News Karnataka Kannada
Saturday, May 04 2024
ಉತ್ತರಕನ್ನಡ

ಕಾರವಾರ: ಕೋಸ್ಟ್ ಗಾರ್ಡ್ ಕಚೇರಿ ನಿರ್ಮಾಣಕ್ಕೆ ಭೂಮಿ ಪೂಜೆ

Karwar
Photo Credit : By Author

ಕಾರವಾರ: ಅಮದಳ್ಳಿಯ ಕಂತ್ರಿವಾಡಾದಲ್ಲಿ ಕೋಸ್ಟ್ ಗಾರ್ಡ್ ಮುಖ್ಯ ಕಚೇರಿ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಭೂಮಿ ಪೂಜೆ ಸೋಮವಾರ ನೆರವೇರಿಸಿದರು.

ಕಾರವಾರ ತಾಲೂಕಿನ ಅಮದಳ್ಳಿಯಲ್ಲಿ ಕೋಸ್ಟ್ ಗಾರ್ಡ್ ಕಚೇರಿ, ವಸತಿಗೃಹ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಸೋಮವಾರ ಮಾತನಾಡಿದರು. ಜನರ, ಮೀನುಗಾರರ ರಕ್ಷಣೆಯ ಜವಾಬ್ದಾರಿ ಭಾರತೀಯ ಕೋಸ್ಟ್ ಗಾರ್ಡ್ ಮೇಲಿದೆ. ಸಮುದ್ರ ಮಾರ್ಗದ ಮೂಲಕ ನಡೆಯಬಹುದಾದ ಭಯೋತ್ಪಾದಕ ತಡೆಯಲು ಕ್ರಮಕೈಗೊಳ್ಳುತ್ತಿದೆ. 320 ಕಿ.ಮಿ. ಸಮುದ್ರ ರಕ್ಷಣೆ ಜವಾಬ್ದಾರಿ ಅವರ ಮೇಲಿದೆ. ಭಾರತದಲ್ಲಿ ರಕ್ಷಣಾ ವ್ಯವಸ್ಥೆ ಅಭಿವೃದ್ಧಿಗಾಗಿ ಶಸ್ತ್ರಾಸ್ತ್ರಗಳನ್ನು ಮೊದಲು ವಿದೇಶದಿಂದ ಖರೀದಿ ಮಾಡಬೇಕಿತ್ತು. ಈಗ ಮೇಕಿನ್ ಇಂಡಿಯಾ ಯೋಜನೆ ಮೂಲಕ ಆಮದು ಮಾಡುವುದನ್ನು ಬಿಟ್ಟು ರಫ್ತು ಮಾಡುತ್ತಿದ್ದೇವೆ. ದೇಶದಲ್ಲಿ ಈಗ 8 ಪಟ್ಟು ಹೆಚ್ಚು ವಿವಿಧ ವಸ್ತುಳ ತಯಾರಿ ಮಾಡುತ್ತಿದೆ. ಎಲ್ಲದೆ ಈಗ ಬೇಡಿಕೆ ಹೆಚ್ಚಾಗಿದೆ. ದೇಶದ ಮಿಲಿಟರಿ ವ್ಯವಸ್ಥೆ ಉತ್ತಮ ಆಗಿದ್ದರಿಂದ ಈಗ ಭಾರತದ ಗೌರವ, ಸಾಮರ್ಥ್ಯ ಎಲ್ಲಡೆ ಹೆಚ್ಚಿದೆ ಯಾವುದೇ ಅಭಿವೃದ್ಧಿಗೆ ಮುಂದಾಗಿದ್ದ ವೇಳೆ ವಿರೋಧ ಆಗುವುದು ಸಾಮಾನ್ಯ ಎಂದರು.

ಕಾರ್ಯಕ್ರದಲ್ಲಿ ಭಾಗಿಯಾಗಿದ್ದ ಕ್ಷೇತ್ರ ಶಾಸಕಿ ರೂಪಾಲಿ ನಾಯ್ಕ ಅವರು ಇಲ್ಲಿ ನಿರ್ಮಾಣವಾಗುತ್ತಿರುವ ಕೋಸ್ಟ್ ಗಾರ್ಡ್ ಕಚೇರಿಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಆದರೆ ಸ್ಥಳೀಯ ಯುವಕರಿಗೆ ಶೇ.75ರಷ್ಟು ನೌಕರಿ ದೊರಕಿಸಿಕೊಡುವಲ್ಲಿ ಸಹಕರಿಸಬೇಕು ಎಂದು ಒತ್ತಾಯಿಸಿದರು. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಇದು ಹರ್ಷದ ಸಂಗತಿ. ಯಾರಿಗಾದರೂ ವಸತಿ ವ್ಯವಸ್ಥೆ ಮುಖ್ಯ. ಕೋಸ್ಟ್ ಗಾರ್ಡ್ ಗೆ ಕೇಂದ್ರ ಸರಕಾರ ಪ್ರಾಮುಖ್ಯತೆ ನೀಡಿದೆ. ಸಮುದ್ರದ ಗಡಿ, ಮೀನುಗಾರರಿಗೆ ರಕ್ಷಣೆ ಕೋಸ್ಟ್ ಗಾರ್ಡ್ ಪಾತ್ರ ಮುಖ್ಯ. ಜಿಲ್ಲೆಯಲ್ಲಿ ಅಣು ಸ್ಥಾವರ, ನೌಕಾನೆಲೆ ಸೂಕ್ಷ್ಯ ಯೋಜನೆ ಇದೆ. ಈಗ ಹೆಚ್ಚಿನ ಪ್ರಮಾಣದಲ್ಲಿ ರಕ್ಷಣೆ ಬೇಕು. ಆದರೆ ಅನೇಕ ಜನ ನಿರಾಶ್ರಿತವಾಗಿದ್ದಾರೆ. ನಮ್ಮವರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಕೋಸ್ಟ್ ಗಾರ್ಡ್ ಇನ್ಸ್ ಪೆಕ್ಟರ್ ಜರಲ್ ಮನೋಜ್ ವಿ. ಬಾಡಕರ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕದಲ್ಲಿ ಕೋಸ್ಟ್ ಗಾರ್ಡ್ ಕಚೇರಿ ನಿರ್ಮಾಣಕ್ಕೆ ಈಗ ಅಮದಳ್ಳಿಯಲ್ಲಿನ ಸ್ಥಳ ಆಯ್ಕೆ ಮಾಡಿಕೊಳ್ಳಲಾಗಿದೆ. ಮೊದಲು ಕಡಲತೀರದಲ್ಲಿ ನಿರ್ಮಾಣದ ಯೋಜನೆ ಇತ್ತು. ಜನರಿಗಾಗಿಯೇ ಯೋಜನೆ ಜಾರಿ ಮಾಡುವುದಾಗಿದ್ದು ಅಲ್ಲಿ ಕಚೇರಿ ನಿರ್ಮಾಣಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಮದಳ್ಳಿಯಲ್ಲಿ ಕಚೇರಿ ನಿರ್ಮಾಣ ಮಾಡಲಾಗುತ್ತಿದೆ. ಮೀನುಗಾರರ ರಕ್ಷಣೆ, ಇತರೆ ರಕ್ಷಣಾ ಕಾರ್ಯಕ್ಕಾಗಿ, ಜನರ ಸಹಾಯಕ್ಕಾಗಿ ಕಚೇರಿ ನಿರ್ಮಾಣ ಮಾಡಲಾಗುತ್ತಿದೆ. ಕಳೆದ 12 ವರ್ಷಗಳಿಂದ ಖಾಸಗಿ ಹೋಟೆಲ್ ನಲ್ಲಿ ಕಚೇರಿ ನಡೆಸಲಾಗುತ್ತಿದೆ. ಕೇಂದ್ರ ಸರಕಾರವೇ ಬಾಡಿಗೆ ಪಾವತಿ ಮಾಡುತ್ತಿದೆ. ಸದ್ಯ ಮಾರುಕಟ್ಟೆ ದರದಲ್ಲೇ ಅಮದಳ್ಳಿಯಲ್ಲಿ ಭೂಮಿ ಖರೀದಿ ಮಾಡಲಾಗಿದೆ. ಅಭಿವೃದ್ಧಿ ಕಾರ್ಯಕ್ಕೆ ವಿರೋಧ ಸಾಮಾನ್ಯ. ಆದರೆ ಜನರಿಗೆ, ಪರಿಸರಕ್ಕೆ ಮಾರಕವಾಗುವಂಥ ಯೋಜನೆಗೆ ವಿರೋಧ ಮಾಡಿದರೆ ತೊಂದರೆ ಇಲ್ಲ. ಕೋಸ್ಟ್ ಗಾರ್ಡ್ ಕಚೇರಿ ನಿರ್ಮಾಣವಾಗುವುದರಿಂದ ರಕ್ಷಣೆಯ ಜೊತೆಗೆ ಆಸ್ಪತ್ರೆ, ಅಂಗಡಿ ಸೇರಿದಂತೆ ಅನೇಕ ವ್ಯವಸ್ಥೆಗಳನ್ನು ಜಾರಿಗೆ ತರಲಾಗುತ್ತಿದೆ. ಅಂಗಡಿಗಳನ್ನು ನಡೆಸಲು ಸ್ಥಳೀಯರಿಗೆ ಅವಕಾಶದ ಜೊತೆಗೆ ಸುತ್ತಮುತ್ತಲಿನ ಪ್ರದೇಶವು ಅಭಿವೃದ್ಧಿಯಾಗಲು ಸಾಧ್ಯ ಎಂದರು.

ವಿನಾಕಾರಣ ವಿರೋಧ ಮಾಡಿದರೆ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು ಎನ್ನುವ ತಿಳುವಳಿಕೆ ಹೊಂದುವುದು ತಪ್ಪು. ಇಂದು ಜನರಿಗೆ ಎಲ್ಲವೂ ಅರ್ಥ ಆಗುತ್ತದೆ. ಸಾಮಾಜಿಕ ಜಾಲತಾಣ ಪ್ರಬಲವಾಗಿದೆ. ಮಾರಕ ಅಭಿವೃದ್ಧಿಗಳಿಗೆ ವಿರೋಧ ಮಾಡಲೇ ಬೇಕು ಎಂದರು. ಕಾರ್ಯಕ್ರಮದಲ್ಲಿ ಗೋವಾ ಮುಖ್ಯ ಎಂಜಿನಿಯರ್ ರಾಜೇಶ ಕುಲ್ಗೋಡ್, ಕೋಸ್ಟ್ ಗಾರ್ಡ್ ಕಮಾಂಡರ್ ಡಿಐಜಿ ಪಿ. ಕೆ. ಮಿಶ್ರಾ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ, ಅಮದಳ್ಳಿ ಪಂಚಾಯತ್ ಸದಸ್ಯೆ ಆಶಾ ನಾಯ್ಕ, ನೌಕಾನೆಲೆ, ಬಂದರು ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು