ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಫಿಶಿಂಗ್ ಬೋಟೊಂದು ನೀರಿನಲ್ಲಿ ಮುಳುಗಡೆಯಾಗಿ ಅಪಾರ ಹಾನಿ ಸಂಭವಿಸಿದ ಘಟನೆ ಭಟ್ಕಳ ತಾಲೂಕಿನ ಮಾವಿನಕುರ್ವೆ ಬಂದರಿನಲ್ಲಿ ನಡೆದಿದೆ.
ತಾಲೂಕಿನ ಮಾವಿನಕುರ್ವೆ ಬಂದರ್ ನಿವಾಸಿ ನರಸಿಂಹ ಗೋವಿಂದ ಖಾರ್ವಿ ಮಾಲಕತ್ವದ ಪ್ರಜ್ಞಾ ಹೆಸರಿನ ಬೋಟು ಇದಾಗಿದ್ದು, ಹಾನಿಯ ಮೌಲ್ಯ 5 ಲಕ್ಷ ದಿಂದ 6 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಭಟ್ಕಳ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕೆ ನಡೆಸುವ ಸಂದರ್ಭದಲ್ಲಿ ಸಮುದ್ರದ ನೀರು ಬೋಟಿನ ಒಳಗೆ ಬರುತ್ತಿರುವುದು ಅರಿವಿಗೆ ಬಂದಿದೆ. ನಂತರ ಬೋಟನ್ನು ಬಂದರಿಗೆ ಕರೆ ತರುತ್ತಿರುವಾಗಲೇ ಬೋಟು ನೀರಿನ ಒಳಗೆ ಮುಳುಗಿದೆ. ಬೋಟಿನಲ್ಲಿದ್ದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.