ಕಾರವಾರ: ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಫುಡ್ ಕೋರ್ಟ್ ನಲ್ಲಿರುವ ಚಾಟ್ಸ್, ಫಾಸ್ಟ್ ಫುಡ್ ಕೇಂದ್ರದ ಮೇಲೆ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಆಹಾರಗಳ ರುಚಿ ಹೆಚ್ಚಿಸಲು ಅಜಿನೊಮೊಟೊ ಹಾಗೂ ಆಹಾರಕ್ಕೆ ಅಪಾಯಕಾರಿ ಕಲರ್ ಬಳಕೆ ಮಾಡಲಾಗುತ್ತದೆ ಎನ್ನುವ ಆರೋಪ ಜನರಿಂದ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ರಾಜಶೇಖರ್ ನೇತೃತ್ವದಲ್ಲಿ ದಾಳಿ ನಡೆಸಿ ವಿವಿಧ ಪಾನಿಯ, ಚಾಟ್ಸ್, ಫಾಸ್ಟ್ ಫುಡ್ ಗಳನ್ನು ಗುಣಮಟ್ಟ ಪರಿಶೀಲನೆಗಳನ್ನು ಮಾದರಿಗಳನ್ನು ಸಂಗ್ರಹ ಮಾಡಿ ಲ್ಯಾಬ್ ಗೆ ಕಳುಹಿಸಲಾಗಿದೆ. ಅದರಂತೆ ರದ್ದಿ ಪೇಪರ್ ಗಳನ್ನು ಆಹಾರ ನೀಡಲು ಬಳಕೆ ಮಾಡದಂತೆ ಸೂಚನೆ ನೀಡಲಾಗಿದ್ದು ಬಳಕೆ ಮಾಡುವವರಿಗೆ ದಂಡ ಸಹ ಹಾಕಲಾಗಿದೆ.
ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ರಾಜಶೇಖರ್ ಹಾನಿಕಾರಕ ವಸ್ತುಗಳನ್ನು ಬಳಕೆ ಮಾಡಲಾಗುತ್ತಿದೆ ಎನ್ನುವ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಸದ್ಯ ಮಾದರಿ ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಲಾಗಿದೆ. ಇಂಕ್ ಇರುವ ಪೇಪರ್ ಬಳಕೆ ಮಾಡಿ, ಆಹಾರ ಶೇಖರಣೆ ಮಾಡಿಡುವುರಿಂದ ಎಣ್ಣೆಯ ಜೊತೆಗೆ ಸೇರಿ ಕ್ಯಾನ್ಸರ್ ಕಾರಕ ಅಂಶ ದೇಹಕ್ಕೆ ಸೇರುವುದು ಅಪಾಯಕಾರಿ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕಾಗಿದೆ. ನಿಮಯ ಪಾಲನೆ ಮಾಡದ ಅಂಗಡಿಕಾರರಿಗೆ ದಂಡ ಹಾಕಿ ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.