ಕಾರವಾರ: ಅಂಕೋಲಾ ಹುಬ್ಬಳ್ಳಿ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸಮಿತಿಗೆ ತಮ್ಮ ಅಹವಾಲುಗಳನ್ನು ಸಲ್ಲಿಸಲು ಜಿಲ್ಲೆಯ ವಿವಿಧ ತಾಲೂಕಿನಿಂದ ಜನರು ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದಾರೆ.
ಕಳೆದ ಎರಡು ದಿನಗಳಿಂದ ದೆಹಲಿಯಿಂದ ಆಗಮಿಸಿದ ಸರಕಾರದ ಕೇಂದ್ರ ತಂಡವು ಪ್ರವಾಸ ಕೈಗೊಂಡಿದೆ. ಈಗಾಗಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಡಿಸಿ ಕಚೇರಿಯಲ್ಲಿ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ, ವರದಿ ಸಂಗ್ರಹ ಮಾಡಿದ್ದಾರೆ. ಅಂಕೋಲಾ-ಯಲ್ಲಾಪುರ ಭಾಗಗಳಿಗೆ ತೆರಳಿ, ಸ್ಥಳ ಪರಿಶೀಲನೆ ಮಾಡಿದ್ದಾರೆ.
ಬುಧವಾರ ಸಾರ್ವಜನಿಕ ಅಹವಾಲು ಸಭೆ ಕೈಗೊಳ್ಳಲಾಗಿದ್ದು ಅಂಕೋಲಾ-ಹುಬ್ಬಳ್ಳಿ ಯೋಜನೆಗೆ ಬೆಂಬಲಿಸಿ ಜಿಲ್ಲೆಯ ವಿವಿಧ ತಾಲೂಕಿನಿಂದ ಜನರು ಆಗಮಿಸಿದ್ದಾರೆ. ಡಿಸಿ ಕಚೇರಿ ಆವರಣದಲ್ಲಿ ಅಹವಾಲು ಸಲ್ಲಿಸಲು ಆಗಮಿಸಿದ ಜನರಿಗೆ ಟೆಂಟ್ ಹಾಕಿ ಕೂರುವ ವ್ಯವಸ್ಥೆ ಮಾಡಿದ್ದಾರೆ. ಕೇಂದ್ರ ಸಮಿತಿಯು ಸೆ.29 ರವರೆಗೆ ಜಿಲ್ಲೆಯಲ್ಲಿ ಇರಲ್ಲಿದ್ದು ಯೋಜನೆಯ ರೂಪು-ರೇಷೆಯ ಬಗ್ಗೆ ಮಾಹಿತಿ ಪಡೆಯಲಿದೆ.