ಕಾಸರಗೋಡು : ಹಲವು ಪ್ರಕರಣಗಳಲ್ಲಿ ಶಾಮೀಲಾಗಿದ್ದ ನಾಲ್ಕು ಮಂದಿಯನ್ನು ಬಂಧಿಸಿ ಇವರ ವಿರುದ್ಧ ಗೂಂಡಾ ಕಾಯ್ದೆಯಾದ ಕಾಫಾ ವನ್ನು ಹೇರಲಾಗಿದೆ.
ಮಂಜೇಶ್ವರ ಠಾಣಾ ವ್ಯಾಪ್ತಿಯ ಕಡಂಬಾರ್ ಮೊರತ್ತಣೆಯ ಮುಹಮ್ಮದ್ ಅಸ್ಗರ್ ( ೨೫) , ಮೀಯಪದವಿನ ಇಬ್ರಾಹಿಂ ಅರ್ಷಾದ್ ( ೨೬). ಉಪ್ಪಳದ ರೌಫ್ ( ೪೧) ಮತ್ತು ದೀಪಕ್ ( ೩೬) ಎಂಬವರನ್ನು ಬಂಧಿಸಲಾಗಿದೆ.
ಅಸ್ಗರ್ ವಿರುದ್ಧ ದರೋಡೆ , ಕೊಲೆಯತ್ನ , ಮಾದಕವಸ್ತು ಸಾಗಾಟ ,ಗುಂಡು ಹಾರಾಟ ನಡೆಸಿದ , ಅರ್ಷಾದ್ ವಿರುದ್ಧ ಕೊಲೆ ,ಗುಂಡು ಹಾರಾಟ ಸೇರಿದಂತೆ ಕುಂಬಳೆ , ಮಂಜೇಶ್ವರ ಠಾಣೆ ಯಲ್ಲಿ ಏಳಕ್ಕೂ ಅಧಿಕ ಪ್ರಕರಣಗಳಿವೆ.. ರೌಫ್ ಹಲವು ಕಳವು ಪ್ರಕರಣಗಳ ಆರೋಪಿಯಾಗಿದ್ದು ,ದೀಪಕ್ ವಿರುದ್ಧ ಕೊಲೆಯತ್ನ ಮದ್ಯ ಸಾಗಾಟ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ