ಕಾರವಾರ: ಕುಮಟಾ ಕ್ಷೇತ್ರದಲ್ಲಿ ಸೂರಜ್ ನಾಯ್ಕ ಸೋನಿ ಈ ಬಾರಿ ೧೦೦ಕ್ಕೆ ೧೦೦ ಗೆಲುವು ಸಾಧಿಸುತ್ತಾರೆ. ಮೀನುಗಾರ ಸಮಾಜದ ಯುವ ಧುರೀಣ ಮಹೇಶ್ ಹರಿಕಾಂತ್ ಪಕ್ಷಕ್ಕೆ ಸೇರಿದ್ದಾರೆ. ಅವರಿಂದಾಗಿ ಪಕ್ಷಕ್ಕೆ ಆನೆಬಲ ಬಂದಿದೆ ಯುವ ಜನತಾ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಮಡಿವಾಳ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಿಪ್ಪೆ ಪ್ರಕರಣದ ಹೋರಾಟದಲ್ಲಿ ನಿಂತವರು ಸೂರಜ್ ಸೋನಿ. ಬಳಚು ಸಿಗಲು ಕಾರಣ ಜೆಡಿಎಸ್ ಹಾಗೂ ಸೂರಜ್ ಅವರ ಹೋರಾಟವೇ ಕಾರಣ. ಮಾಜಿ ಮುಖ್ಯಮಂತ್ರಿಯನ್ನ ಕುಮಾರಣ್ಣ ಎಂದು ಕರೆಯುತ್ತಾರೆ. ಹಾಗೇ ಸೂರಜ್ ಸೋನಿಯವರನ್ನ ಸೂರಜಣ್ಣ ಎಂದೇ ಕರೆಯುತ್ತಾರೆ. ಕುಮಟಾ ಕ್ಷೇತ್ರದ ಎಲ್ಲಾ ಸಮಾಜದವರು ಜೆಡಿಎಸ್ ಗೆ ಬೆಂಬಲಿಸಬೇಕು. ಕ್ರಮ ಸಂಖ್ಯೆ ೪ಕ್ಕೆ ತೆನೆ ಹೊತ್ತ ಮಹಿಳೆಗೆ ಬೆಂಬಲಿಸಬೇಕು.
ಮೀನುಗಾರ ಮುಖಂಡ ಮಹೇಶ್ ಹರಿಕಾಂತ್ ಮಾತನಾಡಿದ ಸೂರಜ್ ನಾಯ್ಕ ಸೋನಿ ಮೀನುಗಾರರಿಗಾಗಿ ಬಹಳ ಹೋರಾಟ ಮಾಡಿದ್ದಾರೆ. ಕುಮಾರಸ್ವಾಮಿಯವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದು, ಸೂರಜ್ ಸೋನಿಯವರನ್ನೇ ಶಾಸಕರನ್ನಾಗಿ ಆಯ್ಕೆ ಮಾಡುತ್ತೇವೆ. ಮೀನುಗಾರ ಸಮುದಾಯ ಅವರಿಗೆ ಬೆಂಬಲವಾಗಿದೆ. ಹಿರಿಯ ಕಾರ್ಯಕರ್ತ ಮಂಜು ಪಟಗಾರ, ಹರ್ಷ ನಾಯ್ಕ ಇದ್ದರು.