News Karnataka Kannada
Monday, April 29 2024
ಉತ್ತರಕನ್ನಡ

ಕಾರವಾರ: ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿದ ಎಂಎಲ್ಸಿ ಗಣಪತಿ ಉಳ್ವೇಕರ್

Karwar
Photo Credit : By Author

ಕಾರವಾರ: ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 110ರ ಬ್ರಾಹ್ಮಣಗಲ್ಲಿ ಹಾಗೂ ಹಳಿಯಾಳ ವಿಧಾನ ಸಭಾ ಕ್ಷೇತ್ರದ ಜೋಯಿಡಾ ಮಂಡಳದ ಪ್ರಧಾನ ಬೂತ್ ನಲ್ಲಿ ಸೋಮವಾರ ಬೂತ್ ವಿಜಯ ಅಭಿಯಾನಕ್ಕೆ ವಿಧಾನ ಪರಿಷತ್ ಶಾಸಕರಾದ ಗಣಪತಿ ಉಳ್ವೇಕರ್ ಅವರು ಚಾಲನೆ ನೀಡಿದರು.

ಬಳಿಕ ಕಾರ್ಯಕರ್ತರನದನು ಉದ್ದೇಶಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು ಕೇವಲ ಚುನಾವಣೆಯ ವೇಳೆಯಲ್ಲಿ ಮಾತ್ರ ಬಳಕೆಯಾಗುತ್ತಾರೆ ಎಂಬ ಭಾವನೆ ಯಾರಲ್ಲೂ ಬರಬಾರದು. ಹೀಗಾಗಿ ಪಕ್ಷ ನಿರಂತರವಾಗಿ ಕಾರ್ಯಕರ್ತರು ಜನಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳ ನಡುವೆ ಸಂವಹನದ ಪ್ರಕ್ರಿಯೆಯನ್ನು ನಡೆಸುತ್ತಲೇ ಇರಬೇಕು. ಬಿಜೆಪಿಯ ಕಾರ್ಯಕರ್ತರು ಪಕ್ಷದ ಬೇರುಗಳು ಇದ್ದ ಹಾಗೆ ಕಾರ್ಯಕರ್ತರು ಗಟ್ಟಿಯಾದರೆ ಪಕ್ಷ ಅಧಿಕಾರಕ್ಕೆ ಬರಬಹುದು ಪಕ್ಷದ ನಾಯಕರನ್ನು ತಯಾರಿಸುವ ನಮ್ಮ ಮೂಲ ಮಂತ್ರವೇ ಕಾರ್ಯಕರ್ತರು, ಎಲ್ಲಾ ಪಕ್ಷದ ನಾಯಕರು ಪದಾಧಿಕಾರಿಗಳು ಜನಪ್ರತಿನಿಧಿಗಳು ಕಾರ್ಯಕರ್ತರ ಶ್ರಮದ ಫಲವಾಗಿಯೇ ಇವತ್ತು ಈ ಹುದ್ದೆಗಳಿಗೆ ಬಂದು ತಲುಪಿದ್ದೇವೆ. ಹೀಗಾಗಿ ಕಾರ್ಯಕರ್ತರನ್ನು ಒನ್ ಟು ಒನ್ ಭೇಟಿಯಾಗಲು ಇದೊಂದು ಅತ್ಯಂತ ಉತ್ತಮ ಅವಕಾಶ ಎಂಬುದು ನನ್ನ ಭಾವನೆವಾಗಿದೆ ಎಂದರು.

ಇನ್ನೂ ಕೇವಲ 3 ತಿಂಗಳಲ್ಲಿ ಪಕ್ಷ ವಿಧಾನ ಸಭೆಯ ಚುನಾವಣೆಯನ್ನು ರಾಜ್ಯದಲ್ಲಿ ಎದುರಿಸಲಿದೆ ಮತ್ತೆ ಒಂದು ವರ್ಷದ ನಂತರ ಲೋಕಸಭೆಯ ಚುನಾವಣೆ ಬರಲಿದ್ದು, ಪಕ್ಷ ಈ ಎರಡು ಚುನಾವಣೆಗಳಿಗಾಗಿ ಸಿದ್ಧತೆಯನ್ನ ಈಗಿನಿಂದಲೇ ಮಾಡಿಕೊಳ್ಳುತ್ತಿದೆ. ಈ ವೇಳೆ ಹಳಿಯಾಳ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಸುನಿಲ್ ಹೆಗಡೆ, ಚಂದ್ರು ಎಸಳೆ, ಜೋಯಿಡಾ ಮಂಡಲ ಅಧ್ಯಕ್ಷರು, ಹಳಿಯಾಳ ಮಂಡಲ ಅಧ್ಯಕ್ಷ, ಕಾರವಾರ ನಗರ ಮಂಡಲ ಅಧ್ಯಕ್ಷ ನಾಗೇಶ ಕುರ್ಡೇಕರ್, ಆರತಿ ಹರಿಕಂತ್ರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಬೂತ್ ಅಧ್ಯಕ್ಷರು ಮತ್ತು ಸದಸ್ಯರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು