News Karnataka Kannada
Monday, April 29 2024
ಉಡುಪಿ

ಉಡುಪಿ: ಜ.28 ಮತ್ತು 29ರಂದು “ಹಸೆ ಚಿತ್ತಾರ” ದೇಶೀಯ ಕಲೆಯ ಸರಣಿ ಕಾರ್ಯಾಗಾರ

Udupi: "Hase Chittara", a series of workshops on indigenous art on January 28 and 29
Photo Credit : News Kannada

ಉಡುಪಿ: ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಶ್ರಯದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಚಿತ್ರಕಲಾ ಮಂದಿರ ಕಲಾಶಾಲೆ, ಆರ್ಟಿಸ್ಟ್ ಫೋರಂ ಉಡುಪಿ ಇದರ ಸಹಯೋಗದಲ್ಲಿ “ಹಸೆ ಚಿತ್ತಾರ” ದೇಶೀಯ ಕಲೆಯ ಸರಣಿ ಕಾರ್ಯಾಗಾರವನ್ನು ಜ.28 ಮತ್ತು 29ರಂದು ಉಡುಪಿ ನಗರದ ಜೋಯ್ ಅಲುಕ್ಕಾಸ್ ಜ್ಯುವೆಲರಿಯ ಹಿಂಭಾಗದಲ್ಲಿರುವ ಬಡಗುಪೇಟೆಯ ಭಾಸ ಗ್ಯಾಲರಿಯಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಾಗಾರದ ಸಂಯೋಜಕ ಜನಾರ್ದನ ಹಾವಂಜೆ ತಿಳಿಸಿದರು.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಚಿತ್ರಕಲಾಮಂದಿರ ಕಲಾಶಾಲೆಯ ನಿರ್ದೇಶಕ ಡಾ. ನಿರಂಜನ್ ಯು.ಸಿ. ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ. ಆರ್ಟಿಸ್ಟ್ ಫೋರಂನ ಅಧ್ಯಕ್ಷ ರಮೇಶ್ ರಾವ್, ಸಂಸ್ಕೃತಿ, ವಿಶ್ವ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ರವಿರಾಜ್ ಎಚ್.ಪಿ., ಭಾವನಾ ಫೌಂಡೇಶನ್‌ ನಿರ್ದೇಶಕ ಯಕ್ಷಗುರು ಪಾವಂಜೆ ಮಂಜುನಾಥ್ ರಾವ್ ಮುಖ್ಯ‌ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಮೊದಲ ದಿನದ ಕಾರ್ಯಾಗಾರದಲ್ಲಿ ಉತ್ತರ ಕನ್ನಡ ಭಾಗದ ಹಸೆ ಚಿತ್ತಾರವನ್ನು ಪರಿಚಯಿಸಲಾಗುತ್ತಿದ್ದು, ಎರಡು ವಿಭಾಗಗಳಲ್ಲಿ ಈ ಕಾರ್ಯಾಗಾರ ನಡೆಯಲಿದೆ. ಹಿರಿಯ ಕಲಾವಿದೆಯರಾದ ಸಾಗರದ ಗೌರಮ್ಮ ಹಾಗೂ ಭಾಗೀರಥಿ ಅವರು ಈ ಹಸೆ ಚಿತ್ರಗಳ ಪಾರಂಪರಿಕ ರಚನಾಕ್ರಮ, ತಾಂತ್ರಿಕತೆಗಳನ್ನೆಲ್ಲ ಕಲಿಸಿಕೊಡುವವರಿದ್ದಾರೆ. ಇದರಲ್ಲಿ 50ರಿಂದ 60 ಕಲಾ ಪ್ರಕಾರಗಳಿವೆ. ಜ.30ರಂದು ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ರವಿರಾಜ್ ಎಚ್.ಪಿ.‌ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು