ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದ್ದ ಎರಡು ಅಪರಿಚಿತ ವ್ಯಕ್ತಿ ಶವಗಳ ಅಂತ್ಯಸಂಸ್ಕಾರವನ್ನು ಪೋಲಿಸರು, ನಗರಸಭೆ, ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿಯವರು ಬೀಡಿನಗುಡ್ಡೆಯ ದಫನ ಭೂಮಿಯಲ್ಲಿ ನಡೆಸಿದರು.
ಮೃತರ ವಿಳಾಸ ಪತ್ತೆಯಾಗದೆ ಇರುವುದರಿಂದ ಮಾಧ್ಯಮ ಪ್ರಕಟಣೆ ನೀಡಲಾಗಿತ್ತು. ಕಾಲಮಿತಿ ಕಳೆದರೂ ವಾರಸುದಾರರು ಸಂಪರ್ಕಿಸದೆ ಇರುವುದರಿಂದ, ಕಾನೂನು ಪ್ರಕ್ರಿಯೆ ನಡೆಸಿ ಎರಡು ಮೃತದೇಹಗಳನ್ನು ಗೌರಯುತವಾಗಿ ದಫನ ಮಾಡಲಾಯಿತು.
ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು, ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು, ಪ್ರದೀಪ್ ಅಜ್ಜರಕಾಡು, ರಾಜೇಶ್ ಕಾಪು, ಉಪಸ್ಥಿತರಿದ್ದರು. ಅಣ್ಣಪ್ಪ ಪೂಜಾರಿ, ಪ್ಲವರ ವಿಷ್ಣು ಸಹಕರಿಸಿದ್ದಾರೆ.