ಕಾರವಾರ: ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಕಾರು ದರೋಡೆ ಮಾಡುತ್ತಿದ್ದ ಮೂವರು ಅಂತಾರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಾಸರಗೋಡಿನ ಸಿರಿಯಾದ ಮುಹಮ್ಮದ್ ಕಬೀರ್ ಮೈನುದ್ದೀನ್, ಕೋಝಿಕ್ಕೋಡ್ ಸುಭಾಸ್ ರಾಧಾಕೃಷ್ಣನ್ ಮತ್ತು ಪಾಲಕ್ಕಾಡ್ ನಿವೇಶ್ ಅಪ್ಪು ವಿಜಯಕೃಷ್ಣನ್ ಎಂದು ಗುರುತಿಸಲಾಗಿದೆ.
ಅಕ್ಟೋಬರ್ 2, 2021 ರಂದು ಕೊಲ್ಹಾಪುರದ ನಿಲೇಶ್ ಪಾಂಡುರಂಗ ನಾಯಕ್ ಅವರಿಗೆ ಸೇರಿದ ಕಾರನ್ನು ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಅಡ್ಡಗಟ್ಟಿ ಅವರ ಮೇಲೆ ಹಲ್ಲೆ ನಡೆಸಿ 2.11 ಕೋಟಿ ರೂ. ದರೋಡೆ ಮಾಡಿದ್ದರು.
ಪೊಲೀಸರು ಮೂವರನ್ನು ಬಂಧಿಸಿ, ಅವರಿಂದ ಮೂರು ಕಾರುಗಳು ಮತ್ತು 98,000 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.