News Karnataka Kannada
Tuesday, May 07 2024
ಉತ್ತರಕನ್ನಡ

ಕಾರವಾರ: ಹಳಿಯಾಳ ಪುರಸಭೆ ಮುಖ್ಯಾಧಿಕಾರಿಗಳದ್ದು ಅಮಾನವೀಯ ಕೃತ್ಯ- ಮಾಧವ ನಾಯಕ

Kar
Photo Credit : By Author

ಕಾರವಾರ: ಹಳಿಯಾಳ ಪುರಸಭೆ ಮುಖ್ಯಾಧಿಕಾರಿಗಳು ಬೀದಿನಾಯಿಗಳನ್ನು ಅರಣ್ಯಕ್ಕೆ ಕಾಡು ಪ್ರಾಣಿಗಳಿಗೆ ಆಹಾರವಾಗಲೆಂದು ರಾಷ್ಟ್ರೀಯ ಹೆದ್ದಾರಿ 63 ರ ಅರಣ್ಯ ಪ್ರದೇಶದಲ್ಲಿ ಬಿಟ್ಟಿರುವುದು ಖಂಡನೀಯ. ಇದು ಮನುಷ್ಯರು ಮಾಡುವ ಕೃತ್ಯವೇ ಅಲ್ಲ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಹೇಳಿದ್ದಾರೆ.

ಈ ಹಿಂದೆ ಕಾರವಾರ ನಗರಸಭೆಯ ಕಮಿಷನರ್ ಪ್ರಶಾಂತ್ ಎನ್ನುವವರು ಅಣಶಿ ಘಟ್ಟದಲ್ಲಿ ನಾಯಿಗಳನ್ನ ಬಿಟ್ಟಿದ್ದರು. ಬಳಿಕ ಈ ಬಗ್ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶ್ವಾನಗಳನ್ನು ವಾಪಸ್ಸು ತರಲಾಗಿತ್ತು.

ಶ್ವಾನಗಳು ಕೂಡ ನಮ್ಮಂತೆಯೇ ಜೀವಿ. ಅವುಗಳ ನಿಯಂತ್ರಣಕ್ಕೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕೆ ಹೊರತು, ಅವುಗಳನ್ನು ಕಾಡಿಗೆ ಬಿಟ್ಟು ಬರುವುದು, ಅವುಗಳೊಂದಿಗೆ ಅಮಾನವೀಯವಾಗಿ ವರ್ತಿಸುವುದು ಸರಿಯಲ್ಲ. ಹಳಿಯಾಳ ಮುಖ್ಯಾಧಿಕಾರಿಗಳು ಅಥವಾ ನಾಯಿಗಳೊಂದಿಗೆ ಅಮಾನವೀಯವಾಗಿ ವರ್ತಿಸುವವರು ‘ಚಾರ್ಲಿ’ ಸಿನಿಮಾವನ್ನೊಮ್ಮೆ ನೋಡಲಿ. ಮುಖ್ಯಮಮಂತ್ರಿ ಬಸವರಾಜ್ ಬೊಮ್ಮಾಯಿಯವರೇ ಈ ಸಿನಿಮಾ ಕಂಡು, ಶ್ವಾನ- ಮಾನವ ಸಂಬಂಧಕ್ಕಾಗಿ ಕಣ್ಣೀರಿಟ್ಟಿದ್ದರು ಹೇಳಿದ್ದಾರೆ.

ಬೀದಿನಾಯಿಗಳಿಂದ ಅನಾಹುತಗಳೂ ಆಗಿವೆ, ಇಲ್ಲ ಎಂದಿಲ್ಲ. ಆದರೆ ಥಂಡಿ ಆಗಿದೆ ಎಂದು ಮೂಗು ಕೊಯ್ದುಕೊಳ್ಳುವುದು ಸರಿಯಲ್ಲ. ಅವುಗಳಿಗೆ ಕಾಯಿಲೆಗಳು ಬಂದರೆ ಚಿಕಿತ್ಸೆ ನೀಡಬೇಕು. ಈ ನಾಯಿಗಳು ರಾತ್ರಿ ಹೊತ್ತು ಬೀದಿಯಲ್ಲಿ ಸ್ಥಳೀಯ ರನ್ನು ಹೊರತು ಪಡಿಸಿ ಅಪರಿಚಿತರು ಬಂದರೆ ಬೊಗಲಿ ಜಾಗ್ರತ ಪಡಿಸುತ್ತವೆ, ಶ್ವಾನಗಳು ರಾತ್ರಿಯಲ್ಲಿ ಅಡ್ಡಾಡುತ್ತಾ ಕಳ್ಳಕಾಕರಿಗೂ ಭಯವನ್ನುಂಟು ಮಾಡುತ್ತವೆ.ಇತ್ತೀಚಿನ ಪ್ಯಾಶನ್ ಯುಗದಲ್ಲಿ ಬಗೆ ಬಗೆಯ ಹೈಬ್ರಿಡ್ ಶ್ವಾನಗಳನ್ನು ಸಾಕುವದು ಹವ್ಯಾಸ ವಾಗಿದೆ ಆದರೆ ಈ ಶ್ವಾನಗಳು ನಮಗೆ ಕಾಯುವ ಬದಲು ನಾವೇ ಈ ಶ್ವಾನಗಳನ್ನು ಕಾಯುವ ಪರಿಸ್ಥಿತಿ ಇದೆ,ಶ್ವಾನಗಳು ಮಾನವರೊಂದಿಗೆ ಉತ್ತಮ ಸಂಬAಧ ಹೊಂದಿರುತ್ತವೆ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು