ಕಾರ್ಕಳ: ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಕ್ಷವು ಕಾರ್ಕಳ ನೀಡಿದ ಕೊಡುಗೆಯಾದರೂ ಏನು? ಯಾವ ಮುಖ ತೋರಿಸಿ ಆ ಪಕ್ಷದ ಅಭ್ಯರ್ಥಿ ಮತದಾರ ಬಳಿಗೆ ಹೋಗುತ್ತಾರೆ ಎಂದು ವಿಧಾನ ಸಭೆಯ ಬಿಜೆಪಿ ಅಭ್ಯರ್ಥಿ ವಿ. ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ.
ನಾಮಪತ್ರ ಸಲ್ಲಿಸುವ ಮುನ್ನ ಕುಕ್ಕುಂದೂರು ಗ್ರಾಮ ಪಂಚಾಯತ್ ಆವರಣದ ಬಳಿಯ ಮೈದಾನದಲ್ಲಿ ಆಯೋಜಿಸಿದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಯಾವಾಗೆಲ್ಲ ಚುನಾವಣೆ ಎದುರಾಗುತ್ತದೆಯೋ ಆ ಸಂದರ್ಭಗಳಲ್ಲಿ ಮಾತ್ರ ಕಾಣಸಿಗುವ ಪಕ್ಷವೊಂದಿದ್ದರೆ ಅದು ಕಾಂಗ್ರೆಸ್ ಪಕ್ಷ ವಾಗಿದೆ. 2018 ರ ಬಳಿಕ ಜನರ ಸುಖ ದುಃಖ ಸಂದರ್ಭಗಳಲ್ಲಿ ಕಾಣಿಸಿಕೊಂಡಿಲ್ಲ, ಯಾವ ಉದ್ದೇಶ ಹಿಡಿದು ಕೊಂಡು ಕಾಂಗ್ರೆಸ್ ಜನರ ಬಳಿ ಹೋಗುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯಕ್ಕೆ ಹಾಗೂ ದೇಶಕ್ಕೆ ಮಾರಕ ವಾಗಿದೆ ಎಂದು ಎಚ್ಚರಿಸಿದರು.
ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರಾವಳಿಯಲ್ಲಿ ಅಶಾಂತಿ, ಅಭದ್ರತೆ ಕಾಡುತ್ತಿತ್ತು. ಕಾಂಗ್ರೆಸ್ಸಿನ ಅಪಪ್ರಚಾರಕ್ಕೆ ತಲೆ ಆಡಿಸಿದರೆ ರಾಜ್ಯದ ಪರಿಸ್ಥಿತಿ ಏನಾಗಬಹುದು ಬಿಜೆಪಿ ಆಡಳಿತ ಬಂದರೆ ವಿಕಾಸ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ವಿನಾಶ ವಾಗುತ್ತದೆ. ಕಾಂಗ್ರೆಸ್ ಅಭ್ಯರ್ಥಿ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ನಲ್ಲಿ ಇರುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ರಾಜಕೀಯ ಭವಿಷ್ಯ ನುಡಿದರು.
ಡಬಲ್ ಎಂಜಿನ್ ಸರಕಾರ: ಈ ಬಾರಿ ಡಬಲ್ ಎಂಜಿನ್ ಸರಕಾರ ಬಂದರೆ ನವ ಕರ್ನಾಟಕದ ನಿರ್ಮಾಣ ವಾಗುತ್ತದೆ, ನರೇಂದ್ರ ಮೋದಿ ಕೈ ಬಲಪಡಿಸಲು ಪೂರ್ಣ ಬಹುಮತ ನೀಡಿ ಬಿಜೆಪಿ ಬಲಪಡಿಸಿ ಎಂದರು.
ಅಭಿವೃದ್ಧಿ ಹಾಗೂ ಸ್ವಚ್ಛ ಕಾರ್ಕಳದ ಪರಿಕಲ್ಪನೆಯನ್ನು ಗ್ರಾಮಗಳಲ್ಲಿ ಅಳವಡಿಸುವ ಮೂಲಕ ಅಭಿವೃದ್ಧಿಗೆ ವೇಗದೊರಕಿದೆ. 237 ಕಿಂಡಿ ಅಣೆಕಟ್ಟುಗಳ ಮೂಲಕ ಕೃಷಿ ಕ್ಷೇತ್ರಕ್ಕೆ ವೇಗ ದೊರಕಿದೆ. ಶಿಕ್ಷಣ ಕ್ಷೇತ್ರಕ್ಕೆ ಕೆಜೆ ಟಿಟಿ ಐ, ನರ್ಸಿಂಗ್ ಕಾಲೇಜು ನಿರ್ಮಾಣದ ಮೂಲಕ ಶಿಕ್ಷಣ ಕ್ಕೆ ಮಹತ್ತರ ವಾದ ಒತ್ತು ನೀಡಲಾಗಿದೆ.ಪ್ರವಾಸೋದ್ಯಮ ಮೂಲಕ ಉತ್ತೇಜನ ನೀಡುವ ಮೂಲಕ ಕಾರ್ಕಳ ದ ಹೆಮ್ಮೆ ಹೆಚ್ಚಿದೆ.
ಕರೋನಾ ಸಂಕಷ್ಟ ಸವಾಲುಗಳ ಸಂದರ್ಭದಲ್ಲಿ ಕ್ವಾರಂಟೈನ್ ಕೇಂದ್ರಗಳನ್ನು ಕಲ್ಪಿಸುವ ಮೂಲಕ ಬಿಜೆಪಿ ಮುಂಬಯಿ ಪುಣೆಯಿಂದ ಅಗಮಿಸಿದ 3500 ಜನರನ್ನು ಯಾವುದೇ ಜಾತಿ ತಾರತಮ್ಯ ಮಾಡದೆ 35 ಕ್ವಾರಂಟೈನ್ ಕೇಂದ್ರಗಳನ್ನು ತೆರೆದು ಬಿಜೆಪಿ ಸಹಕಾರ ನೀಡಿತ್ತು ಎಂದು ಇದೇ ಸಂದರ್ಭದಲ್ಲಿ ಸುನೀಲ್ ಕುಮಾರ್ ನೆನಪಿಸಿಕೊಂಡರು.
ಗ್ರಾಮ ಗ್ರಾಮಗಳ ಅಭಿವೃದ್ಧಿ: 2018 ರಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದ ಪರಿಣಾಮ ಕ್ಷೇತ್ರದ ಗ್ರಾಮ ಗ್ರಾಮಗಳ ಆಬಿವೃದ್ದಿಯಾಗಿದೆ. ಹತ್ತು ವರ್ಷಗಳ ಅಬಿವೃದ್ದಿ ದೃಷ್ಠಿಕೋನವೇ ಕಾರ್ಕಳ ಕ್ಷೇತ್ರದ ಶ್ರೀರಕ್ಷೆ ಯಾಗಿದೆ, ಶಿಕ್ಷಣ, ಪ್ರವಾಸೋದ್ಯಮ, ಮೂಲಭೂತ ಸೌಕರ್ಯ ಗಳು, ಉದ್ಯೋಗಾವಕಾಶಗಳನ್ನು ಕಲ್ಪಿಸುವಲ್ಲಿ ಬಿಜೆಪಿಯೇ ಮುಖ್ಯ ಪಾತ್ರ ವಹಿಸುತ್ತದೆ ಎಂದರು.
ಮಾಜಿ ಮಂತ್ರಿ ಪ್ರಮೋದ್ ಮಧ್ವರಾಜ್, ಮುಡುಲಾಜೆ ಮಹೇಶ್ ಶೆಟ್ಟಿ, ಬಿಜೆಪಿ ಹಿರಿಯ ಮುಖಂಡ ಎಂಕೆ ವಿಜಯಕುಮಾರ್ ,ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿದರು
ಸಭೆಯಲ್ಲಿ ಮುಂಬಯಿ ಉದ್ಯಮಿ ರತ್ನಾಕರ್ ಶೆಟ್ಟಿ, ಕರುಣಾಕರ್ ಶೆಟ್ಟಿ , ಶಶಿಕಿರಣ್ ಶೆಟ್ಟಿ ಬರೋಡ , ಎರ್ಮಾಳು ಹರೀಶ್ ಶೆಟ್ಟಿ, ಪುರಂದರ , ಪೂನಾ ವಿಶ್ವನಾಥ ಪೂಜಾರಿ , ಪ್ರಸಾದ್ ಶೆಟ್ಟಿ , ಬಾಲಕೃಷ್ಣ ಶೆಟ್ಟಿ ,ಬೆಳ್ವಾಯಿ ಸದಾನಂದ ಶೆಟ್ಟಿ , ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ, ಬಿಜೆಪಿ ಹಿರಿಯ ಮುಖಂಡರಾದ ಎಂಕೆ ವಿಜಯಕುಮಾರ್ , ಬೋಳ ಪ್ರಭಾಕರ್ ಕಾಮತ್ , ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ, , ಕ್ಯಾಪ್ಟನ್ ಗಣೇಶ್ ಕಾರ್ಣಿಕ್ , ಕಾರ್ಕಳ ಚುನಾವಣಾ ಪ್ರಭಾರಿ ಬಾಹುಬಲಿ ಪ್ರಸಾದ್, ಭಾಸ್ಕರ್ ಕೋಟ್ಯಾನ್, ಜಿಲ್ಲಾದ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಗೇರು ನಿಗಮದ ಮಾಜಿ ಅಧ್ಯಕ್ಷ ಮಣಿರಾಜ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ರವೀಂದ್ರ ಶೆಟ್ಟಿ ಬಜಗೋಳಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಸಾಣೂರು ನರಸಿಂಹ ಕಾಮತ್ ನಿರೂಪಿಸಿದರು. ಸಾಣೂರು ಕರುಣಾಕರ್ ಕೋಟ್ಯಾನ್ ಧನ್ಯವಾದ ವಿತ್ತರು.