ಅಂಕೋಲಾ: ಜನ್ಮ ದಿನದ ಅಂಗವಾಗಿ ಜನಶಕ್ತಿ ವೇದಿಕೆ ಹಾಗೂ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಅವರು ಭಾನುವಾರ ಜಾನಪದ ಕಲಾವಿದೆ, ಪದ್ಮಶ್ರೀ ಸುಕ್ರಿ ಗೌಡ ಅವರ ಮನೆಗೆ ಭೇಟಿ ನೀಡಿ, ಅವರ ಆಶೀರ್ವಾದ ಪಡೆದರು.
ತಿಥಿಯ ಪ್ರಕಾರ ಭಾನುವಾರ ಮಾಧವ ನಾಯಕ ಅವರ ಜನ್ಮ ದಿನವಾಗಿದ್ದು, ದಿನಾಂಕದ ಪ್ರಕಾರ ಇಂದು ಜನ್ಮ ದಿನವಾಗಿದೆ. ಹೀಗಾಗಿ ಭಾನುವಾರವೇ ತಂದೆ- ತಾಯಿಗಳ ಆಶೀರ್ವಾದ ಪಡೆದ ಅವರು, ತಾಲೂಕಿನ ಬಡಗೇರಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತೆ ಸುಕ್ರಿ ಗೌಡರ ನಿವಾಸಕ್ಕೆ ತೆರಳಿ, ಸೀರೆ, ಹಣ್ಣು- ಹಂಪಲು, ಸಿಹಿ ನೀಡಿ ಆಶೀರ್ವಾದ ಪಡೆದರು. ಈ ವೇಳೆ ಸುಕ್ರಿ ಗೌಡರ ಆರೋಗ್ಯವನ್ನೂ ಮಾಧವ ನಾಯಕ ಅವರು ವಿಚಾರಿಸಿದರು. ಸುಕ್ರಿ ಗೌಡರಿಗೆ ಆರೋಗ್ಯ ಸಮಸ್ಯೆಯಾದಾಗೆಲ್ಲ ಮಾಧವ ನಾಯಕ ಅವರು ಸ್ಪಂದಿಸಿ, ಅವರ ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ಸೇರಿದಂತೆ ಇನ್ನಿತರ ಸಹಾಯವನ್ನು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಸದಾ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಮಾಧವ ನಾಯಕರು, ಇಂದು (ಅ.10) ತಮ್ಮ ಜನ್ಮ ದಿನವನ್ನು ಸದಾಶಿವಗಡದ ಸುರಭಿ ವೃದ್ಧಾಶ್ರಮದಲ್ಲಿ ಆಚರಿಸಿಕೊಳ್ಳಲಿದ್ದಾರೆ. ಈ ವೇಳೆ ಮಾಧವ ನಾಯಕರೊಂದಿಗೆ ಅವರ ಪತ್ನಿ ಸ್ನೇಹಾ ನಾಯಕ, ಮಗಳು ಯಶಸ್ವಿನಿ ನಾಯಕ, ಅವರ್ಸಾ ಗ್ರಾಮ ಪಂಚಾಯತಿ ಅಧ್ಯಕ್ಷೆ ಸ್ವಾತಿ ಮಾರುತಿ ನಾಯ್ಕ, ಅವರ ಪುತ್ರಿ ಸಾನ್ವಿ ಮಾರುತಿ ನಾಯ್ಕ ಇದ್ದರು.
ಪ್ರಧಾನಿ ಮೋದಿ ತಮ್ಮ ಭಾಷಣದ ವೇಳೆ ಫೋಟೋ ಹಿಡಿದು ನಿಂತಿದ್ದ ಯುವತಿಯನ್ನು ಕಂಡು ತಮ್ಮ ಅಂಗರಕ್ಷಕ ಅಧಿಕಾರಿಗಳಿಂದ ಯುವತಿಯ ಫೋಟೊ…
ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ಕಲ್ಕಿ-2898 AD' ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದು, ನಟಿ ದೀಪಿಕಾ ಪಡುಕೋಣೆ ತಮ್ಮ ಪಾತ್ರದ ಡಬ್ಬಿಂಗ್…
ಕಾಲಿವುಡ್ ನಟ ಧನುಷ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರ ದಾಂಪತ್ಯ ಜೀವನ ಮುರಿದು ಬಿದ್ದಿದೆ.…
ಹಾಸನ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಪರಪ್ಪರ ಅಗ್ರಹಾರ ಜೈಲಿನಿಂದ ಬಿಡುಗಡೆ ಹೊಂದಿದ ಶಾಸಕ…
ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬಾಗಲಕೋಟೆಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ರಾಜ್ಯಕ್ಕೆ ಫಸ್ಟ್…
ಪ್ರಧಾನಿ ನರೇಂದ್ರ ಮೋದಿ ಅವರು ಸತತ 3ನೇ ಬಾರಿ ಲೋಕಸಭಾ ಚುನಾವಣೆಗೆ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇಂದು ಬೆಳಗ್ಗೆ 11.40ರ…