News Karnataka Kannada
Sunday, April 28 2024
ಉತ್ತರಕನ್ನಡ

ಜೇನು ಕೃಷಿಕ ಮಧುಕೇಶ್ವರ ಹೆಗಡೆ ಅವರಿಗೆ ಡಾಕ್ಟರೇಟ್ ಪ್ರದಾನ

Honey farmer Madhukeshwar Hegde conferred with doctorate
Photo Credit : News Kannada

ಕಾರವಾರ: ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ ಜೇನು ಕೃಷಿಕ ತಾರಗೋಡ ಕಲ್ಲಳ್ಳಿ ಮನೆಯ ಮಧುಕೇಶ್ವರ ಹೆಗಡೆ ಅವರಿಗೆ ತಮಿಳುನಾಡಿನ ಪೆರಂಬಲೂರಿನಲ್ಲಿ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಲಾಯಿತು. ಪಾರಂಪರಿಕ ವೈದ್ಯಕೀಯ ಹಾಗೂ ಜೇನಿನ ಮೂಲಕ ನೀಡಲಾಗುವ ಎಫಿ ಥೆರಪಿ ಚಿಕಿತ್ಸೆ ನೀಡುವ ಕುರಿತು ಮಂಡಿಸಿದ ವಿಷಯಕ್ಕೆ ಡಾಕ್ಟರೇಟ್ ಪದವಿ ನೀಡಲಾಯಿತು.

ಜೇನು ಹುಳ ಚುಚ್ಚಿಸುವಿಕೆಯ ಎಫಿ ಥೆರಪಿ ಮೂಲಕ ಸಂಧಿವಾತ, ಶರೀರದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಚಿಕಿತ್ಸೆ ನೀಡುವ ಮೂಲಕ ಈಗಾಗಲೇ ಜೇನು ಮಧುಕೇಶ್ವರ ಗಮನ ಸೆಳೆದಿದ್ದಾರೆ. ಡಾಕ್ಟರೇಟ್ ಪದವಿಗೆ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರದ ವಿಜ್ಞಾನಿ ಡಾ. ರೂಪಾ ಪಾಟೀಲ ಶಿಫಾರಸ್ಸು ಮಾಡಿದ್ದರು. ತೋಟಗಾರಿಕಾ ಇಲಾಖೆ ಅಧಿಕಾರಿಗಳು ಕೂಡ ಸಹಕಾರ ನೀಡಿದ್ದರು.

ಮಧುಕೇಶ್ವರ ಹೆಗಡೆ ಅವರಿಗೆ ಶ್ರೀಲಂಕಾದ ಪ್ಲಾಂಟೇನನ್ ಇಂಡಸ್ಟ್ರೀ ಬೋರ್ಡನ ಶ್ರೀಕೃಶ್ ನಾಥ ಪಥಿರಾಜ, ಶ್ರೀಲಂಕಾದ ಕೋಲಂಬೋ ವಿವಿಯ ಪ್ರೊಫೆಸರ್ ಎಂ ಜಿ ಜಿ ಹೇಮಕುಮಾರ, ದೆಹಲಿ ಇಂರನ್ಯಾಶನಲ್ ಎಜ್ಯುಕೇಶನ್ ರಿಸರ್ಚ ಸೆಂಟರ್ ನ ಚೇರಮನ್ ಸಂದೀಪಕುಮಾರ, ಒಡಿಸ್ಸಾದ ಡಾ. ಸಂಜಯಕುಮಾರ ಬೈರಿಕ್, ಅಮೆರಿಕದ ಡಾ. ಸುರೇಶ ನರಪಾವಿ ಇತರರು ಡಾಕ್ಟರೇಟ್ ಪ್ರದಾನ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು