ಅಂಕೋಲಾ : ಮೀನುಗಾರಿಕೆಗೆ ತೆರಳಲು ದೋಣಿ ಏರುತ್ತಿದ್ದ ಸಂದರ್ಭದಲ್ಲಿ ನೀರಿಗೆ ಬಿದ್ದು ಮೀನುಗಾರ ಮೃತ ಪಟ್ಟ ಘಟನೆ ತಾಲೂಕಿನ ಹಾರವಾಡ ಸೀಬರ್ಡ್ ಕಾಲನಿಯ ಕಡಲ ತೀರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಹಾರವಾಡ ಸೀಬರ್ಡ್ ಕಾಲನಿ ನಿವಾಸಿ ಸಾಯಿನಾಥ ಬೋಳಾ ದುರ್ಗೇಕರ(47) ಮೃತ ವ್ಯಕ್ತಿಯಾಗಿದ್ದು, ಈತ ತನ್ನ ಆರ್ಯಾದುರ್ಗ ಹೆಸರಿನ ದೋಣಿಯನ್ನು ಕಡಲ ತೀರದಿಂದ ನೀರಿನಲ್ಲಿ ದೂಡಿ ನೀರಿನಲ್ಲಿ ಓಡಿ ದೋಣಿ ಹತ್ತುತ್ತಿರುವ ಸಂದರ್ಭದಲ್ಲಿ ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವ್ಯಕ್ತಿಯ ಮೃತ ದೇಹ ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದು ಈ ಕುರಿತು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಅಂಕೋಲಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.