ಬೇಲೂರು: ಯಾವುದೇ ಪರವಾನಗಿ ಇಲ್ಲದೆ ಮರಳು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ವಶಕ್ಕೆ ಪಡೆದು ೧.೪೦ ಲಕ್ಷ ದಂಡ ವಿಧಿಸಲಾಗಿದೆ. ತಾಲೂಕಿನಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಗೆ ಅಗತ್ಯಕ್ಕಿಂತ ಹೆಚ್ಚಿನ ಮರಳು ಸಾಗಣೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಕಲೇಶಪುರ ಉಪವಿಭಾಗಾಧಿಕಾರಿ ಅತ್ಮು ಲ್ ಜೈನ್ ಹಾಗೂ ತಾಲೂಕು ದಂಢಾಧಿ ಕಾರಿ ರಮೇಶ್ ವಶಪಡಿಸಿಕೊಂಡು ದಂಡ ವಿಧಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಶಿಲ್ದಾರ್ ರಮೇಶ್ ನಾಗೇನಹಳ್ಳಿ ಭಾಗದ ಮತೆಗಟ್ಟೆಗಳ ವೀಕ್ಷಣೆಗೆ ಉಪವಿಭಾಗಾಧಿಕಾರಿಗಳ ಜೊತೆ ತೆರಳುತ್ತಿದ್ದ ಸಂದರ್ಭದಲ್ಲಿ ಅಕ್ರಮ ಮರಳನ್ನು ತುಂಬಿಕೊಂಡು ಎರಡು ದೊಡ್ಡ ಟಿಪ್ಪರ್ ಗಳಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಗತ್ಯಕ್ಕಿಂತ ಹೆಚ್ಚಿನ ಮರಳು ತುಂಬಿಕೊಂಡು ಮೂಡಿಗೆರೆಗ ಹೋಗಿತ್ತಿದ್ದ ಸಂದರ್ಭದಲ್ಲಿ ಲಾರಿ ತಡೆದು ಪರಿಶೀಲಿಸಿದಾಗ ಯಾವುದೇ ಪರವಾನಗಿ ಇರಲಿಲ್ಲ ಹಾಗೂ ಲಾರಿಯಲ್ಲಿ ೫ ಟನ್ ಗಳಿಗೆ ಮಾತ್ರ ಅನುಮತಿ ಪಡೆದಿದ್ದರು ಇನ್ನೊಂದು ಯಾವುದೇ ಅನುಮತಿ ಇಲ್ಲದೆ ಸುಮಾರು ೨೦ ಟನ್ ಗೂ ಹೆಚ್ಚು ಮರಳು ಕಂಡು ಅದನ್ನು ಜಪ್ತಿಮಾಡಿ ಅನಧಿಕೃತ ಮರಳನ್ನು ತುಂಬಿಕೊಂಡು ಹೋಗುತ್ತಿದ್ದ ವಾಹನದ ಮಾಲೀಕರಿಗೆ ಎರಡು ವಾಹನ ಸೇರಿ ಸುಮಾರು ೧.೪೦ ಲಕ್ಷ ದಂಡವನ್ನು ವಿಧಿಸಲಾಗಿದೆ.
ಈಗಾಗಲೇ ತಾಲೂಕಿನಲ್ಲಿ ಮರಳು ತಪಾಸಣೆ ಸ್ಥಳವನ್ನು ನಿಗದಿ ಮಾಡಿದ್ದು ಅಕ್ರಮ ಮರಳಗಾರಿಕೆಗೆ ಹಾಗೂ ಅನಧಿಕೃತ ಮರಳಿಗೆ ಕಡಿವಾಣ ಹಾಕಿ ಕಟ್ಟೆಚ್ಚರ ವಹಿಸಿದ್ದೇವೆ.
ಅಲ್ಲದೆ ಅತಿವೇಗವಾಗಿ ಚಾಕನೆ ಮಾಡುವ ಮರಳು ವಾಹನಗಳನ್ನು ಜಪ್ತಿ ಮಾಡಲು ಉಪವಿಭಾಗಧಿಕಾರಿಗಳು ಸೂಚಿ ಸಿದ್ದು ಶೀಘ್ರವೇ ಕಾರ್ಯನ್ಮುಖವಾಗಲಿದ್ದೇವೆ ಎಂದರು.