News Karnataka Kannada
Friday, May 03 2024
ಉತ್ತರಕನ್ನಡ

ಬೇಲೂರು: ಅಕ್ರಮ ಮರಳು ಸಾಗಾಣೆ, ೧.೪೦ ಲಕ್ಷ ರೂ. ದಂಡ

Belur: Illegal sand transportation, Rs 1.40 lakh seized Penalty
Photo Credit : News Kannada

ಬೇಲೂರು: ಯಾವುದೇ ಪರವಾನಗಿ ಇಲ್ಲದೆ ಮರಳು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ವಶಕ್ಕೆ ಪಡೆದು ೧.೪೦ ಲಕ್ಷ ದಂಡ ವಿಧಿಸಲಾಗಿದೆ. ತಾಲೂಕಿನಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಗೆ ಅಗತ್ಯಕ್ಕಿಂತ ಹೆಚ್ಚಿನ ಮರಳು ಸಾಗಣೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಕಲೇಶಪುರ ಉಪವಿಭಾಗಾಧಿಕಾರಿ ಅತ್ಮು ಲ್ ಜೈನ್ ಹಾಗೂ ತಾಲೂಕು ದಂಢಾಧಿ ಕಾರಿ ರಮೇಶ್ ವಶಪಡಿಸಿಕೊಂಡು ದಂಡ ವಿಧಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಹಶಿಲ್ದಾರ್ ರಮೇಶ್ ನಾಗೇನಹಳ್ಳಿ ಭಾಗದ ಮತೆಗಟ್ಟೆಗಳ ವೀಕ್ಷಣೆಗೆ ಉಪವಿಭಾಗಾಧಿಕಾರಿಗಳ ಜೊತೆ ತೆರಳುತ್ತಿದ್ದ ಸಂದರ್ಭದಲ್ಲಿ ಅಕ್ರಮ ಮರಳನ್ನು ತುಂಬಿಕೊಂಡು ಎರಡು ದೊಡ್ಡ ಟಿಪ್ಪರ್ ಗಳಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಗತ್ಯಕ್ಕಿಂತ ಹೆಚ್ಚಿನ ಮರಳು ತುಂಬಿಕೊಂಡು ಮೂಡಿಗೆರೆಗ ಹೋಗಿತ್ತಿದ್ದ ಸಂದರ್ಭದಲ್ಲಿ ಲಾರಿ ತಡೆದು ಪರಿಶೀಲಿಸಿದಾಗ ಯಾವುದೇ ಪರವಾನಗಿ ಇರಲಿಲ್ಲ ಹಾಗೂ ಲಾರಿಯಲ್ಲಿ ೫ ಟನ್ ಗಳಿಗೆ ಮಾತ್ರ ಅನುಮತಿ ಪಡೆದಿದ್ದರು ಇನ್ನೊಂದು ಯಾವುದೇ ಅನುಮತಿ ಇಲ್ಲದೆ ಸುಮಾರು ೨೦ ಟನ್ ಗೂ ಹೆಚ್ಚು ಮರಳು ಕಂಡು ಅದನ್ನು ಜಪ್ತಿಮಾಡಿ ಅನಧಿಕೃತ ಮರಳನ್ನು ತುಂಬಿಕೊಂಡು ಹೋಗುತ್ತಿದ್ದ ವಾಹನದ ಮಾಲೀಕರಿಗೆ ಎರಡು ವಾಹನ ಸೇರಿ ಸುಮಾರು ೧.೪೦ ಲಕ್ಷ ದಂಡವನ್ನು ವಿಧಿಸಲಾಗಿದೆ.

ಈಗಾಗಲೇ ತಾಲೂಕಿನಲ್ಲಿ ಮರಳು ತಪಾಸಣೆ ಸ್ಥಳವನ್ನು ನಿಗದಿ ಮಾಡಿದ್ದು ಅಕ್ರಮ ಮರಳಗಾರಿಕೆಗೆ ಹಾಗೂ ಅನಧಿಕೃತ ಮರಳಿಗೆ ಕಡಿವಾಣ ಹಾಕಿ ಕಟ್ಟೆಚ್ಚರ ವಹಿಸಿದ್ದೇವೆ.

ಅಲ್ಲದೆ ಅತಿವೇಗವಾಗಿ ಚಾಕನೆ ಮಾಡುವ ಮರಳು ವಾಹನಗಳನ್ನು ಜಪ್ತಿ ಮಾಡಲು ಉಪವಿಭಾಗಧಿಕಾರಿಗಳು ಸೂಚಿ ಸಿದ್ದು ಶೀಘ್ರವೇ ಕಾರ್ಯನ್ಮುಖವಾಗಲಿದ್ದೇವೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು