ಕಾರವಾರ: ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 110ರ ಬ್ರಾಹ್ಮಣಗಲ್ಲಿ ಹಾಗೂ ಹಳಿಯಾಳ ವಿಧಾನ ಸಭಾ ಕ್ಷೇತ್ರದ ಜೋಯಿಡಾ ಮಂಡಳದ ಪ್ರಧಾನ ಬೂತ್ ನಲ್ಲಿ ಸೋಮವಾರ ಬೂತ್ ವಿಜಯ ಅಭಿಯಾನಕ್ಕೆ ವಿಧಾನ ಪರಿಷತ್ ಶಾಸಕರಾದ ಗಣಪತಿ ಉಳ್ವೇಕರ್ ಅವರು ಚಾಲನೆ ನೀಡಿದರು.
ಬಳಿಕ ಕಾರ್ಯಕರ್ತರನದನು ಉದ್ದೇಶಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು ಕೇವಲ ಚುನಾವಣೆಯ ವೇಳೆಯಲ್ಲಿ ಮಾತ್ರ ಬಳಕೆಯಾಗುತ್ತಾರೆ ಎಂಬ ಭಾವನೆ ಯಾರಲ್ಲೂ ಬರಬಾರದು. ಹೀಗಾಗಿ ಪಕ್ಷ ನಿರಂತರವಾಗಿ ಕಾರ್ಯಕರ್ತರು ಜನಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳ ನಡುವೆ ಸಂವಹನದ ಪ್ರಕ್ರಿಯೆಯನ್ನು ನಡೆಸುತ್ತಲೇ ಇರಬೇಕು. ಬಿಜೆಪಿಯ ಕಾರ್ಯಕರ್ತರು ಪಕ್ಷದ ಬೇರುಗಳು ಇದ್ದ ಹಾಗೆ ಕಾರ್ಯಕರ್ತರು ಗಟ್ಟಿಯಾದರೆ ಪಕ್ಷ ಅಧಿಕಾರಕ್ಕೆ ಬರಬಹುದು ಪಕ್ಷದ ನಾಯಕರನ್ನು ತಯಾರಿಸುವ ನಮ್ಮ ಮೂಲ ಮಂತ್ರವೇ ಕಾರ್ಯಕರ್ತರು, ಎಲ್ಲಾ ಪಕ್ಷದ ನಾಯಕರು ಪದಾಧಿಕಾರಿಗಳು ಜನಪ್ರತಿನಿಧಿಗಳು ಕಾರ್ಯಕರ್ತರ ಶ್ರಮದ ಫಲವಾಗಿಯೇ ಇವತ್ತು ಈ ಹುದ್ದೆಗಳಿಗೆ ಬಂದು ತಲುಪಿದ್ದೇವೆ. ಹೀಗಾಗಿ ಕಾರ್ಯಕರ್ತರನ್ನು ಒನ್ ಟು ಒನ್ ಭೇಟಿಯಾಗಲು ಇದೊಂದು ಅತ್ಯಂತ ಉತ್ತಮ ಅವಕಾಶ ಎಂಬುದು ನನ್ನ ಭಾವನೆವಾಗಿದೆ ಎಂದರು.
ಇನ್ನೂ ಕೇವಲ 3 ತಿಂಗಳಲ್ಲಿ ಪಕ್ಷ ವಿಧಾನ ಸಭೆಯ ಚುನಾವಣೆಯನ್ನು ರಾಜ್ಯದಲ್ಲಿ ಎದುರಿಸಲಿದೆ ಮತ್ತೆ ಒಂದು ವರ್ಷದ ನಂತರ ಲೋಕಸಭೆಯ ಚುನಾವಣೆ ಬರಲಿದ್ದು, ಪಕ್ಷ ಈ ಎರಡು ಚುನಾವಣೆಗಳಿಗಾಗಿ ಸಿದ್ಧತೆಯನ್ನ ಈಗಿನಿಂದಲೇ ಮಾಡಿಕೊಳ್ಳುತ್ತಿದೆ. ಈ ವೇಳೆ ಹಳಿಯಾಳ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಸುನಿಲ್ ಹೆಗಡೆ, ಚಂದ್ರು ಎಸಳೆ, ಜೋಯಿಡಾ ಮಂಡಲ ಅಧ್ಯಕ್ಷರು, ಹಳಿಯಾಳ ಮಂಡಲ ಅಧ್ಯಕ್ಷ, ಕಾರವಾರ ನಗರ ಮಂಡಲ ಅಧ್ಯಕ್ಷ ನಾಗೇಶ ಕುರ್ಡೇಕರ್, ಆರತಿ ಹರಿಕಂತ್ರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಬೂತ್ ಅಧ್ಯಕ್ಷರು ಮತ್ತು ಸದಸ್ಯರು ಇದ್ದರು.