News Karnataka Kannada
Saturday, May 04 2024
ಉತ್ತರಕನ್ನಡ

ಕಾರವಾರ: ಬಾಲಕಿಯ ತಂದೆಯ ಪತ್ತೆಗೆ ಸಹಕರಿಸಿ

Karw
Photo Credit : By Author

ಕಾರವಾರ: ನಗರದ ಸರಕಾರಿ ಬಾಲಕಿಯರ ಬಾಲಮಂದಿರದಲ್ಲಿ ಆಶ್ರಯ ಪಡೆದಿರುವ ೭ ವರ್ಷದ ಬಾಲಕಿಯ ತಂದೆಯ ಪತ್ತೆಗೆ ಸಹಕರಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಸಾರ್ವಜನಿಕರಲ್ಲಿ ಕೋರಿದ್ದಾರೆ.

ದಾಂಡೇಲಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳಿಯಾಳ ತಾಲೂಕಿನ ಗಾಂವಠಾಣಾ ನಿವಾಸಿ ಅಬ್ದುಲ್ ಗಣಿ ಮಹಮ್ಮದ್ ಮಕಾಂದಾರ ಎನ್ನುವ ಲಾರಿ ಚಾಲಕನ ೭ ವರ್ಷದ ಮಗಳಾದ ಬಿಬಿಫಾತಿಮಾ ಅಬ್ದುಲ್ ಗಣಿ ಮಕಾಂದಾರ ಈಕೆಯು ಉತ್ತರ ಕನ್ನಡದ ಮಕ್ಕಳ ಕಲ್ಯಾಣ ಸಮಿತಿ ರವರ ಆದೇಶದ ಮೇರೆಗೆ ಸರಕಾರಿ ಬಾಲಕಿಯರ ಬಾಲಮಂದಿರ ಕಾರವಾರದಲ್ಲಿ ಇದ್ದು, ಇಕೆಯ ತಾಯಿ ಮದಿನಾ ಅಬ್ದುಲ್ ಗಣಿ ಮಕಾಂದಾರ ಮೃತಪಟ್ಟಿದ್ದಾಳೆ.

ಆದರೆ ಇದುವರೆಗೂ ಮಕ್ಕಳ ಪಾಲಕರಾಗಲಿ, ಸಂಬಂಧಿಕರಾಗಲಿ ಮಗುವನ್ನು ನೋಡಲು ಬಂದಿರುವುದಿಲ್ಲ. ಇತ್ತೀಚೆಗೆ ಬಾಲಕಿಯ ತಂದೆಯುವ ಬೆಳಗಾವಿ ಜಿಲ್ಲೆಯಲ ಚಿಕ್ಕೋಡಿ ತಾಲೂಕಿನ ಗಾಲೆಗಳ್ಳಿ ಗ್ರಾಮದ ಖಾಯಂ ವಿಳಾಸವಾಗಿರುವುದು ತಿಳಿದುಬಂದಿದ್ದು, ಆ ವಿಳಾಸದಲ್ಲಿಯೂ ವ್ಯಕ್ತಿ ಕಂಡುಬಂದಿಲ್ಲ ಹಾಗಾಗಿ ಈ ವ್ಯಕ್ತಿ ಕಂಡು ಬಂದಲ್ಲಿ ದೂರವಾಣಿ ಸಂಖ್ಯೆ ೦೮೩೮೨- ೨೨೬೫೦೧ ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು