ಉಡುಪಿ: ಕುಂದಾಪುರದಲ್ಲಿ ಫೆ.25ರ ಶನಿವಾರ ಸಂಜೆ ವಟ್ಟುಮುಡಿಯ ಹೆಮ್ಮಾಡಿ ಎಂಬಲ್ಲಿ ಪಿಕಪ್ ವಾಹನವೊಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದು ಐವರು ಗಾಯಗೊಂಡಿದ್ದಾರೆ.
ಆಟೋರಿಕ್ಷಾ ಚಾಲಕ ನಾರಾಯಣ್ ಮತ್ತು ಪ್ರಯಾಣಿಕ ಕುಸುಮಾ (48) ಅವರಿಗೆ ಗಂಭೀರ ಗಾಯಗಳಾಗಿದ್ದು, ಚಂದ್ರಶೇಖರ್ (53), ಚಿರಾಗ್ (17) ಮತ್ತು ಜಾನ್ವಿ (15) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಿಂದಾಗಿ ರಿಕ್ಷಾ ಡಿವೈಡರ್ ಮೇಲೆ ಹತ್ತಿದ ಪರಿಣಾಮ ಪಿಕಪ್ ವಾಹನ ರಸ್ತೆಯಿಂದ ಕೆಳಗಿಳಿದು ಹೊಳೆ ಅಂಚಿನಲ್ಲಿ ನಿಂತಿತ್ತು. ರಿಕ್ಷಾ ಮತ್ತು ಪಿಕಪ್ ಎರಡೂ ಬೈಂದೂರಿನಿಂದ ಕುಂದಾಪುರ ಕಡೆಗೆ ಹೋಗುತ್ತಿತ್ತು.
ಸ್ಥಳಕ್ಕೆ ಕುಂದಾಪುರ ಸಂಚಾರ ಪೊಲೀಸರು ಭೇಟಿ ನೀಡಿದ್ದು, ಪಿಕಪ್ ಚಾಲಕ ದರ್ಶನ್ ವಿರುದ್ಧ ಪ್ರಕರಣ ದಾಖಲಾಗಿದೆ.