News Karnataka Kannada
Sunday, May 12 2024
ಉಡುಪಿ

ಉಡುಪಿ: ಶಾರದ ಕಲ್ಯಾಣ ಮಂಟಪ-ಬೀಡಿನಗುಡ್ಡೆ ನವೀಕೃತ ಕಾಂಕ್ರೀಟ್ ರಸ್ತೆಯಲ್ಲಿ ಬಿರುಕು

Udupi: Crack on Sarada Kalyana Mantapa-Beedinagudde renovated concrete road
Photo Credit : News Kannada

ಉಡುಪಿ: ಉತ್ತಮ ರಸ್ತೆಯನ್ನು ಕಿತ್ತು ಹೊಸದಾಗಿ ನಿರ್ಮಿಸಿರುವ ಉಡುಪಿಯ ಶಾರದ ಕಲ್ಯಾಣ ಮಂಟಪದಿಂದ ಬೀಡಿನಗುಡ್ಡೆಯವರೆಗಿನ ಕಾಂಕ್ರೀಟ್ ರಸ್ತೆಯಲ್ಲಿ ಬಿರುಕುಬಿಟ್ಟಿದೆ.

ಕಳೆದ ಹತ್ತು ದಿನಗಳ ಹಿಂದಷ್ಟೆ ನಿರ್ಮಾಣ ಮಾಡಿದ ಕಾಂಕ್ರೀಟ್ ರಸ್ತೆ ಬಿರುಕು ಬಿಟ್ಟಿರುವುದು ಅತೀ ಕಳಪೆಮಟ್ಟದ ಕಾಮಗಾರಿಗೆ ಸಾಕ್ಷಿಯಾಗಿದೆ. ಹತ್ತಾರು ವರ್ಷವಾದರೂ ಸುಸ್ಥಿತಿಯಲ್ಲಿರ ಬೇಕಾದ ಕಾಂಕ್ರೀಟ್ ರಸ್ತೆ ಕೇವಲ ಹತ್ತೇ ದಿನಕ್ಕೆ ಬಿರುಕು ಬಿಟ್ಟಿರುವುದು, ಸಾರ್ವಜನಿಕರ ಹಣ ಪೋಲಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಗುತ್ತಿಗೆದಾರರರಿಗೆ ಬಿಲ್ ಪಾವತಿಸುವದನ್ನು ತಡೆಯೊಡ್ಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ರಸ್ತೆಯು ಮೊದಲು ಸುಸ್ಥಿತಿಯಲ್ಲಿದ್ದ ಕಾಂಕ್ರೀಟ್ ರಸ್ತೆಯಾಗಿತ್ತು. ಬಹಳ ವರ್ಷಗಳ ಕಾಲ ಬಾಳಿಕೆ ಬರುತಿತ್ತು. ವಿನಾಕಾರಣವಾಗಿ ಸುವ್ಯಸ್ಥೆಯಲ್ಲಿದ್ದ ರಸ್ತೆಯನ್ನು ಅಗೆದು ಹಾಕಿದರು. ಮಾಡುತ್ತಿರುವುದು ಸರಿಯಿಲ್ಲ ಎಂದು ಪ್ರತಿಭಟಿಸಿದರೂ ಕೂಗಿಗೆ ಬೆಲೆ ಕೊಡಲಿಲ್ಲ. ಇದೀಗ ನವೀಕೃತ ರಸ್ತೆ ಕೇವಲ ಹತ್ತೇ ದಿನದಲ್ಲಿ ಬಿರುಕು ಬಿಟ್ಟಿದೆ. ಸಾರ್ವಜನಿಕರ ಹಣ ವ್ಯರ್ಥವಾಗಿರುವುದಕ್ಕೆ ಹೊಣೆ ಯಾರು..? ಈ ಬಗ್ಗೆ ಪೌರಾಯುಕ್ತರಿಗೂ ಮೌಖಿಕ ದೂರು ನೀಡಲಾಯಿತು. ಸ್ಥಳಕ್ಕೆ ಬಂದ ಪೌರಾಯುಕ್ತರು ಪರಿಶೀಲನೆ ನಡೆಸಿದ್ದು, ಅವರಿಗೂ ಸತ್ಯಾಂಶ ಕಂಡುಬಂದಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ, ಸೂಕ್ತವಾದ ಕ್ರಮ ಜರುಗಿಸಬೇಕಾಗಿದೆ ಎಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು