ವೇಣೂರು: ಪುರಾತನ ದೇಗುಲಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಪಾಲ್ಗೊಳ್ಳುವುದರಿಂದ ನಮ್ಮ ಪಾಪಗಳು ಪರಿಹಾರವಾಗುತ್ತದೆ. ಪ್ರಕೃತಿಯ ಜತೆ ಜೀವನ ಸಾಗಿಸಬೇಕೇ ಹೊರತು ಪ್ರಕೃತಿಯ ವಿರುದ್ಧ ಸಲ್ಲದು. ಪ್ರಕೃತಿಯ ವಿರುದ್ಧ ನಮ್ಮ ಜೀವನ ಸಾಗಿದರೆ ಪರಶುರಾಮ ಸೃಷ್ಟಿಯ ಭೂಮಿಯೂ ಉಳಿಯದು ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದರು.
ಕರಿಮಣೇಲು ಶ್ರೀ ಕ್ಷೇತ್ರ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಎರಡನೇ ದಿನದ ಧಾರ್ಮಿಕಸಭೆಯಲ್ಲಿ ಧಾರ್ಮಿಕ ಪ್ರವಚನ ನೀಡಿ, ಜೀರ್ಣೋದ್ಧಾರದ ಬಳಿಕವು ನಾವು ದೇಗುಲಕ್ಕೆ ಆಗಮಿಸುತ್ತಾ ಇದ್ದರೆ ಬ್ರಹ್ಮಕಲಶ ಸಾರ್ಥಕವಾಗುತ್ತದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸುಕೀರ್ತಿರಾಜ ಅಜ್ರಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಯೋಜನಾಧಿಕಾರಿ ಯಶವಂತ ಎಸ್. ಮಾತನಾಡಿ, ಅಳಿಲುಸೇವೆಯಂತೆ ಎಲ್ಲರ ಸಹಕಾರದಿಂದ ದೇಗುಲ ಪುನರ್ ನಿರ್ಮಾಣದ ಅದ್ಬುತ ಕಾರ್ಯ ನಡೆದಿದೆ ಎಂದರು.
ಹೊಸಂಗಡಿ ಗ್ರಾ.ಪಂ. ಅಧ್ಯಕ್ಷ ಕರುಣಾಕರ ಪೂಜಾರಿ, ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಎ. ಜಯರಾಮ್ ಶೆಟ್ಟಿ, ಮಂಗಳೂರಿನ ಉದ್ಯಮಿ ಆನಂದ ಶೆಟ್ಟಿ, ದೇಲಂಪುರಿ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಕೆ. ಉಪಸ್ಥಿತರಿದ್ದರು.
ಬ್ರಹ್ಮಕಲಶ ಸಮಿತಿಯ ಕಾರ್ಯಾಧ್ಯಕ್ಷ ಬಾಲಕೃಷ್ಣ ಭಟ್ ದಡ್ಡು ಪ್ರಸ್ತಾವಿಸಿ, ಸ್ವಾಗತಿಸಿದರು. ಮಹಾವೀರ ಜೈನ್ ಮೂಡುಕೋಡಿಗುತ್ತು ನಿರೂಪಿಸಿ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರ. ಕಾರ್ಯದರ್ಶಿ ಜಗದೀಶ್ ನಾಯಕ್ ವಂದಿಸಿದರು.
ದೇಗುಲ ಪುನರ್ ನಿರ್ಮಾಣಕ್ಕೆ ಸಹಕಾರ ನೀಡಿದ ಬಿಸಿರೋಡ್ ಸೋಮಯಾಜಿ ವುಡ್ ವರ್ಕ್ಸ್ನ ಪ್ರಕಾಶ್ ಸೋಮಯಾಜಿ ಹಾಗೂಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಭಟ್ ಮಿಯಂದೂರು ಅವರನ್ನು ಸಮ್ಮಾನಿಸಲಾಯಿತು. ಜೀರ್ಣೋದ್ಧಾರ ಸಮಿತಿ ಪ್ರ. ಕಾರ್ಯದರ್ಶಿ ಸತೀಶ್ ಪೂಜಾರಿ ಉಜಿರ್ದಡ್ಡ ಸಮ್ಮಾನಪತ್ರ ವಾಚಿಸಿದರು.
ಇಂದಿನ ಕಾರ್ಯಕ್ರಮ
ಡಿ. ೨೭ರಂದು ಸಂಜೆ ಗಂಟೆ ೫ರಿಂದ ಸಾಂದೀಪನಿ ಶಿಶು ಮಂದಿರ ಗಾಂಧಿನಗರ ಹಾಗೂ ಭಾರತೀ ಶಿಶು ಮಂದಿರ ವೇಣೂರು ಇಲ್ಲಿನ ಪುಟಾಣಿಗಳಿಂದ ನೃತ್ಯ ಕಾರ್ಯಕ್ರಮ ಬಳಿಕ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಅವರಿಂದ ಭಾರತ ಜನನಿ ಎಂಬ ಯಕ್ಷಗಾನ ಜರಗಲಿದೆ.
ಡಿ. ೨೭ರಂದು ಬೆಳಿಗ್ಗೆ ೮ ಗಂಟೆಯಿಂದ ಕ್ಷೇತ್ರದಲ್ಲಿ ಚಂಡಿಕಾಯಾಗ, ಶಾಂತಿಹೋಮ, ಸಂಜೆ ಮಹಾಸುದರ್ಶನ ಹೋಮ, ಚಕ್ರಬ್ಜ, ಮಂಡಲ ಪೂಜೆ ಜರಗಲಿದೆ.