ಕಾರವಾರ: ಕೇಸರಿ ಶಾಲು, ತಿಲಕವನ್ನು ಬಿಜೆಪಿಗರೂ ಮಾತ್ರ ಹಾಕಬೇಕಾ? ನಾನು ಸಹ ಹಿಂದೂ. ನಾನು ಕೇಸರಿ ಶಾಸಲು ತೊಟ್ಟರೆ, ತಿಲಕವಿಟ್ಟರೆ ಪ್ರಶ್ನಿಸಲು ಇವರು ಯಾರು ಎಂದು ಮಾಜಿ ಶಾಸಕ ಆನಂದ ಅಸ್ನೋಟಿಕರ್ ಶಾಸಕಿ ರೂಪಾಲಿ ನಾಯ್ಕ ಅವರಿಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಬಿಜೆಪಿಯವರು ಮಾತ್ರ ಕೇಸರಿ ಶಾಲು ಹಾಕಬೇಕು. ತಿಲಕವಿಡಬೇಕು ಎಂದಿಲ್ಲ. ನನ್ನ ಧಾರ್ಮಿಕ ಆಚರಣೆಯನ್ನು ಪ್ರಶ್ನಿಸಲು ಯಾರಿಗೂ ಹಕ್ಕಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಶಾಸಕಿ ರೂಪಾಲಿ ನಾಯ್ಕ ಅವರ ಟಿಕೆಟ್ ತಪ್ಪಿಸಬೇಕು ಎನ್ನುವ ಉದ್ದೇಶವಿಲ್ಲ. ಬಿಜೆಪಿಗೆ ಶಾಸಕರಿಗೆ ಟಿಕೆಟ್ ನೀಡುವ ಅನಿವಾರ್ಯತೆ ಇದೆ. ಅವರಿಗೆ ಟಿಕೆಟ್ ಲಭಿಸಲಿ. ನಾನು ಬಿಜೆಪಿ ಟಿಕೆಟ್ಗಾಗಿ ಯಡಿಯೂರಪ್ಪರನ್ನಾಗಲಿ, ನಳಿನ್ಕುಮಾರ್ ಅವರನ್ನಾಗಲಿ, ಸಿ.ಟಿ. ರವಿಯನ್ನಾಗಲಿ ಭೇಟಿಯಾಗಿಲ್ಲ ಎಂದು ಪ್ರಮಾಣ ಮಾಡಿ ಹೇಳಬಲ್ಲೆ. ಅವರು ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಿ ಹೇಳಲು ತಯಾರಿದ್ದಾರಾ? ಎಂಬುದನ್ನು ಹೇಳಲಿ, ಶಾಸಕರಿಗಿಂದ ಮೊದಲೆ ನಾನು ಬಿಜೆಪಿ ಪಕ್ಷ ಸೇರಿ, ಕ್ಯಾಬಿನೇಟ್ ದರ್ಜೆಯ ಸಚಿವನಾಗಿ ಕರ್ತವ್ಯ ಸಲ್ಲಿಸಿದ್ದು ಅವರು ಮರೆಯಬಾರದು ಅವರು ಕಾಂಗ್ರೆಸ್ ಸೇರಿ, ಪಕ್ಷೇತರವಾಗಿ ಸೋತ ನಂತರ ಬಿಜೆಪಿ ಪಕ್ಷ ಸೇರಿದ್ದಾರೆ. ಹಿರಿಯರಿಗೆ ಗೌರವ ನೀಡುವುದು ಮೊದಲು ಕಲಿಯಲಿ ಎಂದರು.
ಶೇ. ೪೦ರ ಕಮಿಷನ ಪಡೆಯುತ್ತಾರೆ ಎನ್ನುವ ಆರೋಪ ರಾಜ್ಯಮಟ್ಟವರೆಗೆ ಇದೆ. ನಾನು ಅಧಿಕಾರದಲ್ಲಿದ್ದಾಗ 450 ಹಾಸಿಗೆಯ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗುತ್ತಿಗೆ ಕಂಪೆನಿಯವರಿಗೆ ಕಾಮಗಾರಿ ಸೂಕ್ತ ಸಂದರ್ಭದಲ್ಲಿ ಆರಂಭಿಸಲು ಅವಕಾಶ ನೀಡಿಲ್ಲ. ಗುತ್ತಿಗೆ ಕಂಪೆನಿಯವರಿಗೆ ಕೇಳಿದರೆ ಕಮಿಷನ್ ವಿಷಯದ ಬಗ್ಗೆ ಇತ್ಯರ್ಥವಾಗದ ಕಾರಣದಿಂದ ಕಾಮಗಾರಿ ಸರಿಯಾದ ಸಮಯದಲ್ಲಿ ಕಾಮಗಾರಿ ಆರಂಭಿಸಲು ನೀಡಿಲ್ಲ ಎಂದು ತಿಳಿಸಿದ್ದರು. ಈವರೆಗೆ ಆಸ್ಪತ್ರೆ ನಿರ್ಮಾಣವಾಗಬೇಕಿತ್ತು ಎಂದರು.
ನಾನು ರಾಜಕೀಯವಾಗಿ ಸಕ್ರಿಯವಾಗಿಲ್ಲ ಎಂದು ಹೇಳಲು ಇವರು ಯಾರು? ಲೋಕಸಭೆಯ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಜಿಲ್ಲೆಯ ಸುತ್ತಿದ್ದೇವೆ. ಕೊರೊನಾ ಸಂದರ್ಭದಲ್ಲಿ ತಾನು ಎಲ್ಲೂ ಕಾಣಿಸಿಕೊಂಡಿಲ್ಲ ಎಂದಿದ್ದಾರೆ. ಇವರು ಶಾಸಕರಾಗಿ ನನಗೆ ಈ ರೀತಿಯ ಪ್ರಶ್ನೆ ಮಾಡಬಾರದು. ಅಧಿಕಾರದಲ್ಲಿ ಇರುವವರು ಇರುವ. ಕೊರೊನಾ ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ ಫುಡ್ಕಿಟ್ಗಳನ್ನು ಕಾರವಾರ ಅಂಕೋಲಾ ತಾಲೂಕಿನಲ್ಲಿ ನೈಜ ಫಲಾನುಭವಿಗಳಿಗೆ ಹಂಚಿದ್ದೆನೆ. ಆದರೆ ಇವರು ಮಾತ್ರ ತಮ್ಮ ಕಾರ್ಯಕರ್ತರಿಗೆ ಹಂಚಿದ್ದಾರೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಇದ್ದಾಗ ಮೆಡಿಕಲ್ ಕಾಲೇಜಿಗಾಗಿ ೧೬೦ ಕೋಟಿ ರು. ಅನುದಾನ ತಂದಿರುವೆ ಎಂದರು.
ಜಾತ್ರೆಗೆ ೧೦ ಸಾವಿರ, ಕ್ರಿಕೆಟ್ ಮ್ಯಾಚಿಗೆ ೨೦ ಸಾವಿರ, ದಾಂಡಿಯಾಗೆ ೨೫ ಸಾವಿರ ರೂ. ನೀಡಿದರೆ ಕ್ಷೇತ್ರದ ಅಭಿವೃದ್ಧಿ ಆಗಲ್ಲ. ಬಿಜೆಪಿ ಮುಖಂಡರಲ್ಲಿ ನಾನು ವಿನಂತಿ ಮಾಡುತ್ತಿದ್ದೇವೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ರೂಪಾಲಿ ನಾಯ್ಕರಿಗೆ ನೀಡಲಿ. ಕಾರ್ಯಕರ್ತರ ಮನಸ್ಸಿನಲ್ಲಿ ಏನಿದೆ ಎನ್ನುವುದು ತಿಳಿಯುತ್ತೆ. ನಾನು ನನ್ನ ರಾಜಕೀಯ ನಿರ್ಧಾರವನ್ನು ದೀಪಾವಳಿಯ ನಂತರ ಜನರ ಮುಂದಿಡುವೆ ಎಂದರು.