ಕಾರವಾರ: ನಗರದ ಸರಕಾರಿ ಬಾಲಕಿಯರ ಬಾಲಮಂದಿರದಲ್ಲಿ ಆಶ್ರಯ ಪಡೆದಿರುವ ೭ ವರ್ಷದ ಬಾಲಕಿಯ ತಂದೆಯ ಪತ್ತೆಗೆ ಸಹಕರಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಸಾರ್ವಜನಿಕರಲ್ಲಿ ಕೋರಿದ್ದಾರೆ.
ದಾಂಡೇಲಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳಿಯಾಳ ತಾಲೂಕಿನ ಗಾಂವಠಾಣಾ ನಿವಾಸಿ ಅಬ್ದುಲ್ ಗಣಿ ಮಹಮ್ಮದ್ ಮಕಾಂದಾರ ಎನ್ನುವ ಲಾರಿ ಚಾಲಕನ ೭ ವರ್ಷದ ಮಗಳಾದ ಬಿಬಿಫಾತಿಮಾ ಅಬ್ದುಲ್ ಗಣಿ ಮಕಾಂದಾರ ಈಕೆಯು ಉತ್ತರ ಕನ್ನಡದ ಮಕ್ಕಳ ಕಲ್ಯಾಣ ಸಮಿತಿ ರವರ ಆದೇಶದ ಮೇರೆಗೆ ಸರಕಾರಿ ಬಾಲಕಿಯರ ಬಾಲಮಂದಿರ ಕಾರವಾರದಲ್ಲಿ ಇದ್ದು, ಇಕೆಯ ತಾಯಿ ಮದಿನಾ ಅಬ್ದುಲ್ ಗಣಿ ಮಕಾಂದಾರ ಮೃತಪಟ್ಟಿದ್ದಾಳೆ.
ಆದರೆ ಇದುವರೆಗೂ ಮಕ್ಕಳ ಪಾಲಕರಾಗಲಿ, ಸಂಬಂಧಿಕರಾಗಲಿ ಮಗುವನ್ನು ನೋಡಲು ಬಂದಿರುವುದಿಲ್ಲ. ಇತ್ತೀಚೆಗೆ ಬಾಲಕಿಯ ತಂದೆಯುವ ಬೆಳಗಾವಿ ಜಿಲ್ಲೆಯಲ ಚಿಕ್ಕೋಡಿ ತಾಲೂಕಿನ ಗಾಲೆಗಳ್ಳಿ ಗ್ರಾಮದ ಖಾಯಂ ವಿಳಾಸವಾಗಿರುವುದು ತಿಳಿದುಬಂದಿದ್ದು, ಆ ವಿಳಾಸದಲ್ಲಿಯೂ ವ್ಯಕ್ತಿ ಕಂಡುಬಂದಿಲ್ಲ ಹಾಗಾಗಿ ಈ ವ್ಯಕ್ತಿ ಕಂಡು ಬಂದಲ್ಲಿ ದೂರವಾಣಿ ಸಂಖ್ಯೆ ೦೮೩೮೨- ೨೨೬೫೦೧ ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.