ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ತಾಲೂಕು ಘಟಕ, ಎಂಜಿಎಂ ಕಾಲೇಜು ಸಾಹಿತ್ಯ ಸಂಘ ಹಾಗೂ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಬುಧವಾರ ಕವಿಗೋಷ್ಠಿ ಆಯೋಜಿಸಲಾಗಿತ್ತು.
ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು, ನಿರಂತರ ಕಾವ್ಯಗಳ ಅಧ್ಯಯನ ಸಾಹಿತ್ಯದ ಬಗ್ಗೆೆ ಒಲವು ಮೂಡಿಸುತ್ತದೆ. ಈ ನಿಟ್ಟಿನಲ್ಲಿ ಯುವಜನರು ಸಾಹಿತ್ಯದ ಬಗ್ಗೆೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ ಪುತ್ತಿ ವಸಂತ್ಕುಮಾರ್ ಮಾತನಾಡಿದರು. ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್. ಪಿ. , ವಿಜಯ ಬ್ಯಾಂಕ್ ನಿವೃತ್ತ ಪ್ರಬಂಧಕ ಭುವನಪ್ರಸಾದ್ ಹೆಗ್ಡೆೆ, ಪ್ರಗತಿಪರ ಕೃಷಿಕ ರಾಮಕೃಷ್ಣ ಶರ್ಮ ಬಂಟಕಲ್ಲು ಉಪಸ್ಥಿತರಿದ್ದರು.
ಕವಯತ್ರಿ ಡಾ ಕಾತ್ಯಾಯಿನಿ ಕುಂಜಿಬೆಟ್ಟು ಕವಿಗೋಷ್ಠಿ ಸಂಯೋಜಿಸಿದರು. ಕಾಲೇಜು ಸಾಹಿತ್ಯ ಸಂಘದ ಕಾಯದರ್ಶಿ ಶೋಧನ್ ಕುಮಾರ್ ಸ್ವಾಗತಿಸಿದರು. ಕಸಪಾ ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ವಂದಿಸಿದರು.
ವಿದ್ಯಾರ್ಥಿಗಳಾದ ಶಝೀನ್ ಸಭಾ, ನಿಯತಿ ನಾಯಕ್, ಶ್ರೇಯಾ ಪೂಜಾರಿ, ಪೃಥ್ವಿ ಶ್ರೀಧರ ಹೆಗ್ಡೆೆ, ಧೀರಜ್, ಪ್ರವೀಣ್, ವೈಭವಿ, ಸ್ನೇಹಾ, ವಿನಿಷಾ, ಶಿಲ್ಪಾ ಎಸ್. , ಪಲ್ಲವಿ ಕೊಡಗು, ದಿಶಾ, ರೇಖಾ ಭಟ್ ಸ್ವರಚಿತ ಕವನ ವಾಚಿಸಿದರು.