ಕಾರವಾರ: ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ನರೇಗಾದಡಿ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದ್ದು, ಏಕಕಾಲದಲ್ಲಿ ಎರಡು ಹೊಸ ಕೆರೆಗಳ ನಿರ್ಮಾಣಕ್ಕೆ ನಾಗನೂರು ಪಂಚಾಯತ್ ಮುಂದಾಗಿದೆ.
ಮುಂಡಗೋಡ ತಾಲೂಕಿನ ನಾಗನೂರು ಪಂಚಾಯತ್ನ ಕಲಕೇರಿ ಹಾಗೂ ಅಂದಲಗಿ ಗ್ರಾಮದಲ್ಲಿ ಅಂದಾಜು ೩ ಲಕ್ಷ ವೆಚ್ಚದಲ್ಲಿ ಹೊಸ ಕೆರೆ ನಿರ್ಮಿಸಲಾಗುತ್ತಿದ್ದು, ಸುಮಾರು ೧೨೦ ಕೂಲಿಕಾರರು ಕಾಮಗಾರಿಯಲ್ಲಿ ತೊಡಗಿಕೊಂಡಿದ್ದಾರೆ.
೨೦೨೨-೨೩ನೇ ಸಾಲಿನಲ್ಲಿ ಒಟ್ಟು ೨೭ ಹೊಸ ಕೆರೆ ನಿರ್ಮಾಣಕ್ಕೆ ಬೇಡಿಕೆಯಿದ್ದು, ಪ್ರಸ್ತುತ ೨ ಕೆರೆಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಎಲ್ಲ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮ ವಹಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸೋಮನಿಂಗಪ್ಪಛಬ್ಬಿ ಮಾತನಾಡಿ, ನರೇಗಾದಡಿ ಕೆಲಸ ಮಾಡುವ ಕೂಲಿಕಾರರಿಗೆ ಅನುಕೂಲವಾಗುವ ಉದ್ದೇಶದಿಂದ ಕಾಮಗಾರಿ ಸ್ಥಳದಲ್ಲಿಯೇ ಹೆಸರು ನೊಂದಾಯಿಸಲಾಗುತ್ತದೆ. ಅಲ್ಲದೇ ನರೇಗಾದಡಿ ಲಭ್ಯವಿರುವ ಕಾಮಗಾರಿಗಳನ್ನು ಪಡೆಯಲು ಅಗತ್ಯವಿರುವ ದಾಖಲೆಗಳನ್ನು ಪಂಚಾಯತ್ಗೆ ಒದಗಿಸುವಂತೆ ತಿಳಿಸಲಾಗುತ್ತಿದೆ.
ಜೊತೆಗೆ ಯಾವುದೇ ಕೂಲಿಕಾರರು ದುಡಿಮೆಯಿಂದ ವಂಚಿತರಾಗದAತೆ ಕ್ರಮ ವಹಿಸಲಾಗುತ್ತಿದೆ. ಕೂಲಿಯಿಂದ ವಂಚಿತರಾದ ಕೂಲಿಕಾರರಿಗೆ ಸಕಾಲದಲ್ಲಿ ಕೆಲಸ ನೀಡಲು ಶ್ರಮಿಸಲಾಗುತ್ತಿದೆ ಎಂದರು.
ಕಲಕೇರಿ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರೇ ಇರುವುದರಿಂದ ಸುತ್ತಲಿನ ಅರಣ್ಯ ಕಾಮಗಾರಿಗಳಿಗೆ ಭಾರಿ ಬೇಡಿಕೆಯಿದೆ. ಹೀಗಾಗಿ ಕೂಲಿಕಾರರಿಗೆ ನರೇಗಾದಡಿ ಲಭ್ಯವಿರುವ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ, ಪಂಚಾಯತ್ ಕಾರ್ಯದರ್ಶಿ ಮೋಹನ್, ಬಿಎಫ್ಟಿ ಹನುಮಂತಇಡಗೋಡ, ಪಂಚಾಯತ್ ಸಿಬ್ಬಂದಿ ಸಂದೇಶ, ಮೇಟ್ ಮತ್ತಿತರರು ಇದ್ದರು.