ಉಡುಪಿ: ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರು ಚಾಕು, ಬಂದೂಕು ಹಿಡಿದು ಆಯುಧಪೂಜೆ ಮಾಡುವ ಮೂಲಕ ಮತ್ತೊಂದು ವಿವಾದ ಹುಟ್ಟು ಹಾಕಿದ್ದಾರೆ.
ಆಯುಧ ಪೂಜೆಯ ಅಂಗವಾಗಿ ಮುತಾಲಿಕ್ ಎರಡು ಬಂದೂಕು ಮತ್ತು ಚಾಕು ಹಿಡಿದು ಪೂಜೆ ಮಾಡಿದರು. ಉಡುಪಿಯಲ್ಲಿ ಶ್ರೀರಾಮ ಸೇನೆ ವಲಯಾಧ್ಯಕ್ಷ ಮೋಹನ್ ಭಟ್ ಅವರ ಮನೆಯಲ್ಲಿ ಪೂಜೆ ಸಲ್ಲಿಸಿದರು.
ಅವರು ಇತರ ಹಿಂದೂಗಳನ್ನು ಅದೇ ರೀತಿ ಮಾಡಲು ಪ್ರೋತ್ಸಾಹಿಸಿದರು. “ಹಿಂದೂ ಧರ್ಮ ಮತ್ತು ಭಾರತದ ಉಳಿವಿಗಾಗಿ ನಾವು ಈ ಪೂಜೆಯನ್ನು ನಡೆಸಿದ್ದೇವೆ. ಭಾರತ ಮಾತೆಯನ್ನು ಉಳಿಸಲು ಮತ್ತು ಭಾರತದ ಉಳಿವನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಬ್ಬರೂ ಕ್ಷಾತ್ರತ್ವವನ್ನು ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಮೋಹನ್ ಭಟ್, ಶ್ರೀರಾಮಸೇನೆ, ಜಿಲ್ಲಾಧ್ಯಕ್ಷ ಜಯರಾಮ ಅಂಬೆಕಲ್ಲು ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು