ಉಡುಪಿ: ಕರಂಬಳ್ಳಿ ವಾರ್ಡಿನ ಕರಂಬಳ್ಳಿ ನಾಗಬ್ರಹ್ಮಸ್ಥಾನ ಕರೆ ಅಭಿವೃದ್ಧಿಗೆ ಶಾಸಕ ಕೆ. ರಘುಪತಿ ಭಟ್ ಅವರ ಶಿಫಾರಸ್ಸಿನ ಮೇರೆಗೆ ಸಣ್ಣ ನೀರಾವರಿ ಇಲಾಖೆಯಿಂದ 50 ಲಕ್ಷ ಅನುದಾನ ಮಂಜೂರಾಗಿದ್ದು, ಇಂದು ಶಾಸಕ ಕೆ. ರಘುಪತಿ ಭಟ್ ಅವರು ಕೆರೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯ ಗಿರಿಧರ್ ಆಚಾರ್ಯ, ಜಿಲ್ಲಾ ಬಿಜೆಪಿ ವಕ್ತಾರ ರಾಘವೇಂದ್ರ ಕಿಣಿ, ನಾಗಬ್ರಹ್ಮಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಮೇಶ್ ಬಾರಿತ್ತಾಯ ಹಾಗೂ ಶಿವರಾಮ್ ಶೆಟ್ಟಿ ನಿಟ್ಟೂರು, ಪ್ರೇಮಾನಂದ ಆಚಾರ್ಯ, ಹರೀಶ್, ಕೃಷ್ಣಮೂರ್ತಿ, ಮಹೇಶ್, ಜಯಕರ್, ಸಂಜೀವ ಸೇರಿಗಾರ್, ಲಕ್ಷ್ಮಣ್ ಸೇರಿಗಾರ್, ಗಿರೀಶ್, ಶ್ರೀನಿವಾಸ್ ಆಚಾರ್ಯ ಉಪಸ್ಥಿತರಿದ್ದರು.