ಉಡುಪಿ: ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ದಾನಿಗಳಾದ ಉದ್ಯಮಿ ಮಹಮದ್ ಆಸಿಫ್ ಇಕ್ಬಾಲ್ ಮೂಡುಬೆಟ್ಟು ಅವರ ಸಹಕಾರದೊಂದಿಗೆ ಉಡುಪಿ ಜಿಲ್ಲಾಸ್ಪತ್ರೆಗೆ ಬಟ್ಟಲು ಹಸ್ತಾಂತರ ಮಾಡಿದರು.
ನಗರ ಪ್ರಮುಖ ರಸ್ತೆ, ಬೀದಿಗಳಲ್ಲಿ ಬಿದ್ದು ಆಸ್ಪತ್ರೆಗೆ ದಾಖಲಾಗುವ ನಿರ್ಗತಿಕರಿಗೆ ಆಹಾರ ಸೇವಿಸಲು ಬಟ್ಟಿಲನ ಕೊರತೆ ವಿಷಯ ತಿಳಿದ ಒಳಕಾಡು ಅವರು, ದಾನಿಗಳ ಸಹಕಾರದೊಂದಿಗೆ ಬಟ್ಟಲು ಹಸ್ತಾಂತರ ಮಾಡಿದ್ದಾರೆ. ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಡಾ. ವೀಣಾ ಅವರಿಗೆ ಬಟ್ಟಲನ್ನು ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಸುಪರಿಡೆಂಟ್ ಸತ್ಯಾವತಿ, ಕೆ. ಬಾಲಗಂಗಾಧರ ರಾವ್ ಉಪಸ್ಥಿತರಿದ್ದರು.