ಕಾರವಾರ: ಜಿಲ್ಲಾ ಪಂಚಾಯತ್ ನಲ್ಲಿ ನಡೆದ ದಿಶಾ ಸಭೆ ಗೆ ಹಾಜರಾದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹಾಗೂ ಶಾಸಕ ಸತೀಶ ಸೈಲ್ ಒಬ್ಬರನ್ನೊಬ್ಬರು ಅಪ್ಪಿ ಕೊಂಡಿದ್ದು, ಸಂಸದರ ಕಾರಿನಲ್ಲೇ ತೆರಳಿರುವ ಚಿತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಿಲ್ಲಾ ಪಂಚಾಯತ್ ಸಭೆ ಬಳಿಕ ಅನಂತಕುಮಾರ್ ಹೆಗಡೆ ಅವರ ಕಾರ್ ನಲ್ಲಿ ಶಾಸಕ ಸತೀಶ್ ಸೈಲ್ ಎಲ್ಲರ ಮುಂದೆಯೇ ಅನಂತ್ ರವರ ವಾಹನ ಹತ್ತಿ ಐ.ಬಿ ಗೆ ತೆರಳಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.
ಅನಂತ್ ಕುಮಾರ್ ಸತೀಶ ಸೈಲ್ ಶಿವರಾಮ್ ಹೆಬ್ಬಾರ್ ಎಂಎಲ್ಸಿ ಗಣಪತಿ ಉಳವೇಕರ ಎಲ್ಲರೂ ಐಬಿ ಜೊತೆಯಾಗಿ ತೆರಳಿ ಒಂದೂವರೆ ಗಂಟೆಯ ತನಕ ಉಭಯ ಕುಶಲೋಪರಿ ವಿಚಾರಿಸಿದ್ದಾರೆ.
ಅನಂತ್ ಕುಮಾರ್ ಹೆಗಡೆಗೆ ಈ ಹಿಂದೆ ಸತೀಶ್ ಸೈಲ್ ಲೋಕಸಭಾ ಚುನಾವಣೆಯಲ್ಲಿ ಒಳ ಒಪ್ಪಂದ ಮಾಡಿ ಬಾಹ್ಯ ಬೆಂಬಲ ನೀಡಿದ್ದು ಅವರಿಬ್ಬರ ಪರಸ್ಪರ ಸ್ನೇಹ ಇರಬಹುದು ಹಾಗೆಯೇ ಮುಂದೆ ನಡೆಯುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಈ ಅಪ್ಪುಗೆಯ ದೋಸ್ತಿ ಪರಿಣಾಮ ಬೀರುತ್ತದೆ ಎನ್ನುವುದು ಈ ಜನರ ನಡುವೆ ಚರ್ಚೆಯಾಗುತ್ತಿದೆ.