News Karnataka Kannada
Sunday, April 28 2024
ಉತ್ತರಕನ್ನಡ

ಕಾರವಾರ: ಮುಳುಗಿದ ಮೀನುಗಾರಿಕಾ ಬೋಟು- 6 ಲಕ್ಷ ರೂ. ಹಾನಿ

A fishing boat that sank - worth lakhs of rupees Damage
Photo Credit : News Kannada

ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಫಿಶಿಂಗ್ ಬೋಟೊಂದು ನೀರಿನಲ್ಲಿ ಮುಳುಗಡೆಯಾಗಿ ಅಪಾರ ಹಾನಿ ಸಂಭವಿಸಿದ ಘಟನೆ ಭಟ್ಕಳ ತಾಲೂಕಿನ ಮಾವಿನಕುರ್ವೆ ಬಂದರಿನಲ್ಲಿ ನಡೆದಿದೆ.

ತಾಲೂಕಿನ ಮಾವಿನಕುರ್ವೆ ಬಂದರ್ ನಿವಾಸಿ ನರಸಿಂಹ ಗೋವಿಂದ ಖಾರ್ವಿ ಮಾಲಕತ್ವದ ಪ್ರಜ್ಞಾ ಹೆಸರಿನ ಬೋಟು ಇದಾಗಿದ್ದು, ಹಾನಿಯ ಮೌಲ್ಯ 5 ಲಕ್ಷ ದಿಂದ 6 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಭಟ್ಕಳ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕೆ ನಡೆಸುವ ಸಂದರ್ಭದಲ್ಲಿ ಸಮುದ್ರದ ನೀರು ಬೋಟಿನ ಒಳಗೆ ಬರುತ್ತಿರುವುದು ಅರಿವಿಗೆ ಬಂದಿದೆ. ನಂತರ ಬೋಟನ್ನು ಬಂದರಿಗೆ ಕರೆ ತರುತ್ತಿರುವಾಗಲೇ ಬೋಟು ನೀರಿನ ಒಳಗೆ ಮುಳುಗಿದೆ. ಬೋಟಿನಲ್ಲಿದ್ದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು