News Karnataka Kannada
Tuesday, May 07 2024
ಉತ್ತರಕನ್ನಡ

ಪೊಲೀಸರು, ಗೃಹ ಸಚಿವ ಎಲ್ಲರಿಗೂ ಸರಿ‌ ಇರಲು ಸಾಧ್ಯ ಇಲ್ಲ; ಅರಗ ಜ್ಞಾನೇಂದ್ರ

Araga Jnanendra
Photo Credit :

ಶಿರಸಿ : ಒಬ್ಬ ಅಧಿಕಾರಿ ಅಥವಾ ಗೃಹ ಸಚಿವರಿಗೆ ಹೊಗಳಿಕೆ ಇದ್ದರೆ ಅವರು ಸರಿಯಲ್ಲ ಎಂದರ್ಥ. ಪೊಲೀಸರು, ಗೃಹ ಸಚಿವ ಎಲ್ಲರಿಗೂ ಸರಿ‌ ಇರಲು ಸಾಧ್ಯ ಇಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

ಅವರು ನಗರದಲ್ಲಿ ಭಾನುವಾರ ಹಿರಿಯ ಸಹಕಾರಿ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಅವರ ಆರೋಗ್ಯ ವಿಚಾರಿಸಿ ಸುದ್ದಿಗಾರರ ಜೊತೆ ಮಾತನಾಡಿದರು.ಒಬ್ಬ ಪೊಲೀಸ್ ಅಧಿಕಾರಿಯನ್ನು ಎಲ್ಲರೂ ಹೊಗಳುತ್ತಾರೆ ಎಂದರೆ ಅವರು ಸರಿಯಿಲ್ಲ ಎಂದೇ ಅರ್ಥ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ. ಒಂದೆರಡು ಘಟನೆ ಬಿಟ್ಟರೆ ಬೇರೆ ಸಂಗತಿಯೇ ಇಲ್ಲ. ಶಿವಮೊಗ್ಗದಲ್ಲಿ‌ ಘಟನೆ ನಡೆದ 24 ಗಂಟೆಯಲ್ಲಿ ಹೆಡೆ ಮುರಿ‌ಕಟ್ಟಿದ್ದಾರೆ ಎಂದರು.

ಚುನಾವಣಾ ವರ್ಷದಲ್ಲಿ ಎಲ್ಲರೂ ಕ್ರಿಯಾಶೀಲ ಆಗುತ್ತಾರೆ. ರಾಜಕಾರಣ, ಎಲ್ಲ‌ ಪಕ್ಷಗಳೂ ಕ್ರಿಯಾಶೀಲ ಆಗುತ್ತಾರೆ‌ ಎಂದ ಅವರು ಅನ್ಯ ಚಟುವಟಿಕೆ ನಡೆಸುತ್ತಿರುವವರ ನಿಯಂತ್ರಣ ನಡೆಸಲಾಗುತ್ತಿದೆ. ಮಾನಸಿಕ‌ ಅಸ್ವಸ್ಥ ಕೊಲೆ ಆರೋಪಿಯನ್ನು ಪೊಲೀಸರು‌ ಕರೆತರುವಾಗ ಹೊಸನಗರ ಎಸ್ ಐಗೆ ಕಚ್ಚಿದ್ದಾರೆ. ಕಚ್ಚಿದ ವಿಡಿಯೋ ವೈರಲ್ ಆಗಿದೆ. ಆದರೆ, ಪೊಲೀಸ್ ಹೊಡೆದದ್ದು ಕೂಡ ತಪ್ಪೇ ಎಂದರು.

ಶಾಂತಿ ಕದಡುವ ಕೆಲಸ ಮಾಡುವ ಪಿ.ಎಫ್.ಐ., ಎಸ್.ಡಿ.ಪಿ.ಐ. ಸಂಘಟನೆಗಳನ್ನು ನಿಷೇಧ ಮಾಡುವ ಬದಲು ಅವರ ಕಾರ್ಯಚಟುವಟಿಕೆ ಮೇಲೆ ನಿಗಾ ಇಡುವುದು ಮುಖ್ಯ. ಈ ಬಗ್ಗೆ ವಿಶೇಷ ಗಮನ ನೀಡಿದ್ದೇವೆ. ನಿಷೇಧ ಮಾಡಿದರೆ ಇನ್ನೊಂದು ಸಂಘಟನೆ ಮಾಡಬಹುದು ಎಂದೂ ಹೇಳಿದ ಅವರು, ಈ ಸಂಘಟನೆಗಳನ್ನು ನಿಷೇಧ ಮಾಡುವುದು ಕೇಂದ್ರದ ನಿರ್ಧಾರ‌. ಇಲ್ಲಿನ ಘಟನಾವಳಿಗಳನ್ನು ಕೇಂದ್ರಕ್ಕೆ ವರದಿ‌ ನೀಡುತ್ತಿದ್ದೇವೆ. ಕೇಂದ್ರವೂ ಕಣ್ಣಿಟ್ಟಿದೆ ಎಂದೂ ಪ್ರತಿಕ್ರಿಯೆ ನೀಡಿದರು.

ಶಿವಮೊಗ್ಗ, ಆಳಂದ ಘಟನೆ ಹೊರತುಪಡಿಸಿದರೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಉತ್ತಮವಾಗಿದೆ ಎಂದೂ ಹೇಳಿದರು. ಸಾಮಾಜಿಕ ಶಾಂತಿ ಕದಡುವ ಕಾರ್ಯ ನಡೆಯುತ್ತಿದ್ದರೆ ಅದನ್ನು ನಿಯಂತ್ರಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.

ಟಿಎಸ್‌ಎಸ್ ಕಾರ್ಯಾಧ್ಯಕ್ಷ‌ ರಾಮಕೃಷ್ಣ‌ ಹೆಗಡೆ ಕಡವೆ, ವ್ಯವಸ್ಥಾಪಕ ನಿರ್ದೇಶಕ ರವೀಶ ಹೆಗಡೆ, ನಿರ್ದೇಶಕ ಶಶಾಂಕ ಹೆಗಡೆ ಇತರರು ಇದ್ದರು. ಇದೇ ವೇಳೆ‌ ಮಾರಿಕಾಂಬಾ ದೇವಸ್ಥಾನಕ್ಕೂ ತೆರಳಿ‌ ಶ್ರೀದೇವಿ ದರ್ಶನ ಪಡೆದು ಗೌರವ ಸ್ವೀಕರಿಸಿದರು.

ಶೀಗೇಹಳ್ಳಿ ಅವರ ಆರೋಗ್ಯ ವಿಚಾರಣೆ ವೇಳೆ‌ ಸ್ವತಃ‌ ಶೀಗೆಹಳ್ಳಿ ಅವರು ಅರಗ ಅವರ ಬಳಿ ಖಾತೆ‌ ಸಾಲ‌ ಕೃಷಿ‌ ಸಾಲವಾಗಿ ಪರಿವರ್ತನೆ ಮಾಡಿಕೊಡುವಂತೆ ಮನವಿ‌ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು