ಕಾರವಾರ: ದೇವಭಾಗ ಕಡಲತೀರದಲ್ಲಿ ರವಿವಾರ ಕಡಲಾಮೆ 2 ಮೊಟ್ಟೆ ಗೂಡುಗಳು ಕಂಡು ಬಂದಿದ್ದು ಅವುಗಳನ್ನು ಸುರಕ್ಷಿತ ಸ್ಥಳದಲ್ಲಿ ಸಂರಕ್ಷಣೆ ಮಾಡಲಾಗಿದೆ.
ಸ್ಥಳಕ್ಕೆ ಕಾರವಾರ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ ಕುಮಾರ್ ಕೆ.ಸಿ. ಸಹಾಯಕ ಅರಣ್ಯ ಸಂರಕ್ಷಣಧಿಕಾರಿ ಜಯೇಶ್ ಕೆ.ಸಿ. ಸಂಶೋಧನ ವಿದ್ಯಾರ್ಥಿಗಳಾದ ಸೂರಜ್, ಶಾನ್ ನವಾಜ್, ಅಕ್ಷಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೀನುಗಾರರ ಸಹಕಾರದಿಂದ ಕಡಲಾಮೆ ಸಂರಕ್ಷಣೆ ಸಾಧ್ಯವಾಗುತ್ತಿದೆ.
ಮೊಟ್ಟೆ ಇಟ್ಟ ಬಗ್ಗೆ ಮಾಹಿತಿ ನೀಡಿದವರಿಗೆ ಇಲಾಖೆ ವತಿಯಿಂದ 1000 ರೂ. ಗೌರವ ಧನ ನೀಡಲಾಗುವುದು.ಕಡಲಾಮೆಗಳು ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿ ಸಂರಕ್ಷಣೆ ಮಾಡಲಾಗುತ್ತಿದೆ. ಸಮುದ್ರ ಆಹಾರ ಸರಪಳಿಯಲ್ಲಿ ತಮ್ಮದೇ ಸ್ಥಾನ ಹೊಂದಿವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ್ ಕುಮಾರ್ ಕೆ.ಸಿ. ಅವರು ಮಾಹಿತಿ ನೀಡಿದ್ದಾರೆ.