News Karnataka Kannada
Tuesday, May 14 2024
ಸಮುದಾಯ

ಉಡುಪಿ: ಉಮಾಮಹೇಶ್ವರ ದೇವಸ್ಥಾನ ನೂತನ ಧ್ವಜಸ್ಥಂಭದ ಶೋಭಾಯಾತ್ರೆಗೆ ಕಾಣಿಯೂರು ಶ್ರೀ ಚಾಲನೆ

Udupi: Kaniyur Sri launches shobha yatra of umamaheswara temple's new flag post
Photo Credit : News Kannada

ಉಡುಪಿ: ಚಕ್ರತೀರ್ಥ ಶ್ರೀ ಉಮಾಮಹೇಶ್ವರ ದೇವಸ್ಥಾನ ಸಗ್ರಿ ಇದರ ನೂತನ ಧ್ವಜಸ್ಥಂಭದ ಶೋಭಾಯಾತ್ರೆಗೆ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು.

ಶೋಭಾ ಯಾತ್ರೆಯು ಶ್ರೀಕೃಷ್ಣ ಮಠದ ಪಾರ್ಕಿಂಗ್ ಸಮೀಪದಿಂದ ಕಲ್ಸಂಕ ಮಾರ್ಗವಾಗಿ ಗುಂಡಿಬೈಲ್, ದೊಡ್ಡಣಗುಡ್ಡೆ ಮೂಲಕ ಸಗ್ರಿ ಚಕ್ರತೀರ್ಥ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ತಲುಪಿತು. ಶೋಭಾಯಾತ್ರೆಯಲ್ಲಿ ಹಲವು‌ ಜನಪದ ಗೊಂಬೆ, ಜನತಾ ವ್ಯಾಯಾಮ‌ ಶಾಲೆಯ ಮಕ್ಕಳಿಂದ ತಾಲೀಮು, ಚೆಂಡೆ ಬಳಗ, ವಿವಿಧ ಭಜನಾ ತಂಡಗಳು ಪಾಲ್ಗೊಂಡು ಮೆರುಗು ಹೆಚ್ಚಿಸಿದವು.

ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಉದ್ಯಮಿ ಡಾ. ತಲ್ಲೂರು ಶಿವರಾಮ್ ಶೆಟ್ಟಿ, ಸಾಧು ಸಾಲ್ಯಾನ್, ಮಟ್ಟು ಲಕ್ಷ್ಮೀನಾರಾಯಣ ರಾವ್, ವಿಷ್ಣು ಪ್ರಸಾದ್ ಪಾಡಿಗಾರ್, ರಂಜನ್ ಕಲ್ಕೂರ, ಹರಿಯಪ್ಪ ಕೋಟ್ಯಾನ್, ತೋನ್ಸೆ ಮನೋಹರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ನರಹರಿ ಆಚಾರ್ಯ, ಗಿರಿಧರ್ ಆಚಾರ್ಯ, ರಮೇಶ್ ಕಾಂಚಾನ್, ರಮೇಶ್ ನಾಯಕ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೇವಸ್ಥಾನದ ಬ್ರಹ್ಮಕಲಶ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು