ಉಡುಪಿ: ಸುತ್ತ ಮರಳಿನ ರಾಶಿ, ಉಪ್ಪು ನೀರಿನ ಬಾಧೆ ಇದರ ಮಧ್ಯೆ ಫಲವತ್ತಾದ ಕೃಷಿ ಮಾಡುವ ಮೂಲಕ ಮಲ್ಪೆಯ ಕರಾವಳಿ ಕಾವಲು ಪೊಲೀಸ್ ಪಡೆ ಸೈ ಎನಿಸಿಕೊಂಡಿದೆ.
ಕರಾವಳಿ ಕಾವಲು ಪಡೆಯ ಪೊಲೀಸರು ಸಮುದ್ರ ತೀರದಲ್ಲಿ ಸುಮಾರು ಒಂದು ಎಕರೆ ಜಾಗದಲ್ಲಿ ತೋಟಗಾರಿಕೆ ಮತ್ತು ತರಕಾರಿ ಗಿಡಗಳನ್ನು ಬೆಳೆಯುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ತೆಂಗು, ಬಾಳೆ ಸಹಿತ ವಿವಿಧ ಜಾತಿಯ ಗಿಡಗಳನ್ನು ಬೆಳೆಯಲಾಗಿದ್ದು, ಇದೀಗ ಅವು ಸಮೃದ್ಧವಾಗಿ ಬೆಳೆದು ಫಲ ನೀಡುತ್ತೇವೆ. ಇದರೊಂದಿಗೆ ವಿವಿಧ ತರಕಾರಿ ಬೆಳೆದು ಮರಳಿನ ಪ್ರದೇಶದಲ್ಲಿ ಕೃಷಿ ಮಾಡಬಹುದು ಎಂಬುವುದನ್ನು ಪೊಲೀಸರು ತೋರಿಸಿಕೊಟ್ಟಿದ್ದಾರೆ.
ಕರಾವಳಿ ಕಾವಲು ಪಡೆಯ ಪೊಲೀಸರ ಕೃಷಿ ಕಾರ್ಯವನ್ನ ಸ್ವತಃ ಜಿಲ್ಲಾಧಿಕಾರಿ ಕೂರ್ಮರಾವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರಾವಳಿ ಕಾವಲು ಪೊಲೀಸ್ ಪಡೆಯ ಅಧೀಕ್ಷಕ ಅಬ್ಧುಲ್ ಅಹದ್ ಅವರ ಮುತುವರ್ಜಿಯಿಂದ ಇದರ ಮೇಲ್ವಿಚಾರಣೆ ನಡೆಸುತ್ತಿದೆ. ಕಾವಲು ಪಡೆಯ ಒಳಗೆ ಗೋ ಶಾಲೆ ಆರಂಭಿಸುವ ಮೂಲಕ ಗಮನ ಸೆಳೆದಿದ್ದಾರೆ.