News Karnataka Kannada
Monday, April 29 2024
ಉತ್ತರಕನ್ನಡ

ಕಾರವಾರ: ಬಲೆಗೆ ಸಿಲುಕಿದ್ದ ‘ಆಲಿವ್ ರಿಡ್ಲೆ’ ಕಡಲಾಮೆಗಳ ರಕ್ಷಣೆ

Olive Ridley' sea turtles rescued
Photo Credit : By Author
ಕಾರವಾರ: ಬಲೆಗೆ ಆಲಿವ್ ರಿಡ್ಲೆ ಪ್ರಜಾತಿಯ ಎರಡು ಕಡಲಾಮೆ ಸಿಲುಕಿ ಬಲೆಯ ಸಮೇತ ದಡಕ್ಕೆ ಬಂದ ಘಟನೆ ಕಾರವಾರ ತಾಲೂಕಿನ ಮಾಜಾಳಿ ಬಳಿಯ ದಂಡೆಬಾಗದ ಬಳಿ ನಡೆದಿದ್ದು ಅರಣ್ಯಾಧಿಕಾರಿಗಳು ಸ್ಥಳೀಯರ ನೆರವಿನೊಂದಿಗೆ ಅವುಗಳನ್ನು ರಕ್ಷಿಸಿದ್ದಾರೆ.
ಸ್ಥಳೀಯ ಮೀನುಗಾರರಾದ ವಾಸು ಸೈಲ್ ಹಾಗೂ ಆನಂದ ಸೈಲ್ ಎನ್ನುವವರು ಬಲೆಯಲ್ಲಿ ಸಿಲುಕಿಕೊಂಡಿದ್ದ ಈ ಎರಡು ಕಡಲಾಮೆಗಳನ್ನು ಗಮನಿಸಿದ್ದಾರೆ. ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಲುಪಿಸಿದ ಅವರು ಸ್ಥಳೀಯ ಇತರ ಮೀನುಗಾರರ ನೆರವಿನೊಂದಿಗೆ ಆಮೆಗಳ ರಕ್ಷಣೆಗೆ ಮುಂದಾಗಿದ್ದಾರೆ.
ಯಾರೋ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆಯ ವೇಳೆ ಬಲೆಯನ್ನು ಕತ್ತರಿಸಿ ಬಿಟ್ಟಿರುವ ಸಾದ್ಯತೆ ಇದ್ದು ಅವುಗಳಿಗೆ ಈ ಎರಡು ಆಲಿವ್ ರಿಡ್ಲೆ ಪ್ರಜಾತಿಯ ಕಡಲಾಮೆಗಳು ಸಿಲುಕಿವೆ. ಬಲೆಯಿಂದ ತಪ್ಪಿಸಿಕೊಳ್ಳಲಾಗದ ಕಾರಣ ಇವು ಬಲೆಯ ಸಮೇತ ಈಜಿಕೊಂಡು ದಡ ತಲುಪಿವೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಅಧಿಕಾರಿಗಳು ಸ್ಥಳೀಯರ ನೆರವಿನೊಂದಿಗೆ ಬಲೆಯನ್ನು ಕತ್ತರಿಸಿ ಆಮೆಗಳನ್ನು ರಕ್ಷಿಸಿದ್ದಾರೆ.
ಎರಡು ಆಮೆಗಳಲ್ಲಿ ಒಂದು ಆರೋಗ್ಯವಾಗಿದ್ದು ಅದನ್ನು ಅಲ್ಲಿಂದಲೇ ಸಮುದ್ರಕ್ಕೆ ಬಿಡಲಾಯಿತು. ಇನ್ನೊಂದು ಆಮೆ ತುಸು ಅಸ್ವಸ್ಥ ಸ್ಥಿತಿಯಲ್ಲಿದ್ದು ಅದನ್ನು ಆರೈಕೆಗಾಗಿ ಅಧಿಕಾರಿಗಳು ಇರಿಸಿಕೊಂಡಿದ್ದು ಗುಣವಾದ ಬಳಿಕ ಅದನ್ನು ಅದೇ ಸ್ಥಳದಲ್ಲಿ ಸಮುದ್ರಕ್ಕೆ ಬಿಡಲಾಗುವುದು ಎಂದು ಆರ್. ಎಫ್. ಓ. ಪ್ರಮೋದ ನಾಯ್ಕ ಮಾಹಿತಿ ನೀಡಿದ್ದಾರೆ.
ಡಿಸಿಎಫ್ ಪ್ರಶಾಂತ ಕೆ. ಸಿ. ಅವರ ಮಾರ್ಗದರ್ಶನದಲ್ಲಿ ಆರ್.ಎಫ್.ಓ. ಪ್ರಮೋದ ನಾಯ್ಕ, ಕೋಸ್ಟಲ್ ಮರೈನ್ ಉಪವಲಯ ಅರಣ್ಯಾಧಿಕಾರಿಗಳಾದ ಚಂದ್ರಶೇಖರ್ ಕಟ್ಟಿಮನಿ, ಪ್ರಕಾಶ ಯರಗಟ್ಟಿ ಸೇರಿದಂತೆ ಸಿಬ್ಬಂದಿ, ಸ್ಥಳೀಯ ಮೀನುಗಾರರು ಈ ರಕ್ಷಣಾ ಕಾರ್ಯಾಚರಣೆಯಲ್ಲಿದ್ದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು