ಕಾರವಾರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅಮೃತ ಸರೋವರ ನಿರ್ಮಾಣದಡಿ ಅಭಿವೃದ್ಧಿಪಡಿಸಲಾದ ಭೀಮಕೋಲ ಹಾಗೂ ಕೆರವಡಿ ಅಗ್ರ ಕೆರೆಗೆ ಮಂಗಳವಾರ ಅಮೃತ ಸರೋವರ ಪರಿಶೀಲನಾ ತಂಡ ಭೇಟಿ ಪರಿಶೀಲನೆ ನಡೆಸಿದರು.
ತಾಲೂಕಿನ ಹಣಕೋಣ ಹಾಗೂ ಕೆರವಡಿ ಗ್ರಾಮದಲ್ಲಿ 2021-22ನೇ ಸಾಲಿನಲ್ಲಿ ಅಮೃತ ಸರೋವರ ಯೋಜನೆಯಡಿ ಕೈಗೊಂಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು ಸಮಗ್ರ ಅಭಿವೃದ್ಧಿಯಲ್ಲಿ ಕೈಗೊಂಡ ಕಾಮಗಾರಿಯ ಗುಣಮಟ್ಟ, ನೀರಿನ ಸಾಂದ್ರತೆ, ಕಾಮಗಾರಿ ಕೈಗೊಂಡ ಉದ್ದೇಶ ಹಾಗೂ ಅನುಕೂಲತೆಯ ಬಗ್ಗೆ ಮಾಹಿತಿ ಪಡೆದರು. ಇನ್ನೂ ಈ ಕೆರೆ ಸಮಗ್ರ ಅಭಿವೃದ್ಧಿಯಲ್ಲಿ ಹೂಳೆತ್ತುವುದು, ಪಿಚ್ಚಿಂಗ್, ಔಟ್ ಲೆಟ್ ಹಾಗೂ ಇನ್ಲೆಟ್ ಹಾಗು ಪಾತ್ವೇ, ಮೆಟ್ಟಿಲುಗಳ ನಿರ್ಮಾಣ ಸೇರಿದಂತೆ ಕುಳಿತುಕೊಳ್ಳಲು ಬೆಂಚ್ ಗಳನ್ನು ಸಹ ನಿರ್ಮಿಸಲಾಗಿದೆ.
ಈ ಸಂದರ್ಭದಲ್ಲಿ ಭಟ್ಕಳ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಭಾಕರ್ ಚಿಕ್ಕನಮನಿ, ನರೇಗಾ ಸಹಾಯಕ ನಿರ್ದೇಶಕರಾದ ರಾಮದಾಸ್ ನಾಯ್ಕ, ತಾಂತ್ರಿಕ ಸಂಯೋಜಕರಾದ ವಿನಾಯಕ ನಾಯ್ಕ, ಸುರಜ್ ಗುನಗಿ, ತಾಂತ್ರಿಕ ಸಹಾಯಕರು ಹಾಜರಿದ್ದರು.