News Karnataka Kannada
Monday, April 29 2024
ಉಡುಪಿ

ಉಡುಪಿ: ನ್ಯೂಸ್ ಕರ್ನಾಟಕಕ್ಕೆ ಸಂದ ತುಳುನಾಡ ರಜತ ಸಂಘ ಸಿರಿ ಗೌರವ ಪ್ರಶಸ್ತಿ

Udupi: Tulunada Rajata Sangha Siri Gaurava Prashastri awarded to News Karnataka
Photo Credit : News Kannada

ಉಡುಪಿ: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಉಡುಪಿ, ಅಂಬಲಪಾಡಿ ದೇವಾಲಯದ ಭವಾನಿ ಮಂಟಪದಲ್ಲಿ ಇಂದು (ಅ.16) ಆಯೋಜಿಸಿದ್ದ ಪ್ರಪ್ರಥಮ ‘ಮುಂಬಯಿ ವಾಪಸಿಗರ ಸಮ್ಮಿಲನ 2022’ ಕಾರ್ಯಕ್ರಮದಲ್ಲಿ ಮಂಗಳೂರಿನ ವೆಬ್ ಪತ್ರಿಕೆ ‘ನ್ಯೂಸ್ ಕರ್ನಾಟಕ’ ಹಾಗೂ ಇತರ ನಾಲ್ಕು ಸಂಸ್ಥೆಗಳಿಗೆ ತುಳುನಾಡ ರಜತ ಸಂಘ ಸಿರಿ ಗೌರವ ನೀಡಲಾಯಿತು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 25 ಮಂದಿಗೆ ತುಳುನಾಡ ರಜತ ಸಿರಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮವನ್ನು ಪೂವಾಯಿ ಕನ್ನಡ ಸೇವಾ ಸಂಘ ಮುಂಬಯಿ ಮತ್ತು ಉಡುಪಿ ಜಿಲ್ಲೆಯ ರಜತ ಸಂಭ್ರಮದ ಹಿನ್ನೆಲೆಯಲ್ಲಿ ಆಯೋಜಿಸಲಾಯಿತು.

ಈ ಪ್ರಶಸ್ತಿಯನ್ನು ಸ್ಪಿಯರ್ ಹೆಡ್ ಮೀಡಿಯಾ ಸಮೂಹದ ನಿರ್ದೇಶಕ, ಬ್ರಿಯಾನ್ ಫೆರ್ನಾಂಡಿಸ್ ಮತ್ತು ಸ್ಪಿಯರ್‌ಹೆಡ್ ಅಕಾಡೆಮಿ ಪ್ರಾಂಶುಪಾಲರು ಶ್ರೀನಿವಾಸ ಪೆಜತ್ತಾಯ ಸ್ವೀಕರಿಸಿದರು.

ಸ್ಪಿಯರ್ ಹೆಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಮಾಲಿಕತ್ವದ ನ್ಯೂಸ್ ಕರ್ನಾಟಕ ವೆಬ್ ಪತ್ರಿಕೆ ಗೆ ದಶಮಾನೋತ್ಸವ ಸಂಭ್ರಮದ ಶುಭಗಳಿಗೆಯಲ್ಲಿ ತುಳುನಾಡ ರಜತ ಸಂಘ ಸಿರಿ ಗೌರವ ಪ್ರಶಸ್ತಿ ಸಂದಿರೋದು ಹೆಮ್ಮೆ ಮತ್ತು ಸಂತಸಕರ ವಿಚಾರವಾಗಿದೆ.

ನ್ಯೂಸ್ ಕರ್ನಾಟಕ.ಕಾಂ 2012ರಲ್ಲಿ ಆರಂಭಗೊಂಡು ಈಗ 60ಕ್ಕೂ ಹೆಚ್ಚು ದೇಶಗಳಲ್ಲಿ ಇರುವ ಕನ್ನಡಿಗರನ್ನು ಕನ್ನಡ ಸಂಘ ಸಂಸ್ಥೆಗಳ ಮೂಲಕ ಒಗ್ಗೂಡಿಸುತ್ತಿದೆ. ನ್ಯೂಸ್ ಕರ್ನಾಟಕ.ಕಾಂ, ನ್ಯೂಸ್ ಕನ್ನಡ.ಕಾಂ ಸುದ್ದಿ ವೆಬ್ಸೈಟ್ಗಳು ಕರ್ನಾಟಕ ಟುಡೇ ಇಂಗ್ಲಿಷ್ ಮಾಸಿಕದ ಮೂಲಕ ಕನ್ನಡ ಜನ, ನಾಡು, ನುಡಿ, ಕಲೆ, ಸಂಸ್ಕೃತಿಗಳ ಬೆಳವಣಿಗೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ.

ಸಮಸ್ತ ಕನ್ನಡಿಗರನ್ನು ಕರ್ನಾಟಕದ ಮೂಲೆ ಮೂಲೆಯಲ್ಲಿ ತಲುಪುವ ಸಲುವಾಗಿ 450 ಸ್ಥಳೀಯ ಸುದ್ದಿ ತಾಣಗಳನ್ನು ಆರಂಭಿಸುತ್ತಿದ್ದು, ಇದರಲ್ಲಿ 30 ಸುದ್ದಿ ತಾಣಗಳು ಈಗಾಗಲೇ ಸಕ್ರೀಯವಾಗಿದೆ. ಅಭ್ಯುದಯ ಪತ್ರಿಕೋದ್ಯಮಕ್ಕೆ ಬುನಾಧಿಯಾಗಿ ಸ್ಪಿಯರ್ ಹೆಡ್ ಅಕಾಡೆಮಿಯನ್ನು ವಿಲೇಜ್ ಟಿವಿ ಟ್ರಸ್ಟ್ ಮೂಲಕ ಈಗ ಆರಂಭಿಸಿದೆ.

https://youtube.com/c/newskannada

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು