News Karnataka Kannada
Sunday, May 05 2024
ಉತ್ತರಕನ್ನಡ

ಕಾರವಾರ: ಫಾಸ್ಟ್ ಫುಡ್ ಕೇಂದ್ರದ ಮೇಲೆ ಅಧಿಕಾರಿಗಳಿಂದ ದಾಳಿ

Karwar: Fast food centre raided by officials
Photo Credit :

ಕಾರವಾರ: ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಫುಡ್ ಕೋರ್ಟ್ ನಲ್ಲಿರುವ ಚಾಟ್ಸ್, ಫಾಸ್ಟ್ ಫುಡ್ ಕೇಂದ್ರದ ಮೇಲೆ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಆಹಾರಗಳ ರುಚಿ ಹೆಚ್ಚಿಸಲು ಅಜಿನೊಮೊಟೊ ಹಾಗೂ ಆಹಾರಕ್ಕೆ ಅಪಾಯಕಾರಿ ಕಲರ್ ಬಳಕೆ ಮಾಡಲಾಗುತ್ತದೆ ಎನ್ನುವ ಆರೋಪ ಜನರಿಂದ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ರಾಜಶೇಖರ್ ನೇತೃತ್ವದಲ್ಲಿ ದಾಳಿ ನಡೆಸಿ ವಿವಿಧ ಪಾನಿಯ, ಚಾಟ್ಸ್, ಫಾಸ್ಟ್ ಫುಡ್ ಗಳನ್ನು ಗುಣಮಟ್ಟ ಪರಿಶೀಲನೆಗಳನ್ನು ಮಾದರಿಗಳನ್ನು ಸಂಗ್ರಹ ಮಾಡಿ ಲ್ಯಾಬ್ ಗೆ ಕಳುಹಿಸಲಾಗಿದೆ. ಅದರಂತೆ ರದ್ದಿ ಪೇಪರ್ ಗಳನ್ನು ಆಹಾರ ನೀಡಲು ಬಳಕೆ ಮಾಡದಂತೆ ಸೂಚನೆ ನೀಡಲಾಗಿದ್ದು ಬಳಕೆ ಮಾಡುವವರಿಗೆ ದಂಡ ಸಹ ಹಾಕಲಾಗಿದೆ.

ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ರಾಜಶೇಖರ್ ಹಾನಿಕಾರಕ ವಸ್ತುಗಳನ್ನು ಬಳಕೆ ಮಾಡಲಾಗುತ್ತಿದೆ ಎನ್ನುವ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಸದ್ಯ ಮಾದರಿ ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಲಾಗಿದೆ.  ಇಂಕ್ ಇರುವ ಪೇಪರ್ ಬಳಕೆ ಮಾಡಿ, ಆಹಾರ ಶೇಖರಣೆ ಮಾಡಿಡುವುರಿಂದ ಎಣ್ಣೆಯ ಜೊತೆಗೆ ಸೇರಿ ಕ್ಯಾನ್ಸರ್ ಕಾರಕ ಅಂಶ ದೇಹಕ್ಕೆ ಸೇರುವುದು ಅಪಾಯಕಾರಿ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕಾಗಿದೆ. ನಿಮಯ ಪಾಲನೆ ಮಾಡದ ಅಂಗಡಿಕಾರರಿಗೆ ದಂಡ ಹಾಕಿ ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು