ಕುಮಟಾ: ಡಾ. ಎ.ವಿ ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್ಸಿಸಿ ನೆವೆಲ್ ವಿಭಾಗದ ಇಬ್ಬರು ಕೆಡೆಟ್ ಗಳು ರಾಷ್ಟ್ರೀಯ ಎನ್ ಸಿಸಿ ಶಿಬಿರದಲ್ಲಿ ಭಾಗವಹಿಸಿ ತರಬೇತಿ ಪಡೆದುಕೊಂಡಿದ್ದಾರೆ.
ನೆವೆಲ್ ವಿಭಾಗದ ಎಲ್ ಡಿ ಕೆಡೆಟ್ ಅರುಣ್ ಗೌಡ ಕೊಚ್ಚಿಯಲ್ಲಿ ಜು. 3 ರಿಂದ ಜು. 7 ರವರೆಗೆ ನಡೆದ ಸಮುದ್ರದ ಬಾಂಧವ್ಯ ರಾಷ್ಟ್ರೀಯ ಶಿಬಿರದಲ್ಲಿ ಭಾಗವಹಿಸಿದ್ದರು. ಈ ವೇಳೆ ಕೆಡೆಟ್ಗಳಿಗೆ ಯುದ್ಧನೌಕೆ ಕಾರ್ಯಾಚರಣೆ, ನ್ಯಾವಿಗೇಷನ್, ಸಂವಹನ, ಗನ್ರಿ, ಸೀಮನ್ಶಿಪ್ ಇತ್ಯಾದಿ ವಿಷಯಗಳ ಬಗ್ಗೆ ತರಬೇತಿ ನೀಡಲಾಗಿದೆ.
ಇನ್ನು ಮೇ 17 ರಿಂದ ಮೇ 26 ರವರೆಗೆ ಮತ್ತು ಜೂ. 8 ರಿಂದ ಜೂ. 17 ರವರೆಗೆ ಬೆಂಗಳೂರಿನಲ್ಲಿ ನಡೆದ ಎನ್ ಸಿಸಿ ರಾಜ್ಯ ಮಟ್ಟದ ಶೂಟಿಂಗ್ ಚಾಂಪಿಯನ್ಶಿಪ್ ಶಿಬಿರದ ಮಹಿಳಾ ವಿಭಾಗದಲ್ಲಿ ಎಲ್ಡಿ ಕೆಡೆಟ್ ಸಹನಾ ನಾಯಕ್ ಭಾಗವಹಿಸಿದ್ದರು. ಈ ವೇಳೆ ನಡೆದ ಶೂಟಿಂಗ್ ಚಾಂಪಿಯನ್ಶಿಪ್ ನ ಇಂಟರ್ ಗುಂಪು ಸ್ಪರ್ಧೆಯಲ್ಲಿ ಪ್ರತಿನಿಧಿಸಿದ್ದ ಸಹನಾ ಮೂರನೇ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದ್ದಾಳೆ.
ಇನ್ನು ಕೆಡೆಟ್ ಗಳ ಸಾಧನೆಗೆ ಎನ್ ಸಿಸಿ 8 ಕರ್ನಾಟಕ ನೌಕಾ ಘಟಕದ ಕಮಾಂಡರ್ ಸತ್ಯನಾಥ ಭೋಸ್ಲೆ, ಪ್ರಾಚಾರ್ಯ ಡಾ.ಎಸ್.ವಿ. ಗಾಂವ್ಕರ್ ಮತ್ತು ಎನ್ಸಿಸಿ ಅಧಿಕಾರಿ ಲೆಫ್ಟಿನೆಂಟ್ ವಿ.ಆರ್. ಶಾನಭಾಗ್ ಕೆಡೆಟ್ಗಳ ಸಾಧನೆಗೆ ಅಭಿನಂದಿಸಿದ್ದಾರೆ.