇಕಿತ್ತು. ಇಂಥ ವೇಳೆ ಕಾಂಗ್ರೆಸ್ ಮಾಡಿದ ಅಲ್ಪ ಸಹಾಯವನ್ನೂ ಜನ ಮರೆತಿಲ್ಲ. ಹಾಗೆಂದು ನೆನಪಿಡಲಿ ಎಂದು ನೆರವು ಮಾಡಿದ್ದಲ್ಲ ಎಂದರು.

ಕಾಂಗ್ರೆಸ್ ಎಂದರೆ ಹೈಟೆಕ್ ಪಕ್ಷವಲ್ಲ. ದೆಹಲಿಯಲ್ಲಿ ಕುಳಿತು ಕರ್ನಾಟಕ ಸರಕಾರ ನಡೆಸುವದಿಲ್ಲ. ಬದಲಿಗೆ ಜನ ಸಾಮಾನ್ಯರ ಪಕ್ಷ. ಜನರ ಸರಕಾರ ಹೇಗಿರುತ್ತದೆ ಎಂಬುದಕ್ಕೆ ಕಾಂಗ್ರೆಸ್ ಪಕ್ಷದ ಆಡಳಿತಗಳೇ ಉದಾಹರಣೆ. ಸರಕಾರದಿಂದ ಜನರಿಗೆ ಬಲ ತುಂಬಬೇಕು. ಆಗ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ ಎಂದರು. ಈ ಸಂದರ್ಭದಲ್ಲಿ ಎಂ. ಏನ್. ಭಟ್ಟ , ಜಿ. ಏನ್. ಹೆಗಡೆ ಮೂರೇಗಾರ್, ಶಶಿಕಲಾ ನಾಯ್ಕ್, ಶ್ರೀನಿವಾಸ ನಾಯ್ಕ್, ಅರುಣ ಗೌಡ, ಶ್ರೀಪಾದ ಹೆಗಡೆ ಕಡವೆ, ಕುಮಾರ ಜೋಶಿ, ನಾಗರಾಜ ಮುರ್ಡೇಶ್ವರ ಮುಂತಾದವರು ಇದ್ದರು.

Ashika S

Recent Posts

ಅನೈತಿಕ ಸಂಬಂಧ ಶಂಕೆ: ಬೀದರ್​​ನಲ್ಲಿ ಯುವಕರಿಂದ ನೈತಿಕ ಪೊಲೀಸ್​ ಗಿರಿ

ಹಿಂದೂ ಯುವಕನ ಜೊತೆ ಮುಸ್ಲಿಂ ಸಮುದಾಯದ ಮಹಿಳೆ ಕುಳಿತಿದಕ್ಕೆ ಅದೇ ಕೋಮಿನ ಯುವಕರ ಗುಂಪೊಂದು ಹಲ್ಲೆ ನಡೆಸಿ, ನೈತಿಕ ಪೊಲೀಸ್​​…

1 hour ago

ಸಂಗೊಳ್ಳಿರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ಆರೋಪಿ ಸೆರೆ

ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀಕನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ  ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ್ದ ಆರೋಪಿಯನ್ನು…

1 hour ago

ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಿಗೆ ಹುಸಿ ಬಾಂಬ್ ಬೆದರಿಕೆ

ಸಿಲಿಕಾನ್ ಸಿಟಿಯಲ್ಲಿ ಹುಸಿ ಬಾಂಬ್ ಬೆದರಿಕೆ ಮೇಲ್ ಮುಂದುವರೆದಿದ್ದು, ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಾದ ನಾಗವಾರದ ಸೇಂಟ್ ಫಿಲೋಮಿನಾ ಸೇರಿದಂತೆ…

2 hours ago

ಬೀದರ್‌: ಜಿಲ್ಲೆಯಾದ್ಯಂತ ತಂಪೆರೆದ ಮಳೆ, ಸಿಡಿಲಿಗೆ ವ್ಯಕ್ತಿ ಸಾವು

ಜಿಲ್ಲೆಯಾದ್ಯಂತ ಭಾನುವಾರ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ವಾತಾವರಣ ತಂಪಾಗಿದೆ.

2 hours ago

ಆಮ್ ಆದ್ಮಿ ಪಕ್ಷವನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ನಾನು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ

ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ಚುನಾವಣಾ…

3 hours ago

ಗೌಡರ ಕುಟುಂಬಕ್ಕೆ ಮೋಸ ಮಾಡುವುದಿಲ್ಲ: ಕೆ.ಮಂಜು

ರಾಜಕೀಯ ಕೊನೆಗಾಲದಲ್ಲಿ ನನ್ನ ಕೈ ಹಿಡಿದವರು ಎಚ್.ಡಿ.ದೇವೇಗೌಡರು, ಅವರ ಕುಟುಂಬಕ್ಕೆ ದ್ರೋಹ ಮಾಡುವ ಕೆಲಸ ಮಾಡುವುದಿಲ್ಲ ಎಂದು ಶಾಸಕ ಎ.…

4 hours ago