News Karnataka Kannada
Friday, May 03 2024
ಕರಾವಳಿ

ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರೋತ್ಸವ ಆಚರಣೆಗೆ ಭೂಮಿ ಹಕ್ಕು ಹೋರಾಟಗಾರರ ನಿರ್ಧಾರ

New Project (25)
Photo Credit :
ಕಾರವಾರ :ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಈ ಸಲದ ಸ್ವಾತಂತ್ರೋತ್ಸವವನ್ನು ನಮಗೇಂದು ಭೂಮಿ, ನಮಗೇಂದು ವಸತಿ, ಭೂಮಿ ಹಕ್ಕು ವಂಚಿತರಿಗೆಲ್ಲಿ ಸ್ವಾತಂತ್ರ್ಯ ಎನ್ನುವ ಘೋಷಣೆಯೊಂದಿಗೆ ಕೋವಿಡ್ ಶಿಷ್ಟಾಚಾರ ಪಾಲಿಸಿ ಸ್ವಾತಂತ್ರೋತ್ಸವವನ್ನು ಭೂಮಿ ಹಕ್ಕು ಹೋರಾಟಗಾರರು ಆಚರಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರು ತಿಳಿಸಿದ್ದಾರೆ.
ಅವರು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆ.೧೫ರಂದು ಸ್ವಾತಂತ್ರೋತ್ಸವದ ಅಂಗವಾಗಿ ಭೂಮಿ ಹಕ್ಕು ವಂಚಿತರಿಗೆಲ್ಲಿ ಸ್ವಾತಂತ್ರ್ಯ ಎನ್ನುವ ಲಾಂಛನ ಬಿಡುಗಡೆಗೊಳಿ ಮಾತನಾಡಿದರು.
 ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ೧೦,೫೭೧ ಚ.ಕೀ.ಮೀ ವೀಸ್ತಿರ್ಣ ಹೊಂದಿದ್ದು, ಅವುಗಳಲ್ಲಿ ೮,೫೦೦ ಚ.ಕೀ.ಮೀ ಅರಣ್ಯ. ೨,೦೭೧ ಚ.ಕೀ.ಮೀ ನಲ್ಲಿ ೧೪ ಲಕ್ಷ ಜನಸಂಖ್ಯೆ ಜೀವನ ಮಾಡುತ್ತಿದ್ದಾರೆ. ಮಲೆನಾಡು, ಬಯಲುಸೀಮೆ ಮತ್ತು ಕರಾವಳಿ ಪ್ರದೇಶ ವಿಭಿನ್ನವಾದ ನೈಸರ್ಗಿಕ ಗುಣಧರ್ಮ ಹೊಂದಿದ್ದು ವಿಶೇಷ. ಅವುಗಳಲ್ಲಿ ವಾಸ್ತವ್ಯ ಹಾಗೂ ಸಾಗುವಳಿಗಾಗಿ ಭೂಮಿ ಹಕ್ಕಿನ ಮಂಜೂರಿಯ ನಿರೀಕ್ಷೆಯಲ್ಲಿ ೧ ಲಕ್ಷಕ್ಕೂ ಮೀರಿ ಕುಟುಂಬವು ಜಿಲ್ಲೆಯಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಇವರೆಲ್ಲ ನಿರಾಶ್ರಿತರಾಗುವ ಅತಂತ್ರತೆಯಲ್ಲಿ, ಭೂಮಿ ಹಕ್ಕಿನಿಂದ ವಂಚಿತರಾಗಿ ಸ್ವತಂತ್ರತೆಯ ಜೀವನ ನಡೆಸುವ ಡೋಲಾಯಮಾನ ಸ್ಥಿತಿಯಲ್ಲಿ ಇದೆ.
ಇಂತಹ ನಿವಾಸಿಗಳಿಗೆ ಆಡಳಿತ ವರ್ಗದಿಂದ ನಿರಂತರ ದೌರ್ಜನ್ಯ, ಕಿರುಕುಳ, ದೈಹಿಕ ಮತ್ತು ಮಾನಸಿಕ ಹಿಂಸೆ, ಒಕ್ಕಲೆಬ್ಬಿಸುವ ಭೀತಿ, ಕಾನೂನಿನ ಗದಪ್ರಹಾರ ಮುಂತಾದ ಸಮಸ್ಯೆಗಳಿಂದ ಪೂರ್ಣ ಪ್ರಮಾಣದ ನೆಮ್ಮದಿಯ ಸ್ವಾತಂತ್ರö್ಯದಿAದ ವಂಚಿತರಾಗಿ ಜೀವನದ ಅಭದ್ರತೆಯಿಂದ ಜೀವಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ನಿರಾಶ್ರಿತರಾಗುವ ಭೀತಿಯಲ್ಲಿರುವ ಕುಟುಂಬಗಳ ಸಮಸ್ಯೆಯನ್ನು ಗಂಭೀರವಾಗಿ ಸರಕಾರ ಗಮನ ಸೆಳೆಯುವ ಉದ್ದೇಶದಿಂದ ೭೪ ನೇ ಸ್ವಾತಂತ್ರೋತ್ಸವವನ್ನು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಕಾರ್ಯಾಲಯ ಶಿರಸಿಯಲ್ಲಿ ಭೂಮಿ ಹಕ್ಕು ವಂಚಿತರಿಗೇಲ್ಲಿ ಸ್ವಾತಂತ್ರ್ಯ? ಎಂಬ ಘೋಷಣೆಯೊಂದಿಗೆ ಧ್ವಜಾರೋಹಣ ಮಾಡಲಾಗುವುದು ಎಂದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ೮೫,೦೦೦ ಕುಟುಂಬ, ಕಂದಾಯ ೧೧,೦೦೦ ಕುಟುಂಬ, ಹಾಡಿ ೪೫೦೦ ಕುಟುಂಬ, ಬೆಟ್ಟ ಭೂಮಿಯಲ್ಲಿ ವಾಸ್ತವ್ಯಕ್ಕಾಗಿ ೬,೫೦೦ ಕುಟುಂಬ, ಗಾಂವಠಾಣ, ಗೋಮಾಳ, ಪಾರಂಪೂಕ, ಡೊಂಗರ ಮುಂತಾದ ಜಮೀನುಗಳಲ್ಲಿ ೧೦,೦೦೦  ಹೀಗೆ ಮುಂತಾದ ಸರಕಾರದ ಒಡೆತನದ ಭೂಮಿಯಲ್ಲಿ ವಸತಿ ಮತ್ತು ಸಾಗುವಳಿಗಾಗಿ ಶೇ. ೪೩ ರಷ್ಟು ಮತ್ತು ಕೃಷಿಗಾಗಿ ಶೇ. ೫೭ ರಷ್ಟು ಅನಧೀಕೃತ ನಿವಾಸಿಗಳಾಗಿ ಸುಮಾರು ೧,೨೫,೦೦೦ ಕುಟುಂಬ ಮುಂದಿನ ದಿನಗಳಲ್ಲಿ ನಿರಾಶ್ರಿತರಾಗುವ ಭೀತಿಯಲ್ಲಿ ಜೀವಿಸುತ್ತಿದ್ದಾರೆ. ಸುಮಾರು ೬೦೦೦ ಎಕರೆ ಪ್ರದೇಶ ಟಿಬೆಟಿಯನ್ನರಿಗೆ ದೇಶದ ಪ್ರಜಾ ರಾಜತಂತ್ರ ನೀತಿ ಅಡಿಯಲ್ಲಿ ಭೂಮಿ ನೀಡಿ ಆಶ್ರಯ ನೀಡಿದೆ. ದೇಶದ ಪ್ರಜೆಯನ್ನಾಗಿಸುವ ವಿದೇಶಿಗರನ್ನು ಕೇಂದ್ರ ಸರಕಾರ ಇತ್ತೀಚಿಗೆ ಕಾನೂನು ತಂದಿದೆ. ಆದರೆ, ದೇಶದ ಪ್ರಜೆಗಳನ್ನು ಕಾನೂನಿನ ನೇಪದಲ್ಲಿ ನಿರಾಶ್ರಿತರನ್ನಾಗಿ ಮಾಡುವ ಸರಕಾರದ ನೀತಿಯನ್ನು ಖಂಡಿಸುತ್ತೇವೆ. ಇಂತಹ ಗಂಭೀರ ಸ್ವರೂಪದ, ಸ್ವತಂತ್ರತೆ ಇಲ್ಲದ ಜಿಲ್ಲೆಯ ಜನಸಂಖ್ಯೆಯ ಒಂದು ಮೂರರಷ್ಟು ನಿವಾಸಿಗಳ ಸಮಸ್ಯೆ ಸರಕಾರದ ಗಮನಕ್ಕೆ ತರುವುದೇ ಸ್ವಾತಂತ್ರೋತ್ಸವದOದು ನಡೆಯುವ ಕಾರ್ಯಕ್ರಮದ ಉದ್ದೇಶವಾಗಿದೆ.
ನಿರಂತರವಾಗಿ ಭೂಮಿ ಹಕ್ಕಿಗಾಗಿ ಹೋರಾಟ ಜರಗುತ್ತಿದ್ದರೂ ಪ್ರತಿ ಚುನಾವಣೆಯಲ್ಲಿಯೂ ಎಲ್ಲಾ ಪಕ್ಷಗಳು ಚುನಾವಣೆ ಪ್ರನಾಳಿಕೆಯಲ್ಲಿ ಮಂಜೂರಿ ಆಶ್ವಾಸನೆ ನೀಡಿದ್ದಾಗಿಯೂ ಆಡಳಿತ ಪಕ್ಷ ಅತಿಕ್ರಮಣದಾರರ ಸಮಸ್ಯೆ ನಿರ್ಲಕ್ಷಿಸಿರುವುದು ವಿಷಾದಕರ. ಭೂಮಿ ಹಕ್ಕು ಭೀಕ್ಷೆಯಲ್ಲ ಸಂವಿಧಾನಾತ್ಮಕವಾದ ಹಕ್ಕು ಎಂದು ರವೀಂದ್ರ ನಾಯ್ಕ ಅವರು ಹೇಳಿದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು