ಅಂಕೋಲಾ: ಜನ್ಮ ದಿನದ ಅಂಗವಾಗಿ ಜನಶಕ್ತಿ ವೇದಿಕೆ ಹಾಗೂ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಅವರು ಭಾನುವಾರ ಜಾನಪದ ಕಲಾವಿದೆ, ಪದ್ಮಶ್ರೀ ಸುಕ್ರಿ ಗೌಡ ಅವರ ಮನೆಗೆ ಭೇಟಿ ನೀಡಿ, ಅವರ ಆಶೀರ್ವಾದ ಪಡೆದರು.
ತಿಥಿಯ ಪ್ರಕಾರ ಭಾನುವಾರ ಮಾಧವ ನಾಯಕ ಅವರ ಜನ್ಮ ದಿನವಾಗಿದ್ದು, ದಿನಾಂಕದ ಪ್ರಕಾರ ಇಂದು ಜನ್ಮ ದಿನವಾಗಿದೆ. ಹೀಗಾಗಿ ಭಾನುವಾರವೇ ತಂದೆ- ತಾಯಿಗಳ ಆಶೀರ್ವಾದ ಪಡೆದ ಅವರು, ತಾಲೂಕಿನ ಬಡಗೇರಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತೆ ಸುಕ್ರಿ ಗೌಡರ ನಿವಾಸಕ್ಕೆ ತೆರಳಿ, ಸೀರೆ, ಹಣ್ಣು- ಹಂಪಲು, ಸಿಹಿ ನೀಡಿ ಆಶೀರ್ವಾದ ಪಡೆದರು. ಈ ವೇಳೆ ಸುಕ್ರಿ ಗೌಡರ ಆರೋಗ್ಯವನ್ನೂ ಮಾಧವ ನಾಯಕ ಅವರು ವಿಚಾರಿಸಿದರು. ಸುಕ್ರಿ ಗೌಡರಿಗೆ ಆರೋಗ್ಯ ಸಮಸ್ಯೆಯಾದಾಗೆಲ್ಲ ಮಾಧವ ನಾಯಕ ಅವರು ಸ್ಪಂದಿಸಿ, ಅವರ ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ಸೇರಿದಂತೆ ಇನ್ನಿತರ ಸಹಾಯವನ್ನು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಸದಾ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಮಾಧವ ನಾಯಕರು, ಇಂದು (ಅ.10) ತಮ್ಮ ಜನ್ಮ ದಿನವನ್ನು ಸದಾಶಿವಗಡದ ಸುರಭಿ ವೃದ್ಧಾಶ್ರಮದಲ್ಲಿ ಆಚರಿಸಿಕೊಳ್ಳಲಿದ್ದಾರೆ. ಈ ವೇಳೆ ಮಾಧವ ನಾಯಕರೊಂದಿಗೆ ಅವರ ಪತ್ನಿ ಸ್ನೇಹಾ ನಾಯಕ, ಮಗಳು ಯಶಸ್ವಿನಿ ನಾಯಕ, ಅವರ್ಸಾ ಗ್ರಾಮ ಪಂಚಾಯತಿ ಅಧ್ಯಕ್ಷೆ ಸ್ವಾತಿ ಮಾರುತಿ ನಾಯ್ಕ, ಅವರ ಪುತ್ರಿ ಸಾನ್ವಿ ಮಾರುತಿ ನಾಯ್ಕ ಇದ್ದರು.